<p><strong>ರಾಯಚೂರು:</strong> ಅಮೆರಿಕದ ಟೆಕ್ಸಾಸ್ ಯುನಿರ್ವಸಿಟಿ ಆಫ್ ಎಂಜಿನಿಯರಿಂಗ್ನಲ್ಲಿ ಎಂ.ಟೆಕ್ ಓದುತ್ತಿದ್ದ ಜಿಲ್ಲೆಯ ಸಿಂಧನೂರು ನಗರದ ಶ್ರೀಪುರಂ ಜಂಕ್ಷನ್ ನಿವಾಸಿಅಜೇಯ ಕುಮಾರ್ ಮೋಡಿ (23) ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.</p>.<p>ಅವರು ಟೆಕ್ಸಾಸ್ ಬಳಿಯ ಟರ್ನರ್ ವಾಟರ್ ಫಾಲ್ಸ್ನಲ್ಲಿ ಮುಳುಗುತ್ತಿದ್ದ ಗೆಳೆಯಕೌಶಿಕ್ನನ್ನುಬದುಕಿಸುವುದಕ್ಕೆ ಹೋದಾಗ ನೀರಿನಲ್ಲಿ ಮುಳುಗಿದ್ದಾರೆ.</p>.<p>ಆಂಧ್ರ ಪ್ರದೇಶದ ನಲ್ಲೂರಿನಕೌಶಿಕ್ ಜತೆಗೆಓಕ್ಲಹ್ಯಾಮ್ನ ಟರ್ನರ್ ವಾಟರ್ ಫಾಲ್ಸ್ಗೆ ಹೋಗಿದ್ದರು. ನೀರಿಗಿಳಿದ ಕೌಶಿಕ್ ಮುಳುಗುತ್ತಿರುವುದನ್ನು ಕಂಡು ರಕ್ಷಿಸಲು ಪ್ರಯತ್ನಿಸಿದ್ದಾರೆ. ಕೈಹಿಡಿದು ಮೇಲೆ ತರುವ ಪ್ರಯತ್ನದಲ್ಲಿ ಅಜೇಯ ಕುಮಾರ್ ಸಹ ನೀರಿನ ಸೆಳೆತಕ್ಕೆ ಸಿಕ್ಕಿದ್ದಾರೆ.ಒಂದು ಗಂಟೆಗಳ ಕಾಲಶೋಧ ನಡೆಸಿದ ಬಳಿಕಮೃತದೇಹಗಳನ್ನುಹೊರತೆಗೆಯಲಾಗಿದೆ.</p>.<p>ಅಜೇಯ ಕುಮಾರ್ ತಂದೆ ಶ್ರೀನಿವಾಸ್ ರೈತರು. ಪುತ್ರನ ಸಾವಿನಿಂದ ಕುಟುಂಬದ ಸದಸ್ಯರೆಲ್ಲರೂ ಶೋಕದಲ್ಲಿ ಮುಳುಗಿದ್ದಾರೆ. ಮೃತದೇಹವು ಸಿಂಧನೂರಿಗೆ ಶುಕ್ರವಾರಸಂಜೆ ಬರಬಹುದು ಎಂದು ಕುಟುಂಬದ ಸಂಬಂಧಿಗಳು ತಿಳಿಸಿದ್ದಾರೆ.</p>.<p>ಸಿಂಧನೂರಿನಲ್ಲಿ ಪ್ರೌಢಶಾಲೆ, ಬಳ್ಳಾರಿಯಲ್ಲಿ ಪಿಯು ಶಿಕ್ಷಣಹಾಗೂ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸಿದ ಬಳಿಕ ಉನ್ನತ ಶಿಕ್ಷಣಕ್ಕಾಗಿ ಅಜೇಯ ಅವರು ಅಮೆರಿಕಕ್ಕೆ ತೆರಳಿ ಒಂದು ವರ್ಷವಾಗಿತ್ತು.</p>.<p>ಮಾರ್ಚ್ 28ಕ್ಕೆ ಸಿಂಧನೂರು ಮೂಲದವೈದ್ಯರೊಬ್ಬರ ಮೃತದೇಹ ಅಮೆರಿಕಾದ ನ್ಯೂಜೆರ್ಸಿಯಲ್ಲಿರುವ ಆಸ್ಪತ್ರೆಯ ಆವರಣದಲ್ಲಿ ಪತ್ತೆಯಾಗಿತ್ತು. ಅನುಮಾನಾಸ್ಪದ ರೀತಿ ಸಾವಿಗೀಡಾಗಿದ್ದ ವ್ಯಕ್ತಿಸಿಂಧನೂರಿನಗಾಂಧಿನಗರದ ನಿವಾಸಿನಂದಿಗಂಮಂದೀಪ್(28) ಎಂದು ಗುರುತಿಸಲಾಗಿತ್ತು. ಅವರುಅಮೆರಿಕದ ಸೇಂಟ್ಪೀಟರ್ಸ್ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ಪದವಿಗೆ ವ್ಯಾಸಂಗ ಮಾಡುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ಅಮೆರಿಕದ ಟೆಕ್ಸಾಸ್ ಯುನಿರ್ವಸಿಟಿ ಆಫ್ ಎಂಜಿನಿಯರಿಂಗ್ನಲ್ಲಿ ಎಂ.ಟೆಕ್ ಓದುತ್ತಿದ್ದ ಜಿಲ್ಲೆಯ ಸಿಂಧನೂರು ನಗರದ ಶ್ರೀಪುರಂ ಜಂಕ್ಷನ್ ನಿವಾಸಿಅಜೇಯ ಕುಮಾರ್ ಮೋಡಿ (23) ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.</p>.<p>ಅವರು ಟೆಕ್ಸಾಸ್ ಬಳಿಯ ಟರ್ನರ್ ವಾಟರ್ ಫಾಲ್ಸ್ನಲ್ಲಿ ಮುಳುಗುತ್ತಿದ್ದ ಗೆಳೆಯಕೌಶಿಕ್ನನ್ನುಬದುಕಿಸುವುದಕ್ಕೆ ಹೋದಾಗ ನೀರಿನಲ್ಲಿ ಮುಳುಗಿದ್ದಾರೆ.</p>.<p>ಆಂಧ್ರ ಪ್ರದೇಶದ ನಲ್ಲೂರಿನಕೌಶಿಕ್ ಜತೆಗೆಓಕ್ಲಹ್ಯಾಮ್ನ ಟರ್ನರ್ ವಾಟರ್ ಫಾಲ್ಸ್ಗೆ ಹೋಗಿದ್ದರು. ನೀರಿಗಿಳಿದ ಕೌಶಿಕ್ ಮುಳುಗುತ್ತಿರುವುದನ್ನು ಕಂಡು ರಕ್ಷಿಸಲು ಪ್ರಯತ್ನಿಸಿದ್ದಾರೆ. ಕೈಹಿಡಿದು ಮೇಲೆ ತರುವ ಪ್ರಯತ್ನದಲ್ಲಿ ಅಜೇಯ ಕುಮಾರ್ ಸಹ ನೀರಿನ ಸೆಳೆತಕ್ಕೆ ಸಿಕ್ಕಿದ್ದಾರೆ.ಒಂದು ಗಂಟೆಗಳ ಕಾಲಶೋಧ ನಡೆಸಿದ ಬಳಿಕಮೃತದೇಹಗಳನ್ನುಹೊರತೆಗೆಯಲಾಗಿದೆ.</p>.<p>ಅಜೇಯ ಕುಮಾರ್ ತಂದೆ ಶ್ರೀನಿವಾಸ್ ರೈತರು. ಪುತ್ರನ ಸಾವಿನಿಂದ ಕುಟುಂಬದ ಸದಸ್ಯರೆಲ್ಲರೂ ಶೋಕದಲ್ಲಿ ಮುಳುಗಿದ್ದಾರೆ. ಮೃತದೇಹವು ಸಿಂಧನೂರಿಗೆ ಶುಕ್ರವಾರಸಂಜೆ ಬರಬಹುದು ಎಂದು ಕುಟುಂಬದ ಸಂಬಂಧಿಗಳು ತಿಳಿಸಿದ್ದಾರೆ.</p>.<p>ಸಿಂಧನೂರಿನಲ್ಲಿ ಪ್ರೌಢಶಾಲೆ, ಬಳ್ಳಾರಿಯಲ್ಲಿ ಪಿಯು ಶಿಕ್ಷಣಹಾಗೂ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸಿದ ಬಳಿಕ ಉನ್ನತ ಶಿಕ್ಷಣಕ್ಕಾಗಿ ಅಜೇಯ ಅವರು ಅಮೆರಿಕಕ್ಕೆ ತೆರಳಿ ಒಂದು ವರ್ಷವಾಗಿತ್ತು.</p>.<p>ಮಾರ್ಚ್ 28ಕ್ಕೆ ಸಿಂಧನೂರು ಮೂಲದವೈದ್ಯರೊಬ್ಬರ ಮೃತದೇಹ ಅಮೆರಿಕಾದ ನ್ಯೂಜೆರ್ಸಿಯಲ್ಲಿರುವ ಆಸ್ಪತ್ರೆಯ ಆವರಣದಲ್ಲಿ ಪತ್ತೆಯಾಗಿತ್ತು. ಅನುಮಾನಾಸ್ಪದ ರೀತಿ ಸಾವಿಗೀಡಾಗಿದ್ದ ವ್ಯಕ್ತಿಸಿಂಧನೂರಿನಗಾಂಧಿನಗರದ ನಿವಾಸಿನಂದಿಗಂಮಂದೀಪ್(28) ಎಂದು ಗುರುತಿಸಲಾಗಿತ್ತು. ಅವರುಅಮೆರಿಕದ ಸೇಂಟ್ಪೀಟರ್ಸ್ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ಪದವಿಗೆ ವ್ಯಾಸಂಗ ಮಾಡುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>