<p>ದಾನೇನ ಪಾಣಿರ್ನ ತು ಕಂಕಣೇನ</p>.<p>ಸ್ನಾನೇನ ಶುದ್ಧಿರ್ನ ಚ ಚಂದನೇನ ।</p>.<p>ಮಾನೇನ ತೃಪ್ತಿರ್ನ ತು ಭೋಜನೇನ</p>.<p>ಜ್ಞಾನೇನ ಮುಕ್ತಿರ್ನ ತು ಮಂಡನೇನ ।।</p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>’ಕೈಗಳಿಗೆ ಶುದ್ಧಿ ದಾನದಿಂದಲೇ ವಿನಾ ಕಂಕಣದಿಂದಲ್ಲ; ಶರೀರಕ್ಕೆ ಸ್ನಾನದಿಂದ ಶುದ್ಧಿಯೇ ವಿನಾ ಚಂದನಲೇಪದಿಂದ ಅಲ್ಲ; ಮನುಷ್ಯನಿಗೆ ಸನ್ಮಾನದಿಂದ ತೃಪ್ತಿಯೇ ವಿನಾ ಭೋಜನದಿಂದ ಅಲ್ಲ; ಜ್ಞಾನದಿಂದ ಮೋಕ್ಷವೇ ವಿನಾ ವಸ್ತ್ರ–ಭೂಷಣಗಳಿಂದ ಅಲ್ಲ.’</p>.<p>ಜೀವನದಲ್ಲಿ ಕೆಲವೊಂದು ವಿಷಯಗಳನ್ನು ತಪ್ಪಾಗಿ ತಿಳಿದುಕೊಂಡಿರುತ್ತೇವೆ. ಇದರಿಂದ ನಾವು ನಮಗೇ ತೊಂದರೆಗಳನ್ನು ಸೃಷ್ಟಿಸಿಕೊಳ್ಳುತ್ತಿರುತ್ತೇವೆ ; ಮಾತ್ರವಲ್ಲ, ಅದರಿಂದ ನಮ್ಮ ಜೀವನದ ದಿಕ್ಕೇ ಬದಲಾಗಬಹುದು. ಅಂಥ ಕೆಲವೊಂದು ಸಂಗತಿಗಳ ಬಗ್ಗೆ ಸುಭಾಷಿತ ಇಲ್ಲಿ ಹೇಳುತ್ತಿದೆ.</p>.<p>ಯಾವುದಾದರೂ ಧಾರ್ಮಿಕ ಕಲಾಪಗಳ ಆರಂಭದ ಮೊದಲು ಕೈಗಳಿಗೆ ಕಂಕಣವನ್ನು ಕಟ್ಟಿಕೊಳ್ಳುವುದುಂಟು. ಇದರಿಂದ ರಕ್ಷಣೆ ದೊರೆಯುತ್ತದೆ; ಆ ಕಲಾಪ ಮಾಡಲು ಪಾವಿತ್ರ್ಯವೂ ದಕ್ಕುತ್ತದೆ ಎನ್ನುವುದು ಇದರ ಉದ್ದೇಶ. ಆದರೆ ಸುಭಾಷಿತ ಹೇಳುತ್ತಿದೆ: ಕಂಕಣದಿಂದ ಅಲ್ಲ, ದಾನಗುಣದಿಂದ ನಮಗೆ ಪಾವಿತ್ರ್ಯ, ಶುದ್ಧಿಗಳು ಒದಗುತ್ತದೆ ಎಂದು. ದಾನ ಎಂದರೆ ವಿತರಣಶೀಲತೆ; ಸಂಗ್ರಹಬುದ್ಧಿಗೆ ವಿರುದ್ಧವಾದುದು.</p>.<p>ಶರೀರ ಶುದ್ಧವಾಗಬೇಕು ಎಂದರೆ ಚೆನ್ನಾಗಿ ಸ್ನಾನ ಮಾಡಬೇಕು. ಹೀಗಲ್ಲದೆ ನಾವು ಚಂದನಾದಿಗಳನ್ನು, ಎಂದರೆ ಸುಗಂಧದ್ರವ್ಯಗಳನ್ನು ಪೂಸಿಕೊಂಡರೆ ಅದು ಸ್ನಾನ ಆಗಲಾರದಲ್ಲವೆ? ಕೊಳೆ ನಮ್ಮ ಮೈಮೇಲೆ ಹಾಗೇ ಉಳಿಯುತ್ತದೆ; ನಮ್ಮ ದುರ್ಗಂಧವನ್ನು ಮರೆಮಾಡಿ ಜನರಿಗೆ ಮೋಸ ಮಾಡಬಹುದು; ಆದರೆ ನಮಗಂತೂ ನಮ್ಮ ಕೊಳೆಯ ಭಾರ ತಿಳಿಯುತ್ತಲೇ ಇರುತ್ತದೆಯಲ್ಲವೆ?</p>.<p>ಮನುಷ್ಯನಿಗೆ ಸನ್ಮಾನದಿಂದ ತೃಪ್ತಿ, ಭೋಜನದಿಂದ ಅಲ್ಲ ಎಂದು ಸುಭಾಷಿತ ಹೇಳಿದೆ. ಭೋಜನ ಎಂದರೆ ಶರೀರದ ಭೋಗ; ಯಾವುದೇ ಉದಾತ್ತ ಉದ್ದೇಶಗಳಿಲ್ಲದ ಜೀವನವಿಧಾನ. ಸನ್ಮಾನ ಎಂದರೆ ನಾಲ್ಕು ಜನರು ಒಪ್ಪುವಂಥ ಕೆಲಸ. ನಾಲ್ಕು ಜನರಿಗೆ ಪ್ರಯೋಜನ ಆಗುವಂಥ ಕೆಲಸದಿಂದಲೇ ನಾಲ್ಕು ಜನರು ನಮ್ಮನ್ನು ಗುರುತಿಸುತ್ತಾರಷ್ಟೆ. ಹೀಗಾಗಿ ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು.</p>.<p>ತೋರಿಕೆಯಿಂದ ಮೋಕ್ಷ ಸಿಗುವುದಿಲ್ಲ; ಅರಿವಿನಿಂದಲೇ ಮೋಕ್ಷ ಎನ್ನುವುದು ಸುಭಾಷಿತ ಮುಂದಿನ ಮಾತು. ವಸ್ತ್ರ–ಭೂಷಣಗಳು ಹೊರಗಿನ ಅಲಂಕಾರಗಳು, ತೋರಿಕೆಗಳು; ಆದರೆ ಜ್ಞಾನ ಎನ್ನುವುದು ಅಂತರಂಗದ ಪಾಕ, ನಮ್ಮ ವ್ಯಕ್ತಿತ್ವದ ಭಾಗ.</p>.<p>ಸುಭಾಷಿತ ಒಟ್ಟು ತಾತ್ಪರ್ಯ ಎಂದರೆ ನಮ್ಮ ಜೀವನವನ್ನು ಪ್ರಾಮಾಣಿಕವಾಗಿ ಬದುಕಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾನೇನ ಪಾಣಿರ್ನ ತು ಕಂಕಣೇನ</p>.<p>ಸ್ನಾನೇನ ಶುದ್ಧಿರ್ನ ಚ ಚಂದನೇನ ।</p>.<p>ಮಾನೇನ ತೃಪ್ತಿರ್ನ ತು ಭೋಜನೇನ</p>.<p>ಜ್ಞಾನೇನ ಮುಕ್ತಿರ್ನ ತು ಮಂಡನೇನ ।।</p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>’ಕೈಗಳಿಗೆ ಶುದ್ಧಿ ದಾನದಿಂದಲೇ ವಿನಾ ಕಂಕಣದಿಂದಲ್ಲ; ಶರೀರಕ್ಕೆ ಸ್ನಾನದಿಂದ ಶುದ್ಧಿಯೇ ವಿನಾ ಚಂದನಲೇಪದಿಂದ ಅಲ್ಲ; ಮನುಷ್ಯನಿಗೆ ಸನ್ಮಾನದಿಂದ ತೃಪ್ತಿಯೇ ವಿನಾ ಭೋಜನದಿಂದ ಅಲ್ಲ; ಜ್ಞಾನದಿಂದ ಮೋಕ್ಷವೇ ವಿನಾ ವಸ್ತ್ರ–ಭೂಷಣಗಳಿಂದ ಅಲ್ಲ.’</p>.<p>ಜೀವನದಲ್ಲಿ ಕೆಲವೊಂದು ವಿಷಯಗಳನ್ನು ತಪ್ಪಾಗಿ ತಿಳಿದುಕೊಂಡಿರುತ್ತೇವೆ. ಇದರಿಂದ ನಾವು ನಮಗೇ ತೊಂದರೆಗಳನ್ನು ಸೃಷ್ಟಿಸಿಕೊಳ್ಳುತ್ತಿರುತ್ತೇವೆ ; ಮಾತ್ರವಲ್ಲ, ಅದರಿಂದ ನಮ್ಮ ಜೀವನದ ದಿಕ್ಕೇ ಬದಲಾಗಬಹುದು. ಅಂಥ ಕೆಲವೊಂದು ಸಂಗತಿಗಳ ಬಗ್ಗೆ ಸುಭಾಷಿತ ಇಲ್ಲಿ ಹೇಳುತ್ತಿದೆ.</p>.<p>ಯಾವುದಾದರೂ ಧಾರ್ಮಿಕ ಕಲಾಪಗಳ ಆರಂಭದ ಮೊದಲು ಕೈಗಳಿಗೆ ಕಂಕಣವನ್ನು ಕಟ್ಟಿಕೊಳ್ಳುವುದುಂಟು. ಇದರಿಂದ ರಕ್ಷಣೆ ದೊರೆಯುತ್ತದೆ; ಆ ಕಲಾಪ ಮಾಡಲು ಪಾವಿತ್ರ್ಯವೂ ದಕ್ಕುತ್ತದೆ ಎನ್ನುವುದು ಇದರ ಉದ್ದೇಶ. ಆದರೆ ಸುಭಾಷಿತ ಹೇಳುತ್ತಿದೆ: ಕಂಕಣದಿಂದ ಅಲ್ಲ, ದಾನಗುಣದಿಂದ ನಮಗೆ ಪಾವಿತ್ರ್ಯ, ಶುದ್ಧಿಗಳು ಒದಗುತ್ತದೆ ಎಂದು. ದಾನ ಎಂದರೆ ವಿತರಣಶೀಲತೆ; ಸಂಗ್ರಹಬುದ್ಧಿಗೆ ವಿರುದ್ಧವಾದುದು.</p>.<p>ಶರೀರ ಶುದ್ಧವಾಗಬೇಕು ಎಂದರೆ ಚೆನ್ನಾಗಿ ಸ್ನಾನ ಮಾಡಬೇಕು. ಹೀಗಲ್ಲದೆ ನಾವು ಚಂದನಾದಿಗಳನ್ನು, ಎಂದರೆ ಸುಗಂಧದ್ರವ್ಯಗಳನ್ನು ಪೂಸಿಕೊಂಡರೆ ಅದು ಸ್ನಾನ ಆಗಲಾರದಲ್ಲವೆ? ಕೊಳೆ ನಮ್ಮ ಮೈಮೇಲೆ ಹಾಗೇ ಉಳಿಯುತ್ತದೆ; ನಮ್ಮ ದುರ್ಗಂಧವನ್ನು ಮರೆಮಾಡಿ ಜನರಿಗೆ ಮೋಸ ಮಾಡಬಹುದು; ಆದರೆ ನಮಗಂತೂ ನಮ್ಮ ಕೊಳೆಯ ಭಾರ ತಿಳಿಯುತ್ತಲೇ ಇರುತ್ತದೆಯಲ್ಲವೆ?</p>.<p>ಮನುಷ್ಯನಿಗೆ ಸನ್ಮಾನದಿಂದ ತೃಪ್ತಿ, ಭೋಜನದಿಂದ ಅಲ್ಲ ಎಂದು ಸುಭಾಷಿತ ಹೇಳಿದೆ. ಭೋಜನ ಎಂದರೆ ಶರೀರದ ಭೋಗ; ಯಾವುದೇ ಉದಾತ್ತ ಉದ್ದೇಶಗಳಿಲ್ಲದ ಜೀವನವಿಧಾನ. ಸನ್ಮಾನ ಎಂದರೆ ನಾಲ್ಕು ಜನರು ಒಪ್ಪುವಂಥ ಕೆಲಸ. ನಾಲ್ಕು ಜನರಿಗೆ ಪ್ರಯೋಜನ ಆಗುವಂಥ ಕೆಲಸದಿಂದಲೇ ನಾಲ್ಕು ಜನರು ನಮ್ಮನ್ನು ಗುರುತಿಸುತ್ತಾರಷ್ಟೆ. ಹೀಗಾಗಿ ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು.</p>.<p>ತೋರಿಕೆಯಿಂದ ಮೋಕ್ಷ ಸಿಗುವುದಿಲ್ಲ; ಅರಿವಿನಿಂದಲೇ ಮೋಕ್ಷ ಎನ್ನುವುದು ಸುಭಾಷಿತ ಮುಂದಿನ ಮಾತು. ವಸ್ತ್ರ–ಭೂಷಣಗಳು ಹೊರಗಿನ ಅಲಂಕಾರಗಳು, ತೋರಿಕೆಗಳು; ಆದರೆ ಜ್ಞಾನ ಎನ್ನುವುದು ಅಂತರಂಗದ ಪಾಕ, ನಮ್ಮ ವ್ಯಕ್ತಿತ್ವದ ಭಾಗ.</p>.<p>ಸುಭಾಷಿತ ಒಟ್ಟು ತಾತ್ಪರ್ಯ ಎಂದರೆ ನಮ್ಮ ಜೀವನವನ್ನು ಪ್ರಾಮಾಣಿಕವಾಗಿ ಬದುಕಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>