ದಾವಣಗೆರೆಯನ್ನು ಮಧ್ಯಕರ್ನಾಟಕ ಎಂದು ಕರೆಯಲಾಗುತ್ತದೆ. ಕೊರೊನಾ ಸೋಂಕಿನಲ್ಲಿಯೂ ಅತಿ ಹೆಚ್ಚು ಅಥವಾ ಅತಿ ಕಡಿಮೆ ಇರುವ ಜಿಲ್ಲೆಯಾಗದೇ ಮಧ್ಯದಲ್ಲಿಯೇ ಇದೆ. ಜಿಲ್ಲೆಯಲ್ಲಿ ಮೊದಲ ಅಲೆಯು ನಗರಗಳಲ್ಲಿ ಹೆಚ್ಚು ಕಾಣಿಸಿಕೊಂಡಿತ್ತು. ಎರಡನೇ ಅಲೆಯು ನಗರಗಳ ಜತೆಗೆ ಹಳ್ಳಿಗಳನ್ನೂ ಬಾಧಿಸುತ್ತಿದೆ. ನ್ಯಾಮತಿ ತಾಲ್ಲೂಕಿನ ರಾಮೇಶ್ವರ ಎಂಬ ಪುಟ್ಟ ಗ್ರಾಮವೊಂದರಲ್ಲಿಯೇ 65ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಹೊನ್ನಾಳಿ ತಾಲ್ಲೂಕಿನ ಕೂಲಂಬಿಯಲ್ಲಿ ಅರ್ಧ ಶತಕದ ಗಡಿ ದಾಟಿದೆ. ಶೀತ, ಜ್ವರ, ಕೆಮ್ಮು ಆರಂಭಗೊಂಡಾಗ ಕೊರೊನಾ ಪರೀಕ್ಷೆ ಮಾಡಿಸದೇ ಹತ್ತಿರದ ವೈದ್ಯರಿಂದ ಗುಳಿಗೆ ತಗೊಂಡು ಹೋಗಿರುವುದೇ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಪ್ರಜಾವಾಣಿ ತಂಡ ಎಲ್ಲ ತಾಲ್ಲೂಕುಗಳ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದಾಗ ಇಂಥ ಸಮಸ್ಯೆಗಳು ಬೆಳಕಿಗೆ ಬಂದವು. ಅಸರ ವರದಿ ಇಲ್ಲಿದೆ ನೋಡಿ.