<p><em><strong>ಶಾಂತಿತುಲ್ಯಂ ತಪೋ ನಾಸ್ತಿ ಸಂತೋಷಾನ್ನ ಸುಖಂ ಪರಮ್ ।</strong></em><br /><em><strong>ನಾಸ್ತಿ ತೃಷ್ಣಾಸಮೋ ವ್ಯಾಧಿರ್ನ ಚ ಧರ್ಮೋ ದಯಾಪರಃ ।।</strong></em></p>.<p><strong>ಇದರ ತಾತ್ಪರ್ಯ ಹೀಗೆ:</strong>‘ಶಾಂತಿಗೆ ಸಮನಾದ ತಪಸ್ಸಿಲ್ಲ. ಸಂತೋಷಕ್ಕೆ ಸಮನಾದ ಸುಖವಿಲ್ಲ. ದುರಾಸೆಗೆ ಸಮನಾದ ರೋಗವಿಲ್ಲ. ದಯೆಗಿಂತ ದೊಡ್ಡದಾದ ಧರ್ಮವಿಲ್ಲ,’</p>.<p>ಜೀವನದಲ್ಲಿ ದಿಟವಾದ ಶಾಂತಿ, ಸುಖ ಯಾವುದರಲ್ಲಿದೆ ಎಂದು ಸುಭಾಷಿತ ಹೇಳುತ್ತಿದೆ.</p>.<p>ನಮಗೆಲ್ಲ ತಪಸ್ಸಿನ ಬಗ್ಗೆ ಸೆಳೆತ ಇದೆ. ತಪಸ್ಸಿನ ಸಾಧನೆಯಿಂದ ಏನೇನೋ ಸಿದ್ಧಿಗಳನ್ನು ಸಂಪಾದಿಸಬಹುದೆಂಬ ನಿರೀಕ್ಷೆಗಳೂ ಇವೆ. ಸುಭಾಷಿತ ಹೇಳುತ್ತಿದೆ: ’ನೀವು ತಪಸ್ಸನ್ನು ಆಚರಿಸಲು ಎಲ್ಲೋ ಕಾಡಿಗೆ ಹೋಗಬೇಕಿಲ್ಲ. ನಿಮ್ಮ ಮನಸ್ಸಿನಲ್ಲಿ ಶಾಂತಿ ಇದೆ ಎಂದಾದರೆ ನಿಮಗೆ ತಪಸ್ಸಿನ ಫಲ ಒದಗಿದೆ ಎಂದೇ ಅರ್ಥ.’ ಎಂದರೆ ತಪಸ್ಸಿನ ನಿಜವಾದ ಫಲ ಶಾಂತಿ ಎಂದಾಯಿತು.</p>.<p>ಸುಖ ಎಂದರೆ ಏನು? ಯಾವಾಗಲೂ ಸಂತೋಷವಾಗಿರುವುದೇ ಸುಖ. ಸುಖವನ್ನು ನಾವು ವಸ್ತುಗಳಲ್ಲಿ ಹುಡುಕುವುದನ್ನು ಬಿಟ್ಟು ನಮ್ಮ ಮನಸ್ಸಿನಲ್ಲಿ ಅದನ್ನು ನೆಲೆಗೊಳಿಸಲು ಪ್ರಯತ್ನಿಸಬೇಕು.</p>.<p>ಆಸೆಗೆ ಕೊನೆ ಎಂಬುದೇ ಇರದು. ಹೀಗಾಗಿಯೇ ಸುಭಾಷಿತ ಅದನ್ನು ರೋಗಗಳ ಸಾಲಿಗೆ ಸೇರಿಸಿದೆ. ಈ ರೋಗ ನಮ್ಮನ್ನು ಬಾಧಿಸಬಾರದು ಎಂದರೆ ನಾವು ತೃಪ್ತಿ ಎಂಬ ಲಸಿಕೆಯನ್ನು ತೆಗೆದುಕೊಳ್ಳಬೇಕು.</p>.<p>ಧರ್ಮ ಎಂದರೆ ಅದು ಇದು – ಎಂದು ಏನೋನೂ ಸಾಧಿಸುತ್ತಿರುತ್ತೇವೆ. ಆದರೆ ಸುಭಾಷಿತ ಅದನ್ನು ಸುಲಭವಾಗಿ ವ್ಯಾಖ್ಯಾನಿಸಿದೆ: ‘ದಯೆಗಿಂತಲೂ ದೊಡ್ಡ ಧರ್ಮ ಇನ್ನೊಂದಿಲ್ಲ‘. ಜಗತ್ತಿನ ಎಲ್ಲ ಜೀವ–ಜಡ ವಸ್ತುಗಳ ಬಗ್ಗೆ ಇರುವ ಕಾಳಜಿಯೇ ದಯೆ ಎನಿಸಿಕೊಳ್ಳುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಶಾಂತಿತುಲ್ಯಂ ತಪೋ ನಾಸ್ತಿ ಸಂತೋಷಾನ್ನ ಸುಖಂ ಪರಮ್ ।</strong></em><br /><em><strong>ನಾಸ್ತಿ ತೃಷ್ಣಾಸಮೋ ವ್ಯಾಧಿರ್ನ ಚ ಧರ್ಮೋ ದಯಾಪರಃ ।।</strong></em></p>.<p><strong>ಇದರ ತಾತ್ಪರ್ಯ ಹೀಗೆ:</strong>‘ಶಾಂತಿಗೆ ಸಮನಾದ ತಪಸ್ಸಿಲ್ಲ. ಸಂತೋಷಕ್ಕೆ ಸಮನಾದ ಸುಖವಿಲ್ಲ. ದುರಾಸೆಗೆ ಸಮನಾದ ರೋಗವಿಲ್ಲ. ದಯೆಗಿಂತ ದೊಡ್ಡದಾದ ಧರ್ಮವಿಲ್ಲ,’</p>.<p>ಜೀವನದಲ್ಲಿ ದಿಟವಾದ ಶಾಂತಿ, ಸುಖ ಯಾವುದರಲ್ಲಿದೆ ಎಂದು ಸುಭಾಷಿತ ಹೇಳುತ್ತಿದೆ.</p>.<p>ನಮಗೆಲ್ಲ ತಪಸ್ಸಿನ ಬಗ್ಗೆ ಸೆಳೆತ ಇದೆ. ತಪಸ್ಸಿನ ಸಾಧನೆಯಿಂದ ಏನೇನೋ ಸಿದ್ಧಿಗಳನ್ನು ಸಂಪಾದಿಸಬಹುದೆಂಬ ನಿರೀಕ್ಷೆಗಳೂ ಇವೆ. ಸುಭಾಷಿತ ಹೇಳುತ್ತಿದೆ: ’ನೀವು ತಪಸ್ಸನ್ನು ಆಚರಿಸಲು ಎಲ್ಲೋ ಕಾಡಿಗೆ ಹೋಗಬೇಕಿಲ್ಲ. ನಿಮ್ಮ ಮನಸ್ಸಿನಲ್ಲಿ ಶಾಂತಿ ಇದೆ ಎಂದಾದರೆ ನಿಮಗೆ ತಪಸ್ಸಿನ ಫಲ ಒದಗಿದೆ ಎಂದೇ ಅರ್ಥ.’ ಎಂದರೆ ತಪಸ್ಸಿನ ನಿಜವಾದ ಫಲ ಶಾಂತಿ ಎಂದಾಯಿತು.</p>.<p>ಸುಖ ಎಂದರೆ ಏನು? ಯಾವಾಗಲೂ ಸಂತೋಷವಾಗಿರುವುದೇ ಸುಖ. ಸುಖವನ್ನು ನಾವು ವಸ್ತುಗಳಲ್ಲಿ ಹುಡುಕುವುದನ್ನು ಬಿಟ್ಟು ನಮ್ಮ ಮನಸ್ಸಿನಲ್ಲಿ ಅದನ್ನು ನೆಲೆಗೊಳಿಸಲು ಪ್ರಯತ್ನಿಸಬೇಕು.</p>.<p>ಆಸೆಗೆ ಕೊನೆ ಎಂಬುದೇ ಇರದು. ಹೀಗಾಗಿಯೇ ಸುಭಾಷಿತ ಅದನ್ನು ರೋಗಗಳ ಸಾಲಿಗೆ ಸೇರಿಸಿದೆ. ಈ ರೋಗ ನಮ್ಮನ್ನು ಬಾಧಿಸಬಾರದು ಎಂದರೆ ನಾವು ತೃಪ್ತಿ ಎಂಬ ಲಸಿಕೆಯನ್ನು ತೆಗೆದುಕೊಳ್ಳಬೇಕು.</p>.<p>ಧರ್ಮ ಎಂದರೆ ಅದು ಇದು – ಎಂದು ಏನೋನೂ ಸಾಧಿಸುತ್ತಿರುತ್ತೇವೆ. ಆದರೆ ಸುಭಾಷಿತ ಅದನ್ನು ಸುಲಭವಾಗಿ ವ್ಯಾಖ್ಯಾನಿಸಿದೆ: ‘ದಯೆಗಿಂತಲೂ ದೊಡ್ಡ ಧರ್ಮ ಇನ್ನೊಂದಿಲ್ಲ‘. ಜಗತ್ತಿನ ಎಲ್ಲ ಜೀವ–ಜಡ ವಸ್ತುಗಳ ಬಗ್ಗೆ ಇರುವ ಕಾಳಜಿಯೇ ದಯೆ ಎನಿಸಿಕೊಳ್ಳುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>