ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಗಣಿಗಾರಿಕೆ: ಅನುಮತಿ ಇಲ್ಲದೆ ಕಾಡು ಹರಾಜು

ಅರಣ್ಯ ಇಲಾಖೆಯ ಅಭಿಪ್ರಾಯವನ್ನೇ ಕೇಳದ ಗಣಿ ಇಲಾಖೆ
Published : 23 ಫೆಬ್ರುವರಿ 2025, 22:45 IST
Last Updated : 23 ಫೆಬ್ರುವರಿ 2025, 22:45 IST
ಫಾಲೋ ಮಾಡಿ
Comments
ಹೊಸ ಬ್ಲಾಕ್‌ ಹರಾಜಾಗಿದ್ದರೂ ಗಣಿ ಆರಂಭಿಸಬೇಕಿದ್ದರೆ ಇಲಾಖೆಯ ಅನುಮತಿ ಪಡೆಯಬೇಕು. ಆಗ ಪರಿಶೀಲನೆ ಮಾಡುತ್ತೇವೆ.
–ಸಂದೀಪ್‌ ಸೂರ್ಯವಂಶಿ, ಡಿಸಿಎಫ್‌, ಬಳ್ಳಾರಿ
ವ್ಯವಸ್ಥೆ ಇಲ್ಲದೇ ಉತ್ಪಾದನೆ ಹೆಚ್ಚಳ
ಸದ್ಯ ಹೊಸ ಗಣಿಗಳು ಕಾರ್ಯಾರಂಭವಾದರೆ, ಸಂಡೂರಿನಲ್ಲಿ ಒಟ್ಟಾರೆ ಕಬ್ಬಿಣದ ಅದಿರಿನ ಉತ್ಪಾದನೆಯೂ ಹೆಚ್ಚಲಿದೆ. ಅದರ ಸಾಗಾಟಕ್ಕೆ ವಾಹನ ಸಂಚಾರವೂ ಹೆಚ್ಚಾಗಲಿದೆ. ಸದ್ಯ ಈಗಿರುವ ರಸ್ತೆಗಳು, ಈಗಿನ ಅದಿರು ಲಾರಿಗಳ ಸಂಚಾರವನ್ನೇ ತಡೆದುಕೊಳ್ಳಲು ಆಗದಂಥ ಸ್ಥಿತಿಯಲ್ಲಿವೆ. ಉತ್ಪಾದನೆಗೆ ತಕ್ಕಂತೆ ಸಾಗಣೆ ವ್ಯವಸ್ಥೆಯೂ ಬಲಿಷ್ಠವಾಗಿರಬೇಕು ಎಂದು ಸುಪ್ರೀಂ ಕೋರ್ಟ್‌ ಕೂಡ ಪ್ರತಿಪಾದಿಸಿದೆ. ಹೀಗಿರುವಾಗ ಗಣಿ ಮತ್ತು ಉತ್ಪಾದನೆ ಹೆಚ್ಚಿಸಿದರೆ ಸಂಡೂರಿನ ಸಾರಿಗೆ, ಸಂಚಾರ ವ್ಯವಸ್ಥೆ ಹಾಳಾಗಲಿದೆ. ಇದು ಅಪಘಾತಗಳಿಗೆ ಹಾದಿ ಮಾಡಿಕೊಡಲಿದೆ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ. 2020ರ ಜನವರಿಯಿಂದ 2024ರ ಡಿಸೆಂಬರ್ ಮಧ್ಯದ ಅವಧಿಯಲ್ಲಿ ಸಂಡೂರಿನಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಒಟ್ಟು 1,110 ಮಂದಿ ಗಾಯಗೊಂಡಿರುವುದು ಜನಸಂಗ್ರಾಮ ಪರಿಷತ್ ಮುಖಂಡ ಶ್ರೀಶೈಲ ಆಲದಹಳ್ಳಿ ಎಂಬುವವರು ಆರ್‌ಟಿಐ ಅಡಿಯಲ್ಲಿ ಪಡೆದ ಮಾಹಿತಿಯಲ್ಲಿ ಬಯಲಾಗಿತ್ತು. ಇದರ ಜತೆಗೆ ನೂರಾರು ಮಂದಿ ಮೃತಪಟ್ಟಿದ್ದಾರೆ.
ವರ್ಜಿನ್‌ ಅರಣ್ಯ ಎಂಬುದು ಮಾನವ ಸೃಷ್ಟಿಸಲು ಸಾಧ್ಯವೇ ಆಗಲಾರದ್ದು. ಇಂಥ ಪ್ರದೇಶದಲ್ಲಿ ಗಣಿಗಾರಿಕೆ ಒಪ್ಪತಕ್ಕದ್ದಲ್ಲ. ಈಗಿರುವ ಹಳೆ ಗಣಿಗಳನ್ನೇ ಅದಿರು ಉತ್ಪಾದನೆಗೆ ಬಳಸಿಕೊಳ್ಳಬೇಕು. ಸಂಪತ್ತು ಮುಂದಿನ ಪೀಳಿಗೆಗೆ ಇರಬೇಕು.
–ಎಸ್‌.ಆರ್‌ ಹಿರೇಮಠ, ಮುಖ್ಯಸ್ಥರು, ಸಮಾಜ ಪರಿವರ್ತನಾ ಸಮುದಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT