<p><strong>ನರಗುಂದ</strong>: ಬೆಲೆ ಕುಸಿತದಿಂದ ನೊಂದ ತಾಲ್ಲೂಕಿನ ರಡ್ಡೇರನಾಗನೂರು ಗ್ರಾಮದ ರೈತ ವೆಂಕನಗೌಡ ಪಾಟೀಲ 5 ಎಕರೆಯಲ್ಲಿ ಬೆಳೆದಿದ್ದ, ಕಟಾವಿಗೆ ಬಂದಿದ್ದ ಅಂದಾಜು 300 ಕ್ವಿಂಟಲ್ನಷ್ಟು ಈರುಳ್ಳಿಯನ್ನು ಟ್ರಾಕ್ಟರ್ನಿಂದ ನಾಶಪಡಿಸಿದ್ದಾರೆ.</p>.<p>ಲಾಕ್ಡೌನ್ ಸಡಿಲಿಕೆ ನಂತರ ಈರುಳ್ಳಿ ಕೀಳಲು ಮುಂದಾಗಿದ್ದರು. ವ್ಯಾಪಾರಿಗಳು ಕ್ವಿಂಟಲ್ಗೆ ಗರಿಷ್ಠ ₹500ಕ್ಕೆ ಕೇಳಿದರು. ಕೃಷಿಗೆ ಸುಮಾರು ₹2 ಲಕ್ಷ ಖರ್ಚು ವ್ಯಯಿಸಿದ್ದ ಅವರು, ಬೆಲೆ ಕುಸಿತದಿಂದ ಹತಾಶರಾಗಿ ಇಡೀ ಬೆಳೆಯನ್ನೇ ಹರಗಿ ನಾಶಪಡಿಸಿದರು. </p>.<p>‘ಲಾಕ್ಡೌನ್ ಇದ್ದಿದ್ದರಿಂದ 3 ತಿಂಗಳಿಂದ ಈರುಳ್ಳಿ ಕಿತ್ತಿರಲಿಲ್ಲ. ಬೆಲೆ ಏರುವ ನಿರೀಕ್ಷೆ ಇತ್ತು. ವ್ಯಾಪಾರಿಗಳು ಕೆ,ಜಿಗೆ ₹5ರಂತೆ ಕೇಳುತ್ತಾರೆ. ರೈತರ ಸಂಕಷ್ಟವನ್ನು ಯಾರೂ ಕೇಳುತ್ತಿಲ್ಲ’ ಎಂದೂ ಅವರು ನೋವು ತೋಡಿಕೊಂಡರು.</p>.<p>‘ಸರ್ಕಾರ ಪರಿಹಾರ ನೀಡಬೇಕು’ ಎಂದು ರೈತ ಸಂಘದ ಅಧ್ಯಕ್ಷ ವಿಠ್ಠಲ ಜಾಧವ ಆಗ್ರಹಿಸಿದರು. ‘ಬೆಳೆಹಾನಿ ಪರಿಹಾರ ಘೋಷಣೆಯಾಗಿದೆ. ಇನ್ನೂ ಮಾರ್ಗಸೂಚಿ ಬಂದಿಲ್ಲ. ಬಂದ ನಂತರ ಬೆಳೆಗಾರರಿಗೆ ನೆರವಾಗಲು ಒತ್ತು ನೀಡಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಸಂಜೀವ ಚವ್ಹಾಣ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಗುಂದ</strong>: ಬೆಲೆ ಕುಸಿತದಿಂದ ನೊಂದ ತಾಲ್ಲೂಕಿನ ರಡ್ಡೇರನಾಗನೂರು ಗ್ರಾಮದ ರೈತ ವೆಂಕನಗೌಡ ಪಾಟೀಲ 5 ಎಕರೆಯಲ್ಲಿ ಬೆಳೆದಿದ್ದ, ಕಟಾವಿಗೆ ಬಂದಿದ್ದ ಅಂದಾಜು 300 ಕ್ವಿಂಟಲ್ನಷ್ಟು ಈರುಳ್ಳಿಯನ್ನು ಟ್ರಾಕ್ಟರ್ನಿಂದ ನಾಶಪಡಿಸಿದ್ದಾರೆ.</p>.<p>ಲಾಕ್ಡೌನ್ ಸಡಿಲಿಕೆ ನಂತರ ಈರುಳ್ಳಿ ಕೀಳಲು ಮುಂದಾಗಿದ್ದರು. ವ್ಯಾಪಾರಿಗಳು ಕ್ವಿಂಟಲ್ಗೆ ಗರಿಷ್ಠ ₹500ಕ್ಕೆ ಕೇಳಿದರು. ಕೃಷಿಗೆ ಸುಮಾರು ₹2 ಲಕ್ಷ ಖರ್ಚು ವ್ಯಯಿಸಿದ್ದ ಅವರು, ಬೆಲೆ ಕುಸಿತದಿಂದ ಹತಾಶರಾಗಿ ಇಡೀ ಬೆಳೆಯನ್ನೇ ಹರಗಿ ನಾಶಪಡಿಸಿದರು. </p>.<p>‘ಲಾಕ್ಡೌನ್ ಇದ್ದಿದ್ದರಿಂದ 3 ತಿಂಗಳಿಂದ ಈರುಳ್ಳಿ ಕಿತ್ತಿರಲಿಲ್ಲ. ಬೆಲೆ ಏರುವ ನಿರೀಕ್ಷೆ ಇತ್ತು. ವ್ಯಾಪಾರಿಗಳು ಕೆ,ಜಿಗೆ ₹5ರಂತೆ ಕೇಳುತ್ತಾರೆ. ರೈತರ ಸಂಕಷ್ಟವನ್ನು ಯಾರೂ ಕೇಳುತ್ತಿಲ್ಲ’ ಎಂದೂ ಅವರು ನೋವು ತೋಡಿಕೊಂಡರು.</p>.<p>‘ಸರ್ಕಾರ ಪರಿಹಾರ ನೀಡಬೇಕು’ ಎಂದು ರೈತ ಸಂಘದ ಅಧ್ಯಕ್ಷ ವಿಠ್ಠಲ ಜಾಧವ ಆಗ್ರಹಿಸಿದರು. ‘ಬೆಳೆಹಾನಿ ಪರಿಹಾರ ಘೋಷಣೆಯಾಗಿದೆ. ಇನ್ನೂ ಮಾರ್ಗಸೂಚಿ ಬಂದಿಲ್ಲ. ಬಂದ ನಂತರ ಬೆಳೆಗಾರರಿಗೆ ನೆರವಾಗಲು ಒತ್ತು ನೀಡಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಸಂಜೀವ ಚವ್ಹಾಣ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>