ಒಟ್ಟು 9 ಜನ ಅತಿಥಿ ಉಪನ್ಯಾಸಕರ ಪೈಕಿ ಆರು ಜನರಿಗೆ ಕಾರ್ಯಭಾರ, ಹಾಜರಾತಿ ಪುಸ್ತಕವನ್ನು ಶನಿವಾರ ನೀಡಿದ್ದಾರೆ. ತರಗತಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದ್ದಾರೆ. ತಾಂತ್ರಿಕ ಕಾರಣಗಳಿಂದ ಇನ್ನೂ ಮೂವರ ನಿಯೋಜನೆ ಆಗಬೇಕಿದೆ.
‘ನ್ಯಾಯಾಲಯದ ಆದೇಶಕ್ಕೂ ಕಿಮ್ಮತ್ತಿಲ್ಲ’. 9 ಅತಿಥಿ ಉಪನ್ಯಾಸಕರ ಮರು ನಿಯೋಜನೆಗೆ ಮೀನಮೇಷ ಶೀರ್ಷಿಕೆ ಅಡಿಯಲ್ಲಿ ಜೂ. 10ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಕಾಲೇಜು ಆಡಳಿತವು ಅತಿಥಿ ಉಪನ್ಯಾಸಕರು ಕೆಲಸ ನಿರ್ವಹಿಸಲು ಅನುವು ಮಾಡಿಕೊಟ್ಟಿದೆ.