<p><strong>ಕುರುಗೋಡು:</strong> ತಾಲ್ಲೂಕಿನ ಕೋಳೂರು ಗ್ರಾಮ ಪಂಚಾಯಿತಿ ಎದುರು ಅಖಿಲ ಭಾರತ ರೈತ, ಕೃಷಿ ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್) ಪದಾಧಿಕಾರಿಗಳು ಒಡಿಶಾ ರಾಜ್ಯದಲ್ಲಿ ಆದಿವಾಸಿಗಳ ಭೂ ಕಬಳಿಕೆ ವಿರೋಧಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.</p>.<p>ಬಲವಂತದ ಭೂ ಸ್ವಾಧೀನ ಕ್ರಮಕ್ಕೆ ಮುಂದಾಗಿರುವವರ ವಿರುದ್ಧ ಪ್ರತಿಭಟನಾನಿರತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.</p>.<p>ಸಂಘಟನೆ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡಿ, ಬಡ ಆದಿವಾಸಿಗಳ ಕೃಷಿಯೋಗ್ಯ ಜಮೀನು ಬಲವಂತದಿಂದ ಕಸಿದುಕೊಂಡು ಜಿಂದಾಲ್ ಮತ್ತು ಪೋಸ್ಕೊದಂತಹ ಅಂತರರಾಷ್ಟ್ರೀಯ ಕಂಪನಿಗಳಿಗೆ ಹಂಚಿಕೆ ಮಾಡಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದರು.</p>.<p>ಹೋರಾಟದಲ್ಲಿ ತೊಡಗಿದ್ದ ಸಂಘಟನೆಗಳ ಮುಖಂಡರಾದ ಸತ್ಯವಾನ್ ಮತ್ತು ಸದಾಶಿವದಾಸ್ ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.</p>.<p>ಸಂಘಟನೆಯ ಮುಖಂಡರಾದ ಕೋಳೂರು ಪಂಪಾಪತಿ, ಮೌಲಾಸಾಬ್, ಮಸ್ತಾನಪ್ಪ, ಗುರುಶೇಖರ್, ಶಿವಪ್ಪ, ಮಸ್ತಾನ್ ಸಾಬ್, ಮಲ್ಲಯ್ಯ, ಜಂಬಣ್ಣ, ತಿಮ್ಮಪ್ಪ ಮತ್ತು ದೊಡ್ಡಮೌಲಾಸಾಬ್ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುರುಗೋಡು:</strong> ತಾಲ್ಲೂಕಿನ ಕೋಳೂರು ಗ್ರಾಮ ಪಂಚಾಯಿತಿ ಎದುರು ಅಖಿಲ ಭಾರತ ರೈತ, ಕೃಷಿ ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್) ಪದಾಧಿಕಾರಿಗಳು ಒಡಿಶಾ ರಾಜ್ಯದಲ್ಲಿ ಆದಿವಾಸಿಗಳ ಭೂ ಕಬಳಿಕೆ ವಿರೋಧಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.</p>.<p>ಬಲವಂತದ ಭೂ ಸ್ವಾಧೀನ ಕ್ರಮಕ್ಕೆ ಮುಂದಾಗಿರುವವರ ವಿರುದ್ಧ ಪ್ರತಿಭಟನಾನಿರತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.</p>.<p>ಸಂಘಟನೆ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡಿ, ಬಡ ಆದಿವಾಸಿಗಳ ಕೃಷಿಯೋಗ್ಯ ಜಮೀನು ಬಲವಂತದಿಂದ ಕಸಿದುಕೊಂಡು ಜಿಂದಾಲ್ ಮತ್ತು ಪೋಸ್ಕೊದಂತಹ ಅಂತರರಾಷ್ಟ್ರೀಯ ಕಂಪನಿಗಳಿಗೆ ಹಂಚಿಕೆ ಮಾಡಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದರು.</p>.<p>ಹೋರಾಟದಲ್ಲಿ ತೊಡಗಿದ್ದ ಸಂಘಟನೆಗಳ ಮುಖಂಡರಾದ ಸತ್ಯವಾನ್ ಮತ್ತು ಸದಾಶಿವದಾಸ್ ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.</p>.<p>ಸಂಘಟನೆಯ ಮುಖಂಡರಾದ ಕೋಳೂರು ಪಂಪಾಪತಿ, ಮೌಲಾಸಾಬ್, ಮಸ್ತಾನಪ್ಪ, ಗುರುಶೇಖರ್, ಶಿವಪ್ಪ, ಮಸ್ತಾನ್ ಸಾಬ್, ಮಲ್ಲಯ್ಯ, ಜಂಬಣ್ಣ, ತಿಮ್ಮಪ್ಪ ಮತ್ತು ದೊಡ್ಡಮೌಲಾಸಾಬ್ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>