ಉದಾಹರಣೆಗೆ, ಸಂಕಲನದ ಮೊದಲ ಕಥೆಯಲ್ಲಿ ‘ಶ್ರೀಗಂಧ’ ಸೂಸುವ ಸ್ಮೃತಿಯೇ ಕಥೆಯ ಜೀವಾಳ. ತಂದೆಯ ಸಾವಿನ ದುಃಖದ ನಡುವೆಯೂ ‘ನಾಗೇಶ’ ಮಲೆನಾಡಿನ ಚಿತ್ರಣವನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತಾ ಸಾಗುವ ಕಥಾಪ್ರವೇಶ ಇಲ್ಲಿ ಉಲ್ಲೇಖಾರ್ಹ. ಶ್ರೀಗಂಧದ ಕೊರಡಿನ ಮೇಲೆ ಅಕ್ಷರರೂಪದಲ್ಲಿದ್ದ ‘ಸೀನ’, ಅಕ್ಷರಶಃ ಕಥೆಯಲ್ಲಿ ಬಿಚ್ಚಿಕೊಳ್ಳುತ್ತಾ ಹೋದಾಗ ‘ನಾಗೇಶ’ ಕನಸು, ಭ್ರಮೆಯ ಸುಳಿಯೊಳಗೆ ಸಿಲುಕುತ್ತಾನೆ.ಇಲ್ಲಿನ ಕಥನಕೌಶಲ ಮೆಚ್ಚುವಂಥದು.