<p>ಮಹಾಲಕ್ಷ್ಮಿಯನ್ನು ಪೂಜಿಸುವಾಗ ನೆಲ್ಲಿಕಾಯಿ ದೀಪ ಬೆಳಗಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಅನೇಕರಲ್ಲಿದೆ. ಹಾಗಾಗಿ ಅನೇಕರು ಶುಕ್ರವಾರ ದೇವಿಗೆ ಪೂಜೆ ಸಲ್ಲಿಸುವಾಗ ನೆಲ್ಲಿಕಾಯಿ ದೀಪ ಹಚ್ಚುತ್ತಾರೆ. ಹಾಗಿದ್ದರೆ, ಇದರಿಂದ ಸಿಗುವ ಲಾಭಗಳೇನು ಎಂಬುದನ್ನು ನೋಡೋಣ. </p><p>ನೆಲ್ಲಿಕಾಯಿ ಮಹಾಲಕ್ಷ್ಮಿ ತುಂಬಾ ಪ್ರಿಯವಾದದ್ದು, ಶುಕ್ರವಾರ ಸಾಯಂಕಾಲ ಮಹಾಲಕ್ಷ್ಮಿಗೆ ನೆಲ್ಲಿಕಾಯಿ ದೀಪ ಹಚ್ಚುವುದರಿಂದ ಮಹಾಲಕ್ಷ್ಮಿಯ ಅನುಗ್ರಹ ದೊರೆಯುತ್ತದೆ.</p>.ಕಾರ್ತಿಕ ಮಾಸದಲ್ಲಿ ದೀಪವನ್ನು ಹೀಗೆ ಬೆಳಗಿಸಿದರೆ ಫಲ ಹೆಚ್ಚು: ಜ್ಯೋತಿಷ .ಗಮನಿಸಿ: ನವರಾತ್ರಿಯಲ್ಲಿ ಈ ಕೆಲಸಗಳನ್ನು ಮಾಡಬಾರದು ಎನ್ನುತ್ತೆ ಜ್ಯೋತಿಷ. <ul><li><p>ನೆಲ್ಲಿಕಾಯಿ ಮಹಾಲಕ್ಷ್ಮಿಗೆ ತುಂಬಾ ಪ್ರಿಯವಾದದ್ದು ಎಂಬ ನಂಬಿಕೆ ಇದೆ. ಶುಕ್ರವಾರ ಸಾಯಂಕಾಲ ಮಹಾಲಕ್ಷೀಗೆ ನೆಲ್ಲಿಕಾಯಿ ದೀಪ ಹಚ್ಚುವುದರಿಂದ ಅನುಗ್ರಹ ದೊರೆಯುತ್ತದೆ. </p></li><li><p>ಮಹಾಲಕ್ಷ್ಮಿಗೆ ನೆಲ್ಲಿಕಾಯಿ ಚಟ್ನಿ ನೈವೇದ್ಯ ಮಾಡಿದರೆ, ಆಕೆ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ. ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಶಂಕರಾಚಾರ್ಯರು ಬರೆದಿರುವ ಶ್ರೀ ಕನಕಧಾರಾ ಸ್ತೋತ್ರದಲ್ಲಿ ಉಲ್ಲೇಖಿಸಿದೆ. </p></li><li><p>ನೆಲ್ಲಿಕಾಯಿ ಚಟ್ನಿ ಅಥವಾ ನೆಲ್ಲಿಕಾಯಿ ಗೊಜ್ಜನ್ನು ಮಹಾಲಕ್ಷ್ಮಿಗೆ ನೈವೇದ್ಯ ಮಾಡಿ, ಬಳಿಕ ಅದನ್ನು ಸುಮಂಗಲಿಯರಿಗೆ ಪ್ರಸಾದದ ರೂಪದಲ್ಲಿ ನೀಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. </p></li><li><p>ನೆಲ್ಲಿಕಾಯಿ ಹಾಗೂ ತುಳಸಿ ರಸವನ್ನು ಪಾರ್ವತಿಗೆ ನೈವೇದ್ಯ ಮಾಡಿ, ಕಾಮಾಲೆ ರೋಗ ಇರುವ ರೋಗಿಗಳಿಗೆ ಕುಡಿಸಿದರೆ, ಕಾಮಾಲೆ ರೋಗ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. </p></li><li><p>ನೆಲ್ಲಿಕಾಯಿಯನ್ನು ಶುಕ್ರವಾರದಂದು ಕನ್ಯೆ ಮತ್ತು ಮುತ್ತೈದೆಯರಿಗೆ ನೀಡಿದರೆ ಇಷ್ಟಾರ್ಥಗಳು ಸಿದ್ದಿಯಾಗುತ್ತದೆ ಎಂಬ ನಂಬಿಕೆ ಇದೆ. </p></li><li><p>ಪ್ರತಿದಿನ ದೇವರ ಮನೆಯಲ್ಲಿ ಶಂಖದ ಪಕ್ಕ ನೆಲ್ಲಿಕಾಯಿಯನ್ನು ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ, ಕುಟುಂಬದಲ್ಲಿ ಶಾಂತಿ ಹಾಗೂ ನೆಮ್ಮದಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ. </p></li><li><p>ನೆಲ್ಲಿಕಾಯಿ ಉಪ್ಪಿನಕಾಯಿಯನ್ನು ಇತರರಿಗೆ ಹಂಚಿದರೆ ಗೃಹ ಕಲಹ ನಿವಾರಣೆಯಾಗಿ, ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.</p></li><li><p>ನೆಲ್ಲಿಕಾಯಿ ದೀಪವನ್ನು ತುಳಸಿ ಕಟ್ಟೆಯ ಮುಂದೆ ಹಚ್ಚಿದರೆ ಮನೆಯಲ್ಲಿ ಅಪಮೃತ್ಯು ನಿವಾರಣೆಯಾಗಿ ಆರೋಗ್ಯ ಭಾಗ್ಯ ಪ್ರಾಪ್ತಿಯಾಗುತ್ತದೆ. </p></li></ul><p>ನೆಲ್ಲಿಕಾಯಿಯ ಮರಕ್ಕೆ ನಿತ್ಯ ಪೂಜೆ ಸಲ್ಲಿಸುವುದರಿಂದ ಧನ, ಆರೋಗ್ಯ, ಶಾಂತಿ ಹಾಗೂ ನೆಮ್ಮದಿ ಸಿಗಲಿದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಹಾಲಕ್ಷ್ಮಿಯನ್ನು ಪೂಜಿಸುವಾಗ ನೆಲ್ಲಿಕಾಯಿ ದೀಪ ಬೆಳಗಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಅನೇಕರಲ್ಲಿದೆ. ಹಾಗಾಗಿ ಅನೇಕರು ಶುಕ್ರವಾರ ದೇವಿಗೆ ಪೂಜೆ ಸಲ್ಲಿಸುವಾಗ ನೆಲ್ಲಿಕಾಯಿ ದೀಪ ಹಚ್ಚುತ್ತಾರೆ. ಹಾಗಿದ್ದರೆ, ಇದರಿಂದ ಸಿಗುವ ಲಾಭಗಳೇನು ಎಂಬುದನ್ನು ನೋಡೋಣ. </p><p>ನೆಲ್ಲಿಕಾಯಿ ಮಹಾಲಕ್ಷ್ಮಿ ತುಂಬಾ ಪ್ರಿಯವಾದದ್ದು, ಶುಕ್ರವಾರ ಸಾಯಂಕಾಲ ಮಹಾಲಕ್ಷ್ಮಿಗೆ ನೆಲ್ಲಿಕಾಯಿ ದೀಪ ಹಚ್ಚುವುದರಿಂದ ಮಹಾಲಕ್ಷ್ಮಿಯ ಅನುಗ್ರಹ ದೊರೆಯುತ್ತದೆ.</p>.ಕಾರ್ತಿಕ ಮಾಸದಲ್ಲಿ ದೀಪವನ್ನು ಹೀಗೆ ಬೆಳಗಿಸಿದರೆ ಫಲ ಹೆಚ್ಚು: ಜ್ಯೋತಿಷ .ಗಮನಿಸಿ: ನವರಾತ್ರಿಯಲ್ಲಿ ಈ ಕೆಲಸಗಳನ್ನು ಮಾಡಬಾರದು ಎನ್ನುತ್ತೆ ಜ್ಯೋತಿಷ. <ul><li><p>ನೆಲ್ಲಿಕಾಯಿ ಮಹಾಲಕ್ಷ್ಮಿಗೆ ತುಂಬಾ ಪ್ರಿಯವಾದದ್ದು ಎಂಬ ನಂಬಿಕೆ ಇದೆ. ಶುಕ್ರವಾರ ಸಾಯಂಕಾಲ ಮಹಾಲಕ್ಷೀಗೆ ನೆಲ್ಲಿಕಾಯಿ ದೀಪ ಹಚ್ಚುವುದರಿಂದ ಅನುಗ್ರಹ ದೊರೆಯುತ್ತದೆ. </p></li><li><p>ಮಹಾಲಕ್ಷ್ಮಿಗೆ ನೆಲ್ಲಿಕಾಯಿ ಚಟ್ನಿ ನೈವೇದ್ಯ ಮಾಡಿದರೆ, ಆಕೆ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ. ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಶಂಕರಾಚಾರ್ಯರು ಬರೆದಿರುವ ಶ್ರೀ ಕನಕಧಾರಾ ಸ್ತೋತ್ರದಲ್ಲಿ ಉಲ್ಲೇಖಿಸಿದೆ. </p></li><li><p>ನೆಲ್ಲಿಕಾಯಿ ಚಟ್ನಿ ಅಥವಾ ನೆಲ್ಲಿಕಾಯಿ ಗೊಜ್ಜನ್ನು ಮಹಾಲಕ್ಷ್ಮಿಗೆ ನೈವೇದ್ಯ ಮಾಡಿ, ಬಳಿಕ ಅದನ್ನು ಸುಮಂಗಲಿಯರಿಗೆ ಪ್ರಸಾದದ ರೂಪದಲ್ಲಿ ನೀಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. </p></li><li><p>ನೆಲ್ಲಿಕಾಯಿ ಹಾಗೂ ತುಳಸಿ ರಸವನ್ನು ಪಾರ್ವತಿಗೆ ನೈವೇದ್ಯ ಮಾಡಿ, ಕಾಮಾಲೆ ರೋಗ ಇರುವ ರೋಗಿಗಳಿಗೆ ಕುಡಿಸಿದರೆ, ಕಾಮಾಲೆ ರೋಗ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. </p></li><li><p>ನೆಲ್ಲಿಕಾಯಿಯನ್ನು ಶುಕ್ರವಾರದಂದು ಕನ್ಯೆ ಮತ್ತು ಮುತ್ತೈದೆಯರಿಗೆ ನೀಡಿದರೆ ಇಷ್ಟಾರ್ಥಗಳು ಸಿದ್ದಿಯಾಗುತ್ತದೆ ಎಂಬ ನಂಬಿಕೆ ಇದೆ. </p></li><li><p>ಪ್ರತಿದಿನ ದೇವರ ಮನೆಯಲ್ಲಿ ಶಂಖದ ಪಕ್ಕ ನೆಲ್ಲಿಕಾಯಿಯನ್ನು ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ, ಕುಟುಂಬದಲ್ಲಿ ಶಾಂತಿ ಹಾಗೂ ನೆಮ್ಮದಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ. </p></li><li><p>ನೆಲ್ಲಿಕಾಯಿ ಉಪ್ಪಿನಕಾಯಿಯನ್ನು ಇತರರಿಗೆ ಹಂಚಿದರೆ ಗೃಹ ಕಲಹ ನಿವಾರಣೆಯಾಗಿ, ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.</p></li><li><p>ನೆಲ್ಲಿಕಾಯಿ ದೀಪವನ್ನು ತುಳಸಿ ಕಟ್ಟೆಯ ಮುಂದೆ ಹಚ್ಚಿದರೆ ಮನೆಯಲ್ಲಿ ಅಪಮೃತ್ಯು ನಿವಾರಣೆಯಾಗಿ ಆರೋಗ್ಯ ಭಾಗ್ಯ ಪ್ರಾಪ್ತಿಯಾಗುತ್ತದೆ. </p></li></ul><p>ನೆಲ್ಲಿಕಾಯಿಯ ಮರಕ್ಕೆ ನಿತ್ಯ ಪೂಜೆ ಸಲ್ಲಿಸುವುದರಿಂದ ಧನ, ಆರೋಗ್ಯ, ಶಾಂತಿ ಹಾಗೂ ನೆಮ್ಮದಿ ಸಿಗಲಿದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>