ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಕೋವಿಡ್ ಲಸಿಕೆಗೆ ಹಾಹಾಕಾರ ಉಂಟಾಗಿದೆ. ಹಳ್ಳಿಗಳ ಜನರು ಲಸಿಕೆಗಾಗಿ ತಾಲ್ಲೂಕು ಕೇಂದ್ರಕ್ಕೇ ಬರಬೇಕಾಗಿದೆ. ಪ್ರಾಥಮಿಕ ವೈದ್ಯಕೀಯ ಕೇಂದ್ರಗಳಿಗೆ ಲಸಿಕೆ ಸರಬರಾಜಾಗುತ್ತಿಲ್ಲ. ಬಂದರೂ 10–20 ಡೋಸ್ಗಳು ಮಾತ್ರ ಬರುತ್ತಿವೆ. ಒಂದು ರೀತಿಯಲ್ಲಿ ನೆಪಕ್ಕಷ್ಟೇ ಪಿಎಚ್ಸಿಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಹೀಗಾಗಿ ತಾಲ್ಲೂಕು ಕೇಂದ್ರದಲ್ಲಿ ನೂಕು ನುಗ್ಗಲು ಉಂಟಾಗುತ್ತಿದೆ. ಧಾವಂತ, ಗೊಂದಲದಲ್ಲಿ ಜಗಳಗಳಾಗುತ್ತಿವೆ.