<p><strong>ಹಗರಿಬೊಮ್ಮನಹಳ್ಳಿ:</strong> ಇಲ್ಲಿನ ಉಪನೋಂದಣಿ ಕಚೇರಿ ಮುಂದೆ ದಸ್ತಾವೇಜು(ಪತ್ರ) ಬರಹಗಾರರ ಸಂಘದಿಂದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ ನಡೆಸುತ್ತಿರುವ ಧರಣಿ ಶುಕ್ರವಾರ 2ನೇ ದಿನಕ್ಕೆ ಕಾಲಿರಿಸಿದೆ.</p>.<p>ಸಂಘದ ಅಧ್ಯಕ್ಷ ಎಸ್.ವೀರಭದ್ರಪ್ಪ ಮಾತನಾಡಿ, ಸರ್ಕಾರ ಈಗ ಆನ್ಲೈನ್ ನೋಂದಣಿ ನಿಯಮ ಜಾರಿ ಮಾಡಿದೆ, ಆದರೆ ಇದರಲ್ಲಿ ಹಲವು ನೂನ್ಯತೆಗಳಿವೆ, ಸರಿಯಾಗಿ ಸರ್ವರ್ ಕಾರ್ಯ ನಿರ್ವಹಿಸದೇ ಸಾರ್ವಜನಿಕರು ಮತ್ತು ಬರಹಗಾರರಿಗೆ ತೀವ್ರ ತೊಂದರೆಯಾಗುತ್ತದೆ.<br> ಈ ಮೊದಲು ಕಾವೇರಿ 2.0 ಜಾರಿಯಲ್ಲಿತ್ತು, 3.0 ತಂದಿದ್ದಾರೆ, ಇದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತಿವೆ ಮತ್ತು ಸುಳ್ಳು ದಾಖಲೆಗಳು ಸೃಷ್ಟಿ ಆಗುತ್ತವೆ. ಇದರಿಂದಾಗಿ ಪತ್ರ ಬರಹಗಾರರಿಗೆ ಹಾಗೂ ವಕೀಲರಿಗೆ ಪ್ರತ್ಯೇಕವಾಗಿ ಲಾಗಿನ್ ಒದಗಿಸಬೇಕು ಎಂದು ಒತ್ತಾಯಿಸಿದರು. </p>.<p>ಹಿರಿಯ ಪತ್ರ ಬರಹಗಾರ ಕೆ.ಪಿ.ಮಠದ್ ಮಾತನಾಡಿ, ಗಣಕೀಕೃತ ಇ-ಸ್ವತ್ತು, ಇ-ಆಸ್ತಿ ದಾಖಲೆಗಳಿಂದಾಗುತ್ತಿರುವ ಲೋಪ ಸರಿಪಡಿಸಬೇಕು. ಅನಧಿಕೃತ ಬರಹಗಾರರ ಹಾವಳಿ ತಪ್ಪಿಸಲು ಪತ್ರ ಬರಹಗಾರರಿಗೆ ಏಕ ಮಾದರಿಯ ಗುರುತಿನ ಚೀಟಿ ನೀಡಬೇಕು, ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.</p>.<p>ಸಂಘದ ಗೌರವ ಅಧ್ಯಕ್ಷ ಹಾಲೇಶ್, ಎ.ಎಂ.ಕೊಟ್ರೇಶ್, ಎಸ್.ಎಂ.ಸಂಗಮೇಶ್, ಎಚ್.ಎಂ. ಎಂ.ಶ್ರೀಧರ್, ವೆಂಕಟೇಶ್, ಇಮಾಮ್ ಅಲಿ, ಲೋಕೇಶ್, ವಕೀಲರಾದ ಡಿ. ಕರಿಬಸಪ್ಪ, ಚಂದ್ರಶೇಖರ, ಪ್ರಕಾಶ್, ಸುನೀತಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಗರಿಬೊಮ್ಮನಹಳ್ಳಿ:</strong> ಇಲ್ಲಿನ ಉಪನೋಂದಣಿ ಕಚೇರಿ ಮುಂದೆ ದಸ್ತಾವೇಜು(ಪತ್ರ) ಬರಹಗಾರರ ಸಂಘದಿಂದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ ನಡೆಸುತ್ತಿರುವ ಧರಣಿ ಶುಕ್ರವಾರ 2ನೇ ದಿನಕ್ಕೆ ಕಾಲಿರಿಸಿದೆ.</p>.<p>ಸಂಘದ ಅಧ್ಯಕ್ಷ ಎಸ್.ವೀರಭದ್ರಪ್ಪ ಮಾತನಾಡಿ, ಸರ್ಕಾರ ಈಗ ಆನ್ಲೈನ್ ನೋಂದಣಿ ನಿಯಮ ಜಾರಿ ಮಾಡಿದೆ, ಆದರೆ ಇದರಲ್ಲಿ ಹಲವು ನೂನ್ಯತೆಗಳಿವೆ, ಸರಿಯಾಗಿ ಸರ್ವರ್ ಕಾರ್ಯ ನಿರ್ವಹಿಸದೇ ಸಾರ್ವಜನಿಕರು ಮತ್ತು ಬರಹಗಾರರಿಗೆ ತೀವ್ರ ತೊಂದರೆಯಾಗುತ್ತದೆ.<br> ಈ ಮೊದಲು ಕಾವೇರಿ 2.0 ಜಾರಿಯಲ್ಲಿತ್ತು, 3.0 ತಂದಿದ್ದಾರೆ, ಇದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತಿವೆ ಮತ್ತು ಸುಳ್ಳು ದಾಖಲೆಗಳು ಸೃಷ್ಟಿ ಆಗುತ್ತವೆ. ಇದರಿಂದಾಗಿ ಪತ್ರ ಬರಹಗಾರರಿಗೆ ಹಾಗೂ ವಕೀಲರಿಗೆ ಪ್ರತ್ಯೇಕವಾಗಿ ಲಾಗಿನ್ ಒದಗಿಸಬೇಕು ಎಂದು ಒತ್ತಾಯಿಸಿದರು. </p>.<p>ಹಿರಿಯ ಪತ್ರ ಬರಹಗಾರ ಕೆ.ಪಿ.ಮಠದ್ ಮಾತನಾಡಿ, ಗಣಕೀಕೃತ ಇ-ಸ್ವತ್ತು, ಇ-ಆಸ್ತಿ ದಾಖಲೆಗಳಿಂದಾಗುತ್ತಿರುವ ಲೋಪ ಸರಿಪಡಿಸಬೇಕು. ಅನಧಿಕೃತ ಬರಹಗಾರರ ಹಾವಳಿ ತಪ್ಪಿಸಲು ಪತ್ರ ಬರಹಗಾರರಿಗೆ ಏಕ ಮಾದರಿಯ ಗುರುತಿನ ಚೀಟಿ ನೀಡಬೇಕು, ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.</p>.<p>ಸಂಘದ ಗೌರವ ಅಧ್ಯಕ್ಷ ಹಾಲೇಶ್, ಎ.ಎಂ.ಕೊಟ್ರೇಶ್, ಎಸ್.ಎಂ.ಸಂಗಮೇಶ್, ಎಚ್.ಎಂ. ಎಂ.ಶ್ರೀಧರ್, ವೆಂಕಟೇಶ್, ಇಮಾಮ್ ಅಲಿ, ಲೋಕೇಶ್, ವಕೀಲರಾದ ಡಿ. ಕರಿಬಸಪ್ಪ, ಚಂದ್ರಶೇಖರ, ಪ್ರಕಾಶ್, ಸುನೀತಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>