ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ.24ರ ವರೆಗೆ ಪುರಂದರದಾಸರ ಸಂಗೀತ ಆರಾಧನೆ: ಪ್ರಜಾವಾಣಿಯಲ್ಲಿ ನೇರ ಪ್ರಸಾರ

Last Updated 21 ಅಕ್ಟೋಬರ್ 2021, 1:55 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ‘ಸಂತ ಪುರಂದರದಾಸರ ಆರಾಧನಾ ಸಮಿತಿ’ ಸಹಯೋಗದಲ್ಲಿ ಅಕ್ಟೋಬರ್‌ 20ರಿಂದ 24ರ ವರೆಗೆ ಪುರಂದರದಾಸರ 'ಸಂಗೀತ ಆರಾಧನೆ' ಕಾರ್ಯಕ್ರಮ ಹಮ್ಮಿಕೊಂಡಿದೆ.

ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಛಯ ಭವನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

ಅಕ್ಟೋಬರ್ 20ರಂದು ಬುಧವಾರ ಸಂಜೆ 4ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ನಿತ್ಯ ಸಂಜೆ 5ರಿಂದ ಹೆಸರಾಂತ ಸಂಗೀತ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು, ಪ್ರಜಾವಾಣಿ ಫೇಸ್‌ಬುಕ್ (fb.com/prajavani/net) ಪುಟದಲ್ಲಿ ನೇರ ಪ್ರಸಾರ ಕಾಣಲಿವೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಆರಾಧನಾ ಸಮಿತಿಯ ಪೋಷಕ ವಿದ್ಯಾ ಭೂಷಣ, ಕನ್ನಡ–ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ, ಆರಾಧನಾ ಸಮಿತಿ ಅಧ್ಯಕ್ಷ ಟಿ.ಎಸ್.ನಾಗಾಭರಣ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಅವರು ಕಾರ್ಯಕ್ರಮದ ವಿನ್ಯಾಸ ಮತ್ತು ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಕರ್ನಾಟಕ ಸಂಗೀತ ಪಿತಾಮಹ ಎಂದೇ ಖ್ಯಾತರಾಗಿರುವ ಪುರಂದರ ದಾಸರು ಕಲಾಜಗತ್ತಿಗೆ, ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರಿಗೆ ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಕೀರ್ತನೆ, ಭಜನೆ, ಸುಗಮ ಸಂಗೀತ, ಭರತ ನಾಟ್ಯ, ಕೂಚುಪುಡಿ, ರಂಗ ಗೀತೆ, ಜಾನಪದ ಗೀತೆ ಮುಂತಾದ ಪ್ರಕಾರಗಳ ವಿದ್ವಾಂಸರೂ ಕಲಾ ಸೇವೆ ಸಲ್ಲಿಸಿ ಒಟ್ಟಾಗಿ 'ನವರತ್ನ ಮಾಲಿಕೆ' ಗೋಷ್ಠಿ ಗಾಯನ ಗೌರವ ಸಲ್ಲಿಸಲಿದ್ದಾರೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಕಾರ್ಯಕ್ರಮದ ಪಟ್ಟಿ ಇಲ್ಲಿದೆ:

ಅಕ್ಟೋಬರ್‌ 20, ಬುಧವಾರ

ಸಂಜೆ 4ಕ್ಕೆ ಉದ್ಘಾಟನೆ

ಉದ್ಘಾಟನೆ:ವಿ.ಸುನಿಲ್ ಕುಮಾರ್,ಕನ್ನಡ ಮತ್ತು ಸಂಸ್ಕೃತಿ ಸಚಿವರು

ಅತಿಥಿಗಳು,

ಡಾ.ವಿದ್ಯಾ ಭೂಷಣ,ಆರಾಧನಾ ಸಮಿತಿಯ ಪೋಷಕ

ಎಸ್.ರಂಗಪ್ಪ,ಕನ್ನಡ–ಸಂಸ್ಕೃತಿ ಇಲಾಖೆ ನಿರ್ದೇಶಕ

ಟಿ.ಎಸ್.ನಾಗಾಭರಣ –ಆರಾಧನಾ ಸಮಿತಿ ಅಧ್ಯಕ್ಷ

ಶ್ರೀನಿವಾಸ ಜಿ. ಕಪ್ಪಣ್ಣ, ರಂಗಕರ್ಮಿ,ಕಾರ್ಯಕ್ರಮದ ವಿನ್ಯಾಸ ಮತ್ತು ನಿರ್ವಹಣೆ

ಸಂಜೆ 5:00ಕ್ಕೆ

ವಿದ್ವಾನ್ ಮಾರುತಿ ಪ್ರಸಾದ್ ಎಸ್. ಆರ್.– ಗಾಯನ
ವಿದ್ವಾನ್ ಜೆ. ಕೆ. ಶ್ರೀಧರ್– ಪಿಟೀಲು
ವಿದ್ವಾನ್ ಎ. ಎಸ್. ಎನ್. ಸ್ವಾಮಿ– ಮೃದಂಗ

ಸಂಜೆ 5:20ಕ್ಕೆ

ಸಮನ್ವಯ ಕಲಾಕೇಂದ್ರದ ಶ್ರೀ ತಿರುಮಲೆ ಶ್ರೀನಿವಾಸ ಅವರ ಶಿಷ್ಯರಿಂದ ಪುರಂದರದಾಸರ ಕೃತಿಗಳು– ಗಾಯನ
ವಿದ್ವಾನ್ ಟಿ. ಎಸ್. ಕೃಷ್ಣಮೂರ್ತಿ– ಪಿಟೀಲು
ವಿದ್ವಾನ್ ನೇಸರ ಭಾರ್ಗವ – ಮೃದಂಗ

ಸಂಜೆ 5:40ಕ್ಕೆ

ವಿದುಷಿ ರೇವತಿ ಕಾಮತ್– ವೀಣಾ
ವಿದ್ವಾನ್ ಎಸ್. ವಿ. ಗಿರಿಧರ್– ಮೃದಂಗ

ಸಂಜೆ 6:00ಕ್ಕೆ

ಡಾ.ಸುಚೇತನ್ ರಂಗಸ್ವಾಮಿ - ಗಾಯನ
ವಿದುಷಿ ನಳಿನ ಮೋಹನ್ - ಪಿಟೀಲು
ವಿದ್ವಾನ್ ಎ. ಎಸ್. ಎನ್. ಸ್ವಾಮಿ -ಮೃದಂಗ

ಸಂಜೆ 6:20ಕ್ಕೆ

ವಿದುಷಿ ನಾಗಚಂದ್ರಿಕಾ ಭಟ್– ಸುಗಮ ಸಂಗೀತ
ವಿದ್ವಾನ್ ಪುಣ್ಯೇಶ್ ಕುಮಾರ್– ಕೀ ಬೋರ್ಡ್
ವಿದ್ವಾನ್ ಮಾರುತಿ ಪ್ರಸಾದ್ –ತಬಲ

ಸಂಜೆ 6:40 ಕ್ಕೆ

ಡಾ. ಆರ್. ಚಂದ್ರಿಕಾ– ಗಾಯನ
ವಿದ್ವಾನ್ ಜೆ. ಕೆ. ಶ್ರೀಧರ್– ಪಿಟೀಲು
ವಿದ್ವಾನ್ ಎಸ್. ವಿ. ಗಿರಿಧರ್– ಮೃದಂಗ

ಸಂಜೆ 7:00 ಕ್ಕೆ

ವಿದ್ವಾನ್ ಬಿ.ಕೆ. ಅನಂತರಾಮ್– ಕೊಳಲು
ವಿದುಷಿ ನಳಿನ ಮೋಹನ್– ಪಿಟೀಲು
ವಿದ್ವಾನ್ ಪೃಥ್ವಿ ಕೃಷ್ಣ –ಮೃದಂಗ

ಸಂಜೆ 7:20 ಕ್ಕೆ

ಡಾ. ಶ್ರೀಕಾಂತಮ್ ನಾಗೇಂದ್ರ ಶಾಸ್ತ್ರಿ - ಗಾಯನ
ವಿದ್ವಾನ್ ಟಿ. ಎಸ್. ಕೃಷ್ಣಮೂರ್ತಿ - ಪಿಟೀಲು
ವಿದ್ವಾನ್ ಎಸ್. ವಿ. ಗಿರಿಧರ್ - ಮೃದಂಗ

ಸಂಜೆ 7:40 ಕ್ಕೆ

ವಿದ್ವಾನ್ ಡಿ.ಬಾಲಕೃಷ್ಣ - ವೀಣಾ ವಾದನ
ವಿದ್ವಾನ್ ಎ. ಎಸ್. ಎನ್. ಸ್ವಾಮಿ - ಮೃದಂಗ
ವಿದ್ವಾನ್ ಎಸ್. ರಾಘವೇಂದ್ರ ಪ್ರಕಾಶ್ - ಘಟ

ಸಂಜೆ 8:00 ಕ್ಕೆ

ವಿದ್ವಾನ್ ಸತ್ಯನಾರಾಯಣ ರಾಜು - ಭರತ ನಾಟ್ಯ

ಸಂಜೆ 8:20ಕ್ಕೆ

ಚಿತ್ಕಲ ನೃತ್ಯ ಶಾಲೆ
ವಿದ್ವಾನ್ ಪಿ.ಪ್ರವೀಣ್ ಕುಮಾರ್‌ಅವರ ಶಿಷ್ಯರಿಂದ - ಭರತ ನಾಟ್ಯ

ಅಕ್ಟೋಬರ್‌ 21, ಗುರುವಾರ

ಸಂಜೆ 5:00ಕ್ಕೆ

ವಿದ್ವಾನ್ ಎಂ. ವಿ. ಮಧುಸೂದನ್ -ಪ್ರವಚನ

ಸಂಜೆ 5:20ಕ್ಕೆ

ಜಾನ್ಹವಿ ಭಜನಾ ಮಂಡಳಿ - ಭಜನೆ

ಸಂಜೆ 5:40ಕ್ಕೆ

ವಿದುಷಿ ಸವಿತಕ್ಕ - ಜಾನಪದ ಗೀತೆ

ವಿದ್ವಾನ್ ಗಣೇಶ್ ಪ್ರಸಾದ್ - ಕಿ ಬೋರ್ಡ್

ವಿದ್ವಾನ್ ಗೋನ್ ಹಾಲ್ - ತಬಲ

ವಿದ್ವಾನ್ ಶಂಕರ್ ದಾವಣಗೆರೆ - ರಿದಂ ಪ್ಯಾಡ್

ವಿದ್ವಾನ್ ಬಸಂತ್. ಕೆ. ಪ್ರಸಾದ್ - ಗಿಟಾರ್

ಸಂಜೆ 6:00 ಕ್ಕೆ

ಬೆಂಗಳೂರು ಸಹೋದರರು - ದ್ವಂದ್ವ ಗಾಯನ

ವಿದ್ವಾನ್ ಹರಿಹರನ್ ಎಂ. ಬಿ. ವಿದ್ವಾನ್ ಅಶೋಕ್ ಎಸ್

ವಿದ್ವಾನ್ ಜೆ. ಕೆ. ಶ್ರೀಧರ್ - ಪಿಟೀಲು

ವಿದ್ವಾನ್ ವಿ. ಆನೂರು ವಿನೋದ್ ಶ್ಯಾಂ - ಮೃದಂಗ

ಸಂಜೆ 6:20ಕ್ಕೆ

ಬೆನಕ ತಂಡ - ರಂಗ ಗೀತೆಗಳು

ವಿದ್ವಾನ್ ಬಿ. ವಿ. ಕಾರಂತ - ಸಂಗೀತ ಸಂಯೋಜನೆ

ಶ್ರೀ ಟಿ. ಎಸ್. ನಾಗಾಭರಣ - ಅರ್ಪಣೆ

ಸಂಜೆ 6:40ಕ್ಕೆ

ವಿದ್ವಾನ್ ಎಚ್. ಕೆ. ವೆಂಕಟರಾಮ್ - ಪಿಟೀಲು

ವಿದ್ವಾನ್ ವಿಷ್ಣು ವೆಂಕಟರಾಮ್ - ಸಹ ವಾದನ

ವಿದ್ವಾನ್ ವಿ. ಫಣೀಂದ್ರ ಭಾಸ್ಕರ್ - ಮೃದಂಗಂ

ಸಂಜೆ 7:00ಕ್ಕೆ

ವಿದುಷಿ ಸರಳಾಯ ಸಹೋದರಿಯರು - ಗಾಯನ

ವಿದ್ವಾನ್ ಜೆ. ಕೆ. ಶ್ರೀಧರ್ - ಪಿಟೀಲು

ವಿದ್ವಾನ್ ಆನೂರು ವಿನೋದ್ ಶ್ಯಾಂ - ಮೃದಂಗ

ಸಂಜೆ 7:20ಕ್ಕೆ

ವಿದ್ವಾನ್ ಟಿ. ವಿ. ರಾಮ್ ಪ್ರಸಾದ್ - ಗಾಯನ

ವಿದ್ವಾನ್ ಹೆಚ್. ಕೆ. ವೆಂಕಟರಾಮ್ - ಪಿಟೀಲು

ವಿದ್ವಾನ್ ಫಣೀಂದ್ರ ಭಾಸ್ಕರ್ - ಮೃದಂಗ

ಸಂಜೆ 8:00ಕ್ಕೆ

ವಿ. ಶಮಾಕೃಷ್ಣ - ಕೂಚುಪುಡಿ

(ನಿರ್ದೇಶಕರು, ಶ್ರದ್ಧಾ ನೃತ್ಯ ಕೇಂದ್ರ

ಸಂಜೆ 8:25ಕ್ಕೆ

ವಿ. ವಂದನಾ ಸುಪ್ರಿಯಾ, ರಾಧಿಕಾ ಮಕರಮ್ - ಒಡಿಸ್ಸಿ ನೃತ್ಯ

ಅಕ್ಟೋಬರ್‌ 22, ಶುಕ್ರವಾರ

ಸಂಜೆ 5:00ಕ್ಕೆ

ಶ್ರೀಕಾಂತಾ ಭಜನ ಮಂಡಳಿ - ಭಜನೆ

ಸಂಜೆ 5:20ಕ್ಕೆ

ವಿದುಷಿ ಸಂಗೀತಾ ಶ್ರೀ ಕಿಷನ್ - ಸಮನ್ವಯ ಭಕ್ತಿಗೀತೆಗಳು

ಸಂಜೆ 5:40ಕ್ಕೆ

ವಿದ್ವಾನ್ ಪ್ರಶಾಂತ್ ಐಯ್ಯಂಗಾರ್ - ವೀಣೆ

ವಿದ್ವಾನ್ ರಾಮನಾಥ್ - ಮೃದಂಗ

ಸಂಜೆ 6:00ಕ್ಕೆ

ವಿದುಷಿ ಸುಪ್ರಿಯಾ ರಘುನಂದನ್ - ಸುಗಮ ಸಂಗೀತ

ವಿದ್ವಾನ್ ಎಂ. ಸಿ. ಶ್ರೀನಿವಾಸ್ - ತಬಲ

ವಿದ್ವಾನ್ ಜೆ. ಆರ್. ದುಷ್ಯಂತ್ - ಕೀಲಿ ಪೆಟ್ಟಿಗೆ

ಸಂಜೆ 6:20ಕ್ಕೆ

ವಿದ್ವಾನ್ ಶೃಂಗೇರಿ ನಾಗರಾಜ್, ಶಿವಮೊಗ್ಗ - ಗಾಯನ

ವಿದ್ವಾನ್ ಪ್ರಾದೇಶ್ ಆಚಾರ್ - ಪಿಟೀಲು

ವಿದ್ವಾನ್ ಜಿ. ಎಸ್. ನಾಗರಾಜ್ - ಮೃದಂಗ

ವಿದ್ವಾನ್ ಆರ್. ಕಾರ್ತೀಕ್ - ಖಂಜರ

ಸಂಜೆ 6:40ಕ್ಕೆ

ಪಂಡಿತ್ ಹುಸೇನ್ ಸಾಬ್ - ಹಿಂದೂಸ್ಥಾನಿ ಗಾಯನ

ಪಂಡಿತ್ ಶಿವಕುಮಾರ್ ಮಹಂತ - ಹಾರ್ಮೋನಿಯಂ

ಪಂಡಿತ್ ವಿಜಯ್ ಕುಮಾರ್ - ತಬಲ

ಸಂಜೆ 7:00ಕ್ಕೆ

ವಿದುಷಿ ಆರ್.ಎ. ರಮಾಮಣಿ - ಗಾಯನ

ವಿದ್ವಾನ್ ಆರ್. ದಯಾಕರ್ - ಪಿಟೀಲು

ವಿದ್ವಾನ್ ಜಿ. ಎಸ್. ನಾಗರಾಜ್ - ಮೃದಂಗ

ವಿದ್ವಾನ್ ಕಾರ್ತೀಕ್ ಮಣಿ - ಘಟಂ

ಸಂಜೆ 7:20ಕ್ಕೆ

ವಿದುಷಿ ಸಂಗೀತಾ ಕಟ್ಟಿ - ಹಿಂದೂಸ್ಥಾನಿ ಗಾಯನ

ವಿದ್ವಾನ್ ಪಂಚಾಕ್ಷರಿ ಹಿರೇಮಠ್ - ಹಾರ್ಮೋನಿಯಂ

ವಿದ್ವಾನ್ ದತ್ತಾತ್ರೇಯ ಜೋಷಿ - ತಬಲ

ವಿದ್ವಾನ್ ವೆಂಕಟೇಶ್ ಪುರೋಹಿತ್ - ತಾಳ

ವಿದ್ವಾನ್ ಜಗನ್ನಾಥ್ - ತಂಬೂರ

ಸಂಜೆ 7:40ಕ್ಕೆ

ವಿದ್ವಾನ್ ವಿದ್ಯಾಭೂಷಣ್ - ಗಾಯನ

ವಿದ್ವಾನ್ ಪ್ರಾದೇಶ್ ಆಚಾರ್ - ಪಿಟೀಲು

ವಿದ್ವಾನ್ ಜಿ. ಎಸ್. ನಾಗರಾಜ್ - ಮೃದಂಗ

ವಿದ್ವಾನ್ ಆರ್. ಕಾರ್ತೀಕ್ - ಖಂಜರ

ಸಂಜೆ 8:00ಕ್ಕೆ

ಡಾ. ವೀಣಾಮೂರ್ತಿ ವಿಜಯ್ ಶಿಷ್ಯರಿಂದ - ಕೂಚಿಪುಡಿ

ಸಂಜೆ 8:20ಕ್ಕೆ

ಭ್ರಮರೀ ನೃತ್ಯ ತಂಡ - ಇಂದಿಗೂ ಪುರಂದರ (ಸಮನ್ವಯ ಭರತ ನಾಟ್ಯ)

ಸ್ನೇಹಾ ಕಪ್ಪಣ್ಣ - ನಿರ್ದೇಶನ

ವಾರಿಜಾ ವೇಣುಗೋಪಾಲ - ಸಂಗೀತ

ಅಕ್ಟೋಬರ್ 23, ಶನಿವಾರ

ಸಂಜೆ 5:00ಕ್ಕೆ

ವಿದ್ವಾನ್ ಶ್ರೀಧರ ಸಾಗರ್ - ಸ್ಯಾಕ್ಸೋಫೋನ್

ವಿದ್ವಾನ್ ಜನಾರ್ಧನ್ - ಪಿಟೀಲು

ವಿದ್ವಾನ್ ಗುರುದತ್ - ಮೃದಂಗ

ಸಂಜೆ 5:20ಕ್ಕೆ

ವಿದುಷಿ ಕೆ. ಎಸ್. ಸುರೇಖ - ಸುಗಮ ಸಂಗೀತ

ವಿದ್ವಾನ್ ಪುತ್ತೂರು ನರಸಿಂಹ ನಾಯಕ್ - ಹಾರ್ಮೊನಿಯಂ

ವಿದ್ವಾನ್ ರೂಪಕ್ ಕಲ್ಲೂರ್ಕರ್ - ತಬಲ

ವಿದ್ವಾನ್ ವೆಂಕಟೇಶ ಪುರೋಹಿತ - ತಾಳ

ಸಂಜೆ 5:40ಕ್ಕೆ

ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ - ಗಾಯನ

ವಿದ್ವಾನ್ ಎಂ.ಎಸ್. ಗೋವಿಂದಸ್ವಾಮಿ - ಪಿಟೀಲು

ವಿದ್ವಾನ್ ಆನೂರು ದತ್ತಾತ್ರೇಯ ಶರ್ಮ - ಮೃದಂಗ

ಸಂಜೆ 6:00ಕ್ಕೆ

ವಿದುಷಿ ಪಿ. ರಮಾ - ಗಾಯನ

ವಿದ್ವಾನ್ ಆರ್. ದಯಾಕರ್ - ವಯೋಲಿನ್

ವಿದ್ವಾನ್ ಅನಿರುದ್ಧ್ ಎಸ್. ಭಟ್ - ಮೃದಂಗ

ವಿದ್ವಾನ್ ಭಾರ್ಗವ ಹಾಲಂಬಿ - ಖಂಜರ

ಸಂಜೆ 6:20ಕ್ಕೆ

ವಿದ್ವಾನ್ ಪುತ್ತೂರು ನರಸಿಂಹ ನಾಯಕ್ - ಸುಗಮ ಸಂಗೀತ

ವಿದ್ವಾನ್ ರೂಪಕ್ ಕಲ್ಲೂರ್ಕರ್ - ತಬಲ

ವಿದ್ವಾನ್ ವೆಂಕಟೇಶ್ ಪುರೋಹಿತ - ಹಾರ್ಮೊನಿಯಂ

ಸಂಜೆ 6:40ಕ್ಕೆ

ವಿದುಷಿ ಕಲಾವತಿ ಅವಧೂತ - ಗಾಯನ

ವಿದ್ವಾನ್ ಎಂ. ಎಸ್. ಗೋವಿಂದಸ್ವಾಮಿ - ವಯೋಲಿನ್

ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ - ಮೃದಂಗ

ವಿದ್ವಾನ್ ಭಾರ್ಗವ ಹಾಲಂಬಿ - ಖಂಜರ

ಸಂಜೆ 7:00ಕ್ಕೆ

ಡಾ. ಸುಮಾ ಸುಧೀಂದ್ರ - ವೀಣೆ

ವಿದ್ವಾನ್ ಎಂ. ಎಸ್. ಗೋವಿಂದ ಸ್ವಾಮಿ - ಪಿಟೀಲು

ವಿದ್ವಾನ್ ಅನಿರುದ್ಧ್ ಎಸ್. ಭಟ್ - ಮೃದಂಗ

ಸಂಜೆ 7:20ಕ್ಕೆ

ಡಾ. ನಾಗಮಣಿ ಶ್ರೀನಾಥ್ - ಗಾಯನ

ವಿದ್ವಾನ್ ಎಂ ಎಸ್ ಗೋವಿಂದ ಸ್ವಾಮಿ - ಪಿಟೀಲು

ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ - ಮೃದಂಗ

ವಿದ್ವಾನ್ ಭಾರ್ಗವ ಹಾಲಂಬಿ - ಖಂಜರ

ಸಂಜೆ 7:40ಕ್ಕೆ

ಡಾ. ಮುದ್ದು ಮೋಹನ್ - ಹಿಂದೂಸ್ಥಾನಿ ಗಾಯನ

ವಿದ್ವಾನ್ ಪಂಚಾಕ್ಷರಿ ಹಿರೇಮಠ್ - ಹಾರ್ಮೋನಿಯಂ

ವಿದ್ವಾನ್ ದತ್ತಾತ್ರೇಯ ಜೋಷಿ - ತಬಲ

ವಿದ್ವಾನ್ ವೆಂಕಟೇಶ್ ಪುರೋಹಿತ್ - ತಾಳ

ವಿದ್ವಾನ್ ಜಗನ್ನಾಥ್ - ತಂಬೂರ

ಸಂಜೆ 8:00ಕ್ಕೆ

ಪದ್ಮಶ್ರೀ ಪ್ರತಿಭಾ ಪ್ರಹ್ಲಾದ್ - ಭರತ ನಾಟ್ಯ

ಅಕ್ಟೋಬರ್24 ಭಾನುವಾರ

ಬೆಳಿಗ್ಗೆ10:30ಕ್ಕೆ

ವಿದ್ವಾನ್ ಆರ್. ಕೆ. ಪದ್ಮನಾಭ್ - ಗಾಯನ

ವಿದ್ವಾನ್ ಎಂ. ಎಸ್. ಗೋವಿಂದ ಸ್ವಾಮಿ - ಪಿಟೀಲು

ವಿದ್ವಾನ್ ರವಿಶಂಕರ್ ಶರ್ಮ - ಮೃದಂಗ

ಬೆಳಿಗ್ಗೆ 10:50ಕ್ಕೆ

ವಿದ್ವಾನ್ ಪ್ರವೀಣ್ ಗೋಡ್ಖಿಂಡಿ - ಕೊಳಲು

ಶಡ್ಜ್ ಗೋಡ್ಖಿಂಡಿ - ಸಹವಾದನ

ವಿದ್ವಾನ್ ಕಿರಣ್ ಗೋಡ್ಖಿಂಡಿ - ತಬಲ

ಬೆಳಿಗ್ಗೆ 11:15ಕ್ಕೆ

ವಿದ್ವಾನ್ ವೆಂಕಟೇಶ್ ಕುಮಾರ್ - ಗಾಯನ

ವಿದ್ವಾನ್ ಪಂಚಾಕ್ಷರಿ ಹಿರೇಮಠ್ - ಹಾರ್ಮೋನಿಯಂ

ವಿದ್ವಾನ್ ದತ್ತಾತ್ರೇಯ ಜೋಷಿ - ತಬಲ

ವಿದ್ವಾನ್ ವೆಂಕಟೇಶ್ ಪುರೋಹಿತ್ - ತಾಳ

ವಿದ್ವಾನ್ ಜಗನ್ನಾಥ್ - ತಂಬೂರ

ಬೆಳಿಗ್ಗೆ 11:30ಕ್ಕೆ

ಸಂತ ಪುರಂದರ ದಾಸರ ‘ನವರತ್ನ ಮಾಲಿಕೆ’ ಸಮೂಹ ಗೋಷ್ಠಿ ಗಾಯನ

ಮಧ್ಯಾಹ್ನ 1:00

ಪ್ರಸಾದ ವಿನಿಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT