<p>ಕೆಲ ವಿಷಯಗಳಲ್ಲಿ ಕೆಲವರಿಗೆ ಭಯ ಕಾಡುವುದು ಸಾಮಾನ್ಯ. ಆದರೆ ಯಾವೆಲ್ಲ ರಾಶಿಯಲ್ಲಿ ಜನಿಸಿದವರಿಗೆ ಏನೆಲ್ಲಾ ಭಯ ಕಾಡಲಿದೆ ಎಂಬುದು ಜ್ಯೋತಿಷ ಶಾಸ್ತ್ರದಲ್ಲಿ ಹೇಳಲಾಗಿದೆ. ಯಾವ ರಾಶಿಯವರಿಗೆ ಏನೆಲ್ಲಾ ಭಯವಿರುತ್ತದೆ ಎಂಬುದರ ಮಾಹಿತಿ ಇಲ್ಲಿದೆ... </p><p><strong>ಮೇಷ </strong>ರಾಶಿಯವರು ಸೋಲನ್ನು ಒಪ್ಪಿಕೊಳ್ಳಲು ಭಯಪಡುತ್ತಾರೆ. ಪ್ರತಿ ಕೆಲಸದಲ್ಲೂ ತಾವೇ ಮೊದಲಿಗರಾಗಿರಬೇಕು ಎಂದು ಬಯಸುತ್ತಾರೆ. ಆದ್ದರಿಂದ, ಯಾವುದೇ ವಿಚಾರದಲ್ಲಿ ಹಿಂದುಳಿಯುವುದು ಇವರಿಗೆ ದೊಡ್ಡ ಭಯವಾಗಿ ಕಾಡುತ್ತದೆ.</p><p><strong>ವಷಭ </strong>ರಾಶಿಯಲ್ಲಿ ಜನಿಸಿದವರು ಸ್ಥಿರತೆ ಮತ್ತು ಸುರಕ್ಷತೆಯನ್ನು ಕಳೆದುಕೊಳ್ಳುವುದು ಭಯದ ಸಂಗತಿ. ಹಠಾತ್ ಬದಲಾವಣೆಗಳು ಮತ್ತು ಅನಿಶ್ಚಿತ ಬೆಳವಣಿಗೆಗಳು ಇವರನ್ನು ವಿಚಲಿತಗೊಳಿಸುತ್ತವೆ.</p>.ಸಿಂಹ ರಾಶಿ: ವಿಶ್ವಾವಸು ನಾಮ ಸಂವತ್ಸರ ಯುಗಾದಿ ರಾಶಿ ಭವಿಷ್ಯ .<p><strong>ಮಿಥುನ</strong> ರಾಶಿಯವರಿಗೆ ಒಂಟಿತನ ಕಾಡುವುದರಿಂದ ಏಕಾಂಗಿಯಾಗಿ ಇರಲು ಹೆದರುತ್ತಾರೆ. ಇವರಿಗೆ ಜನರ ಜೊತೆ ಬೆರೆಯುವುದು ಮತ್ತು ಸಂಭಾಷಣೆ ಮಾಡುವುದೆಂದರೆ ಅಚ್ಚುಮೆಚ್ಚು.</p><p><strong>ಕಟಕ</strong> ರಾಶಿಯವರು ಕುಟುಂಬ ಮತ್ತು ಸ್ನೇಹಿತರ ವಿಚಾರದಲ್ಲಿ ಹೆಚ್ಚು ಭಾವನಾತ್ಮಕವಾಗಿರುತ್ತಾರೆ. ಪ್ರೀತಿ ಪಾತ್ರರನ್ನು ಕಳೆದುಕೊಳ್ಳಲು ಭಯಪಡುತ್ತಾರೆ. ಅಂತಹವರಿಂದ ದೂರಾಗುವುದನ್ನು ಸಹಿಸಲಾರರು.</p><p><strong>ಸಿಂಹ</strong> ರಾಶಿಯಲ್ಲಿ ಜನಿಸಿದವರು ಸದಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಬೇಕೆಂದು ಬಯಸುತ್ತಾರೆ. ಯಾರಿಂದಲಾದರೂ ನಿರ್ಲಕ್ಷಕ್ಕೆ ಒಳಗಾದರೆ ಪರಿತಪಿಸುತ್ತಾರೆ. ಗಮನ ಸೆಳೆಯುವಲ್ಲಿ ವಿಫಲವಾಗುವ ಭಯ ಇವರನ್ನು ಕಾಡುತ್ತದೆ.</p>.ವೃಷಭ ರಾಶಿ: ವಿಶ್ವಾವಸು ನಾಮ ಸಂವತ್ಸರ ಯುಗಾದಿ ರಾಶಿ ಭವಿಷ್ಯ.<p><strong>ಕನ್ಯಾ</strong> ರಾಶಿಯವರು ತಮ್ಮ ಕೆಲಸದಲ್ಲಿ ಪರಿಪೂರ್ಣತೆಯನ್ನು ಬಯಸುವುದರಿಂದ, ಅಪೂರ್ಣತೆಯನ್ನು ಮತ್ತು ತಪ್ಪುಗಳನ್ನು ಮಾಡಲು ಹೆದರುತ್ತಾರೆ. ಸಣ್ಣ ತಪ್ಪುಗಳೂ ಇವರನ್ನು ಕಾಡುತ್ತವೆ.</p><p><strong>ತುಲಾ</strong> ರಾಶಿಯವರಿಗೆ ಸಮತೋಲನದಿಂದ ಕೂಡಿದ ಜೀವನವನ್ನು ನೀರಿಕ್ಷಿಸುತ್ತಾರೆ. ಇವರು ವಿವಾದಗಳು ಮತ್ತು ಅನ್ಯಾಯವನ್ನು ಎದುರಿಸಲು ಹಿಂಜರಿಯುತ್ತಾರೆ.</p><p><strong>ವೃಶ್ಚಿಕ</strong> ರಾಶಿಯಲ್ಲಿ ಜನಿಸಿದವರು ವಿಶ್ವಾಸವನ್ನು ಕಳೆದುಕೊಳ್ಳುಲು ಭಯಪಡುತ್ತಾರೆ. ರಹಸ್ಯಗಳನ್ನು ಕಾಪಾಡಿಕೊಳ್ಳುತ್ತಾರೆ. ತಮ್ಮ ಮೇಲೆ ಯಾರಾದರೂ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರೆ ಅದನ್ನು ವಿರೋಧಿಸುತ್ತಾರೆ.</p>.ದಿನ ಭವಿಷ್ಯ: 22 ಆಗಸ್ಟ್ 2025 ಶುಕ್ರವಾರ- ಇನ್ನೊಬ್ಬರನ್ನು ಹೊಣೆ ಮಾಡಬೇಡಿ.<p><strong>ಧನಸ್ಸು</strong> ರಾಶಿಯವರು ಹೊಸ ಸ್ಥಳಗಳನ್ನು ಅನ್ವೇಷಿಸಲು ಮತ್ತು ಮುಕ್ತವಾಗಿರಲು ಬಯಸುತ್ತಾರೆ. ಸ್ವಾತಂತ್ರ್ಯ ಕಳೆದುಕೊಳ್ಳಲು ಭಯಪಡುತ್ತಾರೆ. ಜವಾಬ್ದಾರಿಗಳು ಇವರನ್ನು ಮಿತಿಗೊಳಿಸಿದಂತೆ ಅನಿಸುತ್ತದೆ.</p><p><strong>ಮಕರ</strong> ರಾಶಿಯಲ್ಲಿ ಜನಿಸಿದವರು ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ವಿಫಲರಾಗಲು ಭಯಪಡುತ್ತಾರೆ. ಇವರು ಪರಿಶ್ರಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.</p><p><strong>ಕುಂಭ</strong> ರಾಶಿಯವರು ಸಾಂಪ್ರದಾಯಿಕ ನಿಯಮಗಳನ್ನು ಪಾಲಿಸಲು ಹಾಗೂ ಇತರರಂತೆ ಇರಲು ಇಷ್ಟಪಡುವುದಿಲ್ಲ.</p><p><strong>ಮೀನ</strong> ರಾಶಿಯಲ್ಲಿ ಜನಿಸಿದವರು ವಾಸ್ತವದಲ್ಲಿ ಬದುಕಲು ಭಯಪಡುತ್ತಾರೆ. ಇವರು ತಮ್ಮದೇ ಕಲ್ಪನಾ ಲೋಕದಲ್ಲಿ ಇರುತ್ತಾರೆ. ಕಠಿಣ ಮಾತುಗಳಿಂದ ಇವರು ಗೊಂದಲಕ್ಕೀಡಾಗುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಲ ವಿಷಯಗಳಲ್ಲಿ ಕೆಲವರಿಗೆ ಭಯ ಕಾಡುವುದು ಸಾಮಾನ್ಯ. ಆದರೆ ಯಾವೆಲ್ಲ ರಾಶಿಯಲ್ಲಿ ಜನಿಸಿದವರಿಗೆ ಏನೆಲ್ಲಾ ಭಯ ಕಾಡಲಿದೆ ಎಂಬುದು ಜ್ಯೋತಿಷ ಶಾಸ್ತ್ರದಲ್ಲಿ ಹೇಳಲಾಗಿದೆ. ಯಾವ ರಾಶಿಯವರಿಗೆ ಏನೆಲ್ಲಾ ಭಯವಿರುತ್ತದೆ ಎಂಬುದರ ಮಾಹಿತಿ ಇಲ್ಲಿದೆ... </p><p><strong>ಮೇಷ </strong>ರಾಶಿಯವರು ಸೋಲನ್ನು ಒಪ್ಪಿಕೊಳ್ಳಲು ಭಯಪಡುತ್ತಾರೆ. ಪ್ರತಿ ಕೆಲಸದಲ್ಲೂ ತಾವೇ ಮೊದಲಿಗರಾಗಿರಬೇಕು ಎಂದು ಬಯಸುತ್ತಾರೆ. ಆದ್ದರಿಂದ, ಯಾವುದೇ ವಿಚಾರದಲ್ಲಿ ಹಿಂದುಳಿಯುವುದು ಇವರಿಗೆ ದೊಡ್ಡ ಭಯವಾಗಿ ಕಾಡುತ್ತದೆ.</p><p><strong>ವಷಭ </strong>ರಾಶಿಯಲ್ಲಿ ಜನಿಸಿದವರು ಸ್ಥಿರತೆ ಮತ್ತು ಸುರಕ್ಷತೆಯನ್ನು ಕಳೆದುಕೊಳ್ಳುವುದು ಭಯದ ಸಂಗತಿ. ಹಠಾತ್ ಬದಲಾವಣೆಗಳು ಮತ್ತು ಅನಿಶ್ಚಿತ ಬೆಳವಣಿಗೆಗಳು ಇವರನ್ನು ವಿಚಲಿತಗೊಳಿಸುತ್ತವೆ.</p>.ಸಿಂಹ ರಾಶಿ: ವಿಶ್ವಾವಸು ನಾಮ ಸಂವತ್ಸರ ಯುಗಾದಿ ರಾಶಿ ಭವಿಷ್ಯ .<p><strong>ಮಿಥುನ</strong> ರಾಶಿಯವರಿಗೆ ಒಂಟಿತನ ಕಾಡುವುದರಿಂದ ಏಕಾಂಗಿಯಾಗಿ ಇರಲು ಹೆದರುತ್ತಾರೆ. ಇವರಿಗೆ ಜನರ ಜೊತೆ ಬೆರೆಯುವುದು ಮತ್ತು ಸಂಭಾಷಣೆ ಮಾಡುವುದೆಂದರೆ ಅಚ್ಚುಮೆಚ್ಚು.</p><p><strong>ಕಟಕ</strong> ರಾಶಿಯವರು ಕುಟುಂಬ ಮತ್ತು ಸ್ನೇಹಿತರ ವಿಚಾರದಲ್ಲಿ ಹೆಚ್ಚು ಭಾವನಾತ್ಮಕವಾಗಿರುತ್ತಾರೆ. ಪ್ರೀತಿ ಪಾತ್ರರನ್ನು ಕಳೆದುಕೊಳ್ಳಲು ಭಯಪಡುತ್ತಾರೆ. ಅಂತಹವರಿಂದ ದೂರಾಗುವುದನ್ನು ಸಹಿಸಲಾರರು.</p><p><strong>ಸಿಂಹ</strong> ರಾಶಿಯಲ್ಲಿ ಜನಿಸಿದವರು ಸದಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಬೇಕೆಂದು ಬಯಸುತ್ತಾರೆ. ಯಾರಿಂದಲಾದರೂ ನಿರ್ಲಕ್ಷಕ್ಕೆ ಒಳಗಾದರೆ ಪರಿತಪಿಸುತ್ತಾರೆ. ಗಮನ ಸೆಳೆಯುವಲ್ಲಿ ವಿಫಲವಾಗುವ ಭಯ ಇವರನ್ನು ಕಾಡುತ್ತದೆ.</p>.ವೃಷಭ ರಾಶಿ: ವಿಶ್ವಾವಸು ನಾಮ ಸಂವತ್ಸರ ಯುಗಾದಿ ರಾಶಿ ಭವಿಷ್ಯ.<p><strong>ಕನ್ಯಾ</strong> ರಾಶಿಯವರು ತಮ್ಮ ಕೆಲಸದಲ್ಲಿ ಪರಿಪೂರ್ಣತೆಯನ್ನು ಬಯಸುವುದರಿಂದ, ಅಪೂರ್ಣತೆಯನ್ನು ಮತ್ತು ತಪ್ಪುಗಳನ್ನು ಮಾಡಲು ಹೆದರುತ್ತಾರೆ. ಸಣ್ಣ ತಪ್ಪುಗಳೂ ಇವರನ್ನು ಕಾಡುತ್ತವೆ.</p><p><strong>ತುಲಾ</strong> ರಾಶಿಯವರಿಗೆ ಸಮತೋಲನದಿಂದ ಕೂಡಿದ ಜೀವನವನ್ನು ನೀರಿಕ್ಷಿಸುತ್ತಾರೆ. ಇವರು ವಿವಾದಗಳು ಮತ್ತು ಅನ್ಯಾಯವನ್ನು ಎದುರಿಸಲು ಹಿಂಜರಿಯುತ್ತಾರೆ.</p><p><strong>ವೃಶ್ಚಿಕ</strong> ರಾಶಿಯಲ್ಲಿ ಜನಿಸಿದವರು ವಿಶ್ವಾಸವನ್ನು ಕಳೆದುಕೊಳ್ಳುಲು ಭಯಪಡುತ್ತಾರೆ. ರಹಸ್ಯಗಳನ್ನು ಕಾಪಾಡಿಕೊಳ್ಳುತ್ತಾರೆ. ತಮ್ಮ ಮೇಲೆ ಯಾರಾದರೂ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರೆ ಅದನ್ನು ವಿರೋಧಿಸುತ್ತಾರೆ.</p>.ದಿನ ಭವಿಷ್ಯ: 22 ಆಗಸ್ಟ್ 2025 ಶುಕ್ರವಾರ- ಇನ್ನೊಬ್ಬರನ್ನು ಹೊಣೆ ಮಾಡಬೇಡಿ.<p><strong>ಧನಸ್ಸು</strong> ರಾಶಿಯವರು ಹೊಸ ಸ್ಥಳಗಳನ್ನು ಅನ್ವೇಷಿಸಲು ಮತ್ತು ಮುಕ್ತವಾಗಿರಲು ಬಯಸುತ್ತಾರೆ. ಸ್ವಾತಂತ್ರ್ಯ ಕಳೆದುಕೊಳ್ಳಲು ಭಯಪಡುತ್ತಾರೆ. ಜವಾಬ್ದಾರಿಗಳು ಇವರನ್ನು ಮಿತಿಗೊಳಿಸಿದಂತೆ ಅನಿಸುತ್ತದೆ.</p><p><strong>ಮಕರ</strong> ರಾಶಿಯಲ್ಲಿ ಜನಿಸಿದವರು ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ವಿಫಲರಾಗಲು ಭಯಪಡುತ್ತಾರೆ. ಇವರು ಪರಿಶ್ರಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.</p><p><strong>ಕುಂಭ</strong> ರಾಶಿಯವರು ಸಾಂಪ್ರದಾಯಿಕ ನಿಯಮಗಳನ್ನು ಪಾಲಿಸಲು ಹಾಗೂ ಇತರರಂತೆ ಇರಲು ಇಷ್ಟಪಡುವುದಿಲ್ಲ.</p><p><strong>ಮೀನ</strong> ರಾಶಿಯಲ್ಲಿ ಜನಿಸಿದವರು ವಾಸ್ತವದಲ್ಲಿ ಬದುಕಲು ಭಯಪಡುತ್ತಾರೆ. ಇವರು ತಮ್ಮದೇ ಕಲ್ಪನಾ ಲೋಕದಲ್ಲಿ ಇರುತ್ತಾರೆ. ಕಠಿಣ ಮಾತುಗಳಿಂದ ಇವರು ಗೊಂದಲಕ್ಕೀಡಾಗುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>