<p><strong>ಕಾರವಾರ:</strong> ‘ಮನೆಗಳಲ್ಲಿ ನಾಲ್ಕು- ಐದು ಅಡಿ ನೀರು ತುಂಬಿ ಹಾನಿಯಾಗಿದೆ ಎಂದು ಕೇವಲ ಶೇ 50ರಷ್ಟು ಪರಿಹಾರ ನೀಡುವುದು ಸರಿಯಲ್ಲ. ಗ್ರಾಮೀಣ ಭಾಗದ ಬಹುತೇಕರ ಮನೆ ಗೋಡೆಗಳು ಮಣ್ಣಿನದ್ದಾಗಿವೆ.ಮನೆಯ ಅಡಿಪಾಯ ನೋಡಿ ಪರಿಹಾರ ನೀಡಬೇಕು’ ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.</p>.<p>ಗಂಗಾವಳಿ ನದಿಯ ಪ್ರವಾಹದಿಂದ ಹಾನಿಗೊಳಗಾದ ಅಂಕೋಲಾ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿದ ಅವರು, ನೆರೆಯಿಂದ ಆಗಿರುವ ಹಾನಿಯನ್ನು ಅವಲೋಕಿಸಿದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಅಡಿಪಾಯಕ್ಕೆ ಹೆಚ್ಚಿನ ಹಾನಿಯಾಗಿದ್ದರೆ ಪೂರ್ಣ ಪ್ರಮಾಣದ ಪರಿಹಾರ ನೀಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗೂ ತಿಳಿಸಿದ್ದೇನೆ’ ಎಂದರು.</p>.<p>ಸರಳೆಬೈಲ್ಗೆ ಮೊದಲು ಭೇಟಿ ನೀಡಿದ ಅವರು, ಮಳೆಯಿಂದಾಗಿ ಹಾನಿಗೆ ಒಳಗಾದ ಮಾಣಿ ಗೌಡ ಅವರ ಮಣ್ಣಿನ ಮನೆಯನ್ನು ಪರಿಶೀಲಿಸಿದರು. ಈ ವೇಳೆ ಮಾತನಾಡಿ, ‘ಭಾಗಶಃ ಬಿದ್ದ ಮನೆಗಳಿಗೆ ಕನಿಷ್ಠ ₹ 5,200, ಗರಿಷ್ಠ ₹ 90 ಸಾವಿರದವರೆಗೆ ಪರಿಹಾರ ನೀಡುವಂತೆ ನಾನು ಕಂದಾಯ ಸಚಿವನಾಗಿದ್ದಾಗ ಆದೇಶಿಸಿದ್ದೆ. ಅದಕ್ಕೂ ಮೊದಲು ₹ 2 ಸಾವಿರ– ₹ 3 ಸಾವಿರಪರಿಹಾರ ನೀಡುತ್ತಿದ್ದರು. ಅದನ್ನು ಬದಲಾಯಿಸಿ, ಮನೆಗೆ ಶೇ 75ರಷ್ಟುಹಾನಿಯಾದರೆ ಶೇ 100ರಷ್ಟು ಪರಿಹಾರ ಕೊಡಲು ಅವಕಾಶ ಕಲ್ಪಿಸಿದ್ದೆ’ ಎಂದುನೆನಪಿಸಿಕೊಂಡರು.</p>.<p>ಹೆಬ್ಬುಳದ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ರಾಜನಗುಳಿ, ಹೊಳೆಗದ್ದೆ, ಸಂಕದಗುಳೆ ಗ್ರಾಮದ 50ಕ್ಕೂ ಅಧಿಕ ಸಂತ್ರಸ್ತರನ್ನು ಮಾತನಾಡಿದರು. ತಮ್ಮ ಮನೆಗಳು ಬಿದ್ದು ಹೋಗಿರುವ ಹಾಗೂ ಮನೆಗೆ ತೆರಳಲು ರಸ್ತೆಗಳು ಇಲ್ಲದ ಬಗ್ಗೆ ಸಂತ್ರಸ್ತರು ಹೇಳಿಕೊಂಡರು.</p>.<p class="Subhead">ಜಾನುವಾರು ಗಣತಿಯಲ್ಲಿದ್ದರೆ ಸಾಕು:‘ಆಕಳುಗಳು ಪ್ರವಾಹದಲ್ಲಿ ಮೃತಪಟ್ಟಿವೆ. ಅವುಗಳ ಬಗ್ಗೆ ಯಾವ ದಾಖಲೆಯೂ ನಮ್ಮ ಬಳಿ ಇಲ್ಲ. ಜತೆಗೆ, ಅರಣ್ಯ ಅತಿಕ್ರಮಣ ಮಾಡಿಕೊಂಡು ಇಷ್ಟು ವರ್ಷ ವಾಸವಿದ್ದೆವು. ಇದೀಗ ಏನೂ ಇಲ್ಲದೆ ನಿರ್ಗತಿಕರಾಗಿದ್ದೇವೆ’ ಎಂದುಅಳಲು ತೋಡಿಕೊಂಡರು.</p>.<p>ಇದಕ್ಕೆ ಪ್ರತಿಕ್ರಿಯೆ ನೀಡಿದ ದೇಶಪಾಂಡೆ, ‘ಜಾನುವಾರು ಗಣತಿಯಲ್ಲಿ ನಿಮ್ಮ ದನಗಳು ಒಳಗೊಂಡಿದ್ದರೆ ಸಾಕು. ಪರಿಹಾರಕ್ಕೆ ಮತ್ತೆ ಬೇರಾವುದೇ ಪುರಾವೆಗಳು ಬೇಡ. ಈ ಬಗ್ಗೆ ಯಾರೂ ಭಯ ಪಡುವುದು ಬೇಡ’ ಎಂದರು.</p>.<p>‘ಅರಣ್ಯ ಅತಿಕ್ರಮಣ ಭೂಮಿಯಲ್ಲಿ ಮತ್ತೆ ಮನೆ ಕಟ್ಟಿಕೊಂಡರೆ ಈಗಿನ ಪರಿಸ್ಥಿತಿಯೇ ಮುಂದುವರಿಯುತ್ತದೆ. ಅತಿಕ್ರಮಣಕಾರರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜಾಗ ಹುಡುಕಿ, ಮನೆ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಿ’ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಸಲಹೆ ನೀಡಿದರು.</p>.<p class="Subhead"><strong>ಸಿಹಿ ಉಣಬಿಡಿಸಿ:</strong>ಇದೇ ವೇಳೆ ₹ 10 ಸಾವಿರ ಹಣವನ್ನು ಪಿ.ಡಿ.ಒ ಕೈಗಿತ್ತು, ‘ಮಕ್ಕಳಿಗೆ ಚಾಕಲೇಟ್, ತಿಂಡಿ, ಜನರಿಗೆ ಸಿಹಿ ಮಾಡಿಸಿ ಉಣಬಡಿಸಿ’ ಎಂದು ಹೇಳಿದರು.</p>.<p>‘ಹೆಬ್ಬುಳದ ಪರಿಹಾರ ಕೇಂದ್ರ ಮುಂದುವರಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಜತೆಗೆ, ಶೀಘ್ರವಾಗಿ ₹ 10 ಸಾವಿರ ಪರಿಹಾರದ ಹಣವನ್ನು ವಿತರಣೆ ಮಾಡಲು ತಿಳಿಸಿದ್ದೇನೆ. ಹೆಬ್ಬುಳ ಭಾಗದಲ್ಲಿ ಜಾನುವಾರಿಗೆ ಮೇವಿನ ಕೊರತೆ ಇದೆ ಎಂಬುದು ನನ್ನ ಗಮನಕ್ಕೆ ಬಂದಿದ್ದು, ಹಸಿ ಅಥವಾ ಒಣ ಮೇವಿನ ವ್ಯವಸ್ಥೆಗೂ ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ’ ಎಂದು ದೇಶಪಾಂಡೆ ತಿಳಿಸಿದರು.</p>.<p>‘ಪ್ರವಾಹ ಸಂತ್ರಸ್ತರಾದವರಲ್ಲಿ ಅನೇಕರು ಅರಣ್ಯ ಅತಿಕ್ರಮಣ ಮಾಡಿಕೊಂಡು ಬಹಳ ವರ್ಷದಿಂದ ವಾಸವಿದ್ದವರು. ಹೀಗಾಗಿ ಅವರಿಗೆ ಅದನ್ನು ಸಕ್ರಮ ಮಾಡಿಕೊಡಲು ಅವಕಾಶವಿದ್ದರೆ ಸರ್ಕಾರ ಮಟ್ಟದಲ್ಲಿ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ’ ಎಂದರು.</p>.<p>ರಾಮನಗುಳಿಯ ರಾಮನಾಥ ನಾಯ್ಕ ಅವರ ಮನೆಗೆ ಭೇಟಿ ನೀಡಿ, ನೀರಿನಲ್ಲಿ ನೆನೆದು ಹಾಳಾದ ಅಕ್ಕಿಯನ್ನು ಕೈಯಲ್ಲಿ ಹಿಡಿದು ಬೇಸರಿಸಿದರು. ‘ಸರ್ಕಾರದಿಂದ ಆಹಾರದ ಪ್ಯಾಕೆಜ್ ನೀಡುತ್ತಾರೆ. ಪಿ.ಡಿ.ಒ.ಜೊತೆ ಕೇಳಿ ಪಡೆಯಿರಿ. ಮನೆಗೆ ಹಾನಿಯಾಗಿದ್ದರೆ ಪರಿಹಾರ ನೀಡುತ್ತಾರೆ, ಭಯ ಪಡಬೇಡಿ’ ಎಂದು ಸಮಾಧಾನಿಸಿದರು.</p>.<p>ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ, ಕಾಂಗ್ರೆಸ್ ಮುಖಂಡ ಸತೀಶ್ ಸೈಲ್, ರಮಾನಂದ ನಾಯಕ, ಗುತ್ತಿಗೆದಾರ ಜಿ.ಕೆ.ಶಿವಪ್ರಸಾದ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ‘ಮನೆಗಳಲ್ಲಿ ನಾಲ್ಕು- ಐದು ಅಡಿ ನೀರು ತುಂಬಿ ಹಾನಿಯಾಗಿದೆ ಎಂದು ಕೇವಲ ಶೇ 50ರಷ್ಟು ಪರಿಹಾರ ನೀಡುವುದು ಸರಿಯಲ್ಲ. ಗ್ರಾಮೀಣ ಭಾಗದ ಬಹುತೇಕರ ಮನೆ ಗೋಡೆಗಳು ಮಣ್ಣಿನದ್ದಾಗಿವೆ.ಮನೆಯ ಅಡಿಪಾಯ ನೋಡಿ ಪರಿಹಾರ ನೀಡಬೇಕು’ ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.</p>.<p>ಗಂಗಾವಳಿ ನದಿಯ ಪ್ರವಾಹದಿಂದ ಹಾನಿಗೊಳಗಾದ ಅಂಕೋಲಾ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿದ ಅವರು, ನೆರೆಯಿಂದ ಆಗಿರುವ ಹಾನಿಯನ್ನು ಅವಲೋಕಿಸಿದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಅಡಿಪಾಯಕ್ಕೆ ಹೆಚ್ಚಿನ ಹಾನಿಯಾಗಿದ್ದರೆ ಪೂರ್ಣ ಪ್ರಮಾಣದ ಪರಿಹಾರ ನೀಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗೂ ತಿಳಿಸಿದ್ದೇನೆ’ ಎಂದರು.</p>.<p>ಸರಳೆಬೈಲ್ಗೆ ಮೊದಲು ಭೇಟಿ ನೀಡಿದ ಅವರು, ಮಳೆಯಿಂದಾಗಿ ಹಾನಿಗೆ ಒಳಗಾದ ಮಾಣಿ ಗೌಡ ಅವರ ಮಣ್ಣಿನ ಮನೆಯನ್ನು ಪರಿಶೀಲಿಸಿದರು. ಈ ವೇಳೆ ಮಾತನಾಡಿ, ‘ಭಾಗಶಃ ಬಿದ್ದ ಮನೆಗಳಿಗೆ ಕನಿಷ್ಠ ₹ 5,200, ಗರಿಷ್ಠ ₹ 90 ಸಾವಿರದವರೆಗೆ ಪರಿಹಾರ ನೀಡುವಂತೆ ನಾನು ಕಂದಾಯ ಸಚಿವನಾಗಿದ್ದಾಗ ಆದೇಶಿಸಿದ್ದೆ. ಅದಕ್ಕೂ ಮೊದಲು ₹ 2 ಸಾವಿರ– ₹ 3 ಸಾವಿರಪರಿಹಾರ ನೀಡುತ್ತಿದ್ದರು. ಅದನ್ನು ಬದಲಾಯಿಸಿ, ಮನೆಗೆ ಶೇ 75ರಷ್ಟುಹಾನಿಯಾದರೆ ಶೇ 100ರಷ್ಟು ಪರಿಹಾರ ಕೊಡಲು ಅವಕಾಶ ಕಲ್ಪಿಸಿದ್ದೆ’ ಎಂದುನೆನಪಿಸಿಕೊಂಡರು.</p>.<p>ಹೆಬ್ಬುಳದ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ರಾಜನಗುಳಿ, ಹೊಳೆಗದ್ದೆ, ಸಂಕದಗುಳೆ ಗ್ರಾಮದ 50ಕ್ಕೂ ಅಧಿಕ ಸಂತ್ರಸ್ತರನ್ನು ಮಾತನಾಡಿದರು. ತಮ್ಮ ಮನೆಗಳು ಬಿದ್ದು ಹೋಗಿರುವ ಹಾಗೂ ಮನೆಗೆ ತೆರಳಲು ರಸ್ತೆಗಳು ಇಲ್ಲದ ಬಗ್ಗೆ ಸಂತ್ರಸ್ತರು ಹೇಳಿಕೊಂಡರು.</p>.<p class="Subhead">ಜಾನುವಾರು ಗಣತಿಯಲ್ಲಿದ್ದರೆ ಸಾಕು:‘ಆಕಳುಗಳು ಪ್ರವಾಹದಲ್ಲಿ ಮೃತಪಟ್ಟಿವೆ. ಅವುಗಳ ಬಗ್ಗೆ ಯಾವ ದಾಖಲೆಯೂ ನಮ್ಮ ಬಳಿ ಇಲ್ಲ. ಜತೆಗೆ, ಅರಣ್ಯ ಅತಿಕ್ರಮಣ ಮಾಡಿಕೊಂಡು ಇಷ್ಟು ವರ್ಷ ವಾಸವಿದ್ದೆವು. ಇದೀಗ ಏನೂ ಇಲ್ಲದೆ ನಿರ್ಗತಿಕರಾಗಿದ್ದೇವೆ’ ಎಂದುಅಳಲು ತೋಡಿಕೊಂಡರು.</p>.<p>ಇದಕ್ಕೆ ಪ್ರತಿಕ್ರಿಯೆ ನೀಡಿದ ದೇಶಪಾಂಡೆ, ‘ಜಾನುವಾರು ಗಣತಿಯಲ್ಲಿ ನಿಮ್ಮ ದನಗಳು ಒಳಗೊಂಡಿದ್ದರೆ ಸಾಕು. ಪರಿಹಾರಕ್ಕೆ ಮತ್ತೆ ಬೇರಾವುದೇ ಪುರಾವೆಗಳು ಬೇಡ. ಈ ಬಗ್ಗೆ ಯಾರೂ ಭಯ ಪಡುವುದು ಬೇಡ’ ಎಂದರು.</p>.<p>‘ಅರಣ್ಯ ಅತಿಕ್ರಮಣ ಭೂಮಿಯಲ್ಲಿ ಮತ್ತೆ ಮನೆ ಕಟ್ಟಿಕೊಂಡರೆ ಈಗಿನ ಪರಿಸ್ಥಿತಿಯೇ ಮುಂದುವರಿಯುತ್ತದೆ. ಅತಿಕ್ರಮಣಕಾರರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜಾಗ ಹುಡುಕಿ, ಮನೆ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಿ’ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಸಲಹೆ ನೀಡಿದರು.</p>.<p class="Subhead"><strong>ಸಿಹಿ ಉಣಬಿಡಿಸಿ:</strong>ಇದೇ ವೇಳೆ ₹ 10 ಸಾವಿರ ಹಣವನ್ನು ಪಿ.ಡಿ.ಒ ಕೈಗಿತ್ತು, ‘ಮಕ್ಕಳಿಗೆ ಚಾಕಲೇಟ್, ತಿಂಡಿ, ಜನರಿಗೆ ಸಿಹಿ ಮಾಡಿಸಿ ಉಣಬಡಿಸಿ’ ಎಂದು ಹೇಳಿದರು.</p>.<p>‘ಹೆಬ್ಬುಳದ ಪರಿಹಾರ ಕೇಂದ್ರ ಮುಂದುವರಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಜತೆಗೆ, ಶೀಘ್ರವಾಗಿ ₹ 10 ಸಾವಿರ ಪರಿಹಾರದ ಹಣವನ್ನು ವಿತರಣೆ ಮಾಡಲು ತಿಳಿಸಿದ್ದೇನೆ. ಹೆಬ್ಬುಳ ಭಾಗದಲ್ಲಿ ಜಾನುವಾರಿಗೆ ಮೇವಿನ ಕೊರತೆ ಇದೆ ಎಂಬುದು ನನ್ನ ಗಮನಕ್ಕೆ ಬಂದಿದ್ದು, ಹಸಿ ಅಥವಾ ಒಣ ಮೇವಿನ ವ್ಯವಸ್ಥೆಗೂ ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ’ ಎಂದು ದೇಶಪಾಂಡೆ ತಿಳಿಸಿದರು.</p>.<p>‘ಪ್ರವಾಹ ಸಂತ್ರಸ್ತರಾದವರಲ್ಲಿ ಅನೇಕರು ಅರಣ್ಯ ಅತಿಕ್ರಮಣ ಮಾಡಿಕೊಂಡು ಬಹಳ ವರ್ಷದಿಂದ ವಾಸವಿದ್ದವರು. ಹೀಗಾಗಿ ಅವರಿಗೆ ಅದನ್ನು ಸಕ್ರಮ ಮಾಡಿಕೊಡಲು ಅವಕಾಶವಿದ್ದರೆ ಸರ್ಕಾರ ಮಟ್ಟದಲ್ಲಿ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ’ ಎಂದರು.</p>.<p>ರಾಮನಗುಳಿಯ ರಾಮನಾಥ ನಾಯ್ಕ ಅವರ ಮನೆಗೆ ಭೇಟಿ ನೀಡಿ, ನೀರಿನಲ್ಲಿ ನೆನೆದು ಹಾಳಾದ ಅಕ್ಕಿಯನ್ನು ಕೈಯಲ್ಲಿ ಹಿಡಿದು ಬೇಸರಿಸಿದರು. ‘ಸರ್ಕಾರದಿಂದ ಆಹಾರದ ಪ್ಯಾಕೆಜ್ ನೀಡುತ್ತಾರೆ. ಪಿ.ಡಿ.ಒ.ಜೊತೆ ಕೇಳಿ ಪಡೆಯಿರಿ. ಮನೆಗೆ ಹಾನಿಯಾಗಿದ್ದರೆ ಪರಿಹಾರ ನೀಡುತ್ತಾರೆ, ಭಯ ಪಡಬೇಡಿ’ ಎಂದು ಸಮಾಧಾನಿಸಿದರು.</p>.<p>ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ, ಕಾಂಗ್ರೆಸ್ ಮುಖಂಡ ಸತೀಶ್ ಸೈಲ್, ರಮಾನಂದ ನಾಯಕ, ಗುತ್ತಿಗೆದಾರ ಜಿ.ಕೆ.ಶಿವಪ್ರಸಾದ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>