ನಮಗೆಲ್ಲ ತಪಸ್ಸಿನ ಬಗ್ಗೆ ಸೆಳೆತ ಇದೆ. ತಪಸ್ಸಿನ ಸಾಧನೆಯಿಂದ ಏನೇನೋ ಸಿದ್ಧಿಗಳನ್ನು ಸಂಪಾದಿಸಬಹುದೆಂಬ ನಿರೀಕ್ಷೆಗಳೂ ಇವೆ. ಸುಭಾಷಿತ ಹೇಳುತ್ತಿದೆ: ’ನೀವು ತಪಸ್ಸನ್ನು ಆಚರಿಸಲು ಎಲ್ಲೋ ಕಾಡಿಗೆ ಹೋಗಬೇಕಿಲ್ಲ. ನಿಮ್ಮ ಮನಸ್ಸಿನಲ್ಲಿ ಶಾಂತಿ ಇದೆ ಎಂದಾದರೆ ನಿಮಗೆ ತಪಸ್ಸಿನ ಫಲ ಒದಗಿದೆ ಎಂದೇ ಅರ್ಥ.’ ಎಂದರೆ ತಪಸ್ಸಿನ ನಿಜವಾದ ಫಲ ಶಾಂತಿ ಎಂದಾಯಿತು.