<p><strong>ಬಾದಾಮಿ:</strong> ‘ಗುಡ್ಡದ ಕಲ್ಲು ತೆಗೆದು ಕುಟುಂಬದ ಬದುಕು ಕಟ್ಟಿಕೊಂಡಿದ್ದೇವೆ. ನಮ್ಮ ಹೊಟ್ಟೆಗೆ ಕಲ್ಲು ಹೊಡೆಯಬೇಡಿ. ನಮ್ಮನ್ನು ಬದುಕಲು ಬಿಡಿ’ ಎಂದು ಹಳಗೇರಿ ಗ್ರಾಮದ ಭೋವಿ ವಡ್ಡರ ಕುಟುಂಬದವರು ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ಮಾಡಿದರು.</p>.<p>‘ನಮಗ ಹೊಲ ಇಲ್ಲ. ಯಾವುದೂ ಬೇರೆ ಉದ್ಯೋಗ ಗೊತ್ತಿಲ್ಲ, ಎರಡು, ಮೂರು ತಲೆಮಾರಿನಿಂದ ಕಲ್ಲು ತೆಗೆದು ಹೊಟ್ಟಿ ಜೀವನ ಮಾಡಕೋಂತ ಬಂದೀವಿ. ಒಮ್ಮಗೇ ಕೆಲಸ ಬಂದ್ ಮಾಡಿದರ ನಾವು ಏನ್ ತಿನ್ನೂನು ಹೇಳಿ ’ ಎಂದು ಭೋವಿ ವಡ್ಡರ ಸಮಾಜದ ದಾಸಪ್ಪ ಸೀಮಿಕೇರಿ ಕೇಳಿದರು.</p>.<p>ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಅಂಬೇಡ್ಕರ್ ಭಾವಚಿತ್ರದೊಂದಿಗೆ ಪ್ರತಿಭಟಿಸಿದರು. ಹಳಗೇರಿ ಗ್ರಾಮದ ಭೋವಿ ವಡ್ಡರ ಜನತೆ ಶಾಲಾ ಮಕ್ಕಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.</p>.<p>ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿ ಮಹೇಶ ಮರಿಯಣ್ಣನರ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದು ಗ್ರಾಮಕ್ಕೆ ಮರಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ:</strong> ‘ಗುಡ್ಡದ ಕಲ್ಲು ತೆಗೆದು ಕುಟುಂಬದ ಬದುಕು ಕಟ್ಟಿಕೊಂಡಿದ್ದೇವೆ. ನಮ್ಮ ಹೊಟ್ಟೆಗೆ ಕಲ್ಲು ಹೊಡೆಯಬೇಡಿ. ನಮ್ಮನ್ನು ಬದುಕಲು ಬಿಡಿ’ ಎಂದು ಹಳಗೇರಿ ಗ್ರಾಮದ ಭೋವಿ ವಡ್ಡರ ಕುಟುಂಬದವರು ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ಮಾಡಿದರು.</p>.<p>‘ನಮಗ ಹೊಲ ಇಲ್ಲ. ಯಾವುದೂ ಬೇರೆ ಉದ್ಯೋಗ ಗೊತ್ತಿಲ್ಲ, ಎರಡು, ಮೂರು ತಲೆಮಾರಿನಿಂದ ಕಲ್ಲು ತೆಗೆದು ಹೊಟ್ಟಿ ಜೀವನ ಮಾಡಕೋಂತ ಬಂದೀವಿ. ಒಮ್ಮಗೇ ಕೆಲಸ ಬಂದ್ ಮಾಡಿದರ ನಾವು ಏನ್ ತಿನ್ನೂನು ಹೇಳಿ ’ ಎಂದು ಭೋವಿ ವಡ್ಡರ ಸಮಾಜದ ದಾಸಪ್ಪ ಸೀಮಿಕೇರಿ ಕೇಳಿದರು.</p>.<p>ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಅಂಬೇಡ್ಕರ್ ಭಾವಚಿತ್ರದೊಂದಿಗೆ ಪ್ರತಿಭಟಿಸಿದರು. ಹಳಗೇರಿ ಗ್ರಾಮದ ಭೋವಿ ವಡ್ಡರ ಜನತೆ ಶಾಲಾ ಮಕ್ಕಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.</p>.<p>ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿ ಮಹೇಶ ಮರಿಯಣ್ಣನರ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದು ಗ್ರಾಮಕ್ಕೆ ಮರಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>