<p><strong>ಹಗರಿಬೊಮ್ಮನಹಳ್ಳಿ:</strong> ತಾಲ್ಲೂಕಿನ ನಾರಾಯಣದೇವರಕೆರೆ ಗ್ರಾಮದ ಬಳಿ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಅಪರೂಪದ ಬಾನಾಡಿಗಳು ಬೇಟೆಗಾರರ ಪಾಲಾಗುತ್ತಿವೆ.</p>.<p>ಹಿನ್ನೀರು ಪ್ರದೇಶದಲ್ಲಿ ದೊರೆಯುವ ಇಷ್ಟವಾದ ಮೀನು, ಹುಳ ಹುಪ್ಪಟೆಗಳ ಆಹಾರ ಅರಸಿ ಬರುವ ಕರಿತಲೆಯ ಕೆಂಬರಲು(ಬ್ಲಾಕ್ ಹೆಡೆಡ್ ಐಬೀಸ್), ಬೂದುಬಕ(ಗ್ರೆಹೆರಾನ್), ನದಿರೀವ (ರಿವರ್ಟರ್ನ್) ಸೇರಿದಂತೆ ಹಲವು ಪಕ್ಷಿಗಳು ಬಲಿಯಾಗಿವೆ.</p>.<p>ಬೇಟೆಯಾಡಿ ತಿನ್ನದೇ ಉಳಿದಿರುವ ಪಕ್ಷಿಗಳ ತಲೆ, ಕಾಲು ಮತ್ತು ಪುಚ್ಚಗಳು ಹಿನ್ನೀರು ಪ್ರದೇಶದ ಬಯಲಿನಲ್ಲಿ ಅಲ್ಲಲ್ಲಿ ಕಾಣಸಿಗುತ್ತವೆ. ಬಿಎನ್ಎಚ್ಎಸ್ ಸಂಶೋಧಕರು ಮತ್ತು ಗ್ರೀನ್ ಎಚ್ಬಿಎಚ್ ತಂಡ ಈಚೆಗೆ ಪ್ರದೇಶಕ್ಕೆ ಭೇಟಿ ನೀಡಿದಾಗ ಪಕ್ಷಿಗಳ ಕಳೇಬರಗಳನ್ನು ಪ್ರತ್ಯಕ್ಷವಾಗಿ ಕಂಡಿದ್ದು, ಬೇಟೆಗಾರರಿಂದಲೇ ಸಾವಾಗಿರುವುದನ್ನು ಖಚಿತಪಡಿಸಿದ್ದಾರೆ.</p>.<p>ಜಲಾಶಯಕ್ಕೆ ಬರುವ ಮೀನುಗಾರರು ಬೀಸಿದ ಬಲೆಗಳಲ್ಲಿಯೂ ಪಕ್ಷಿಗಳು ಸುಲಭವಾಗಿ ಸೆರೆಯಾಗಿ ಜೀವ ಕಳೆದುಕೊಂಡಿವೆ. ಈ ಕುರಿತಂತೆ ಪಕ್ಷಿಪ್ರೇಮಿಗಳು ಮೀನುಗಾರರು ಮತ್ತು ಬೇಟೆಗಾರರಿಗೆ ಹಲವು ಬಾರಿ ತಿಳಿವಳಿಕೆ ನೀಡಿದ್ದರೂ ಅಪರೂಪದ ಬಾನಾಡಿಗಳ ಬೇಟೆ ಮಾತ್ರ ಕಡಿಮೆ ಆಗಿಲ್ಲ.</p>.<p>ತಾಲ್ಲೂಕಿನ ರಾಮ್ಸಾರ್ ತಾಣ ಖ್ಯಾತಿಯ ಅಂಕಸಮುದ್ರ ಪಕ್ಷಿಧಾಮದಲ್ಲಿ ವಾಸ್ತವ್ಯ ಹೂಡಿರುವ ಹಲವು ಬಾನಾಡಿಗಳು ಆಹಾರಕ್ಕಾಗಿ ಹಿನ್ನೀರು ಪ್ರದೇಶವನ್ನು ಆಯ್ಕೆ ಮಾಡಿಕೊಂಡಿವೆ. 168 ಪ್ರಭೇದಗಳ 50 ಸಾವಿರಕ್ಕೂ ಹೆಚ್ಚು ಪಕ್ಷಿಗಳು ಈಚೆಗೆ ನಡೆಸಿದ ಗಣತಿಯಲ್ಲಿ ಪತ್ತೆಯಾಗಿದ್ದವು.</p>.<p>ಬಣ್ಣದ ಕೊಕ್ಕರೆ (ಪೇಂಟೆಡ್ ಸ್ಟಾರ್ಕ್), ಓಪನ್ ಬಿಲ್ ಸ್ಟಾರ್ಕ್(ಬಾಯ್ಕಳಕ), ಮಿಂಚು ಕೆಂಬರಲು (ಗ್ಲೋಸಿ ಐಬೀಸ್) ಸಾವಿರಾರು ಸಂಖ್ಯೆಯಲ್ಲಿವೆ. ದೇಶವಿದೇಶಗಳಿಂದ ವಲಸೆ ಬರುವ ಅತಿಥಿ ಬಾನಾಡಿಗಳಿಗೆ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ರಕ್ಷಣೆ ದೊರೆಯಬೇಕು ಎನ್ನುವುದು ಇಲ್ಲಿನ ಪಕ್ಷಿಪ್ರೇಮಿಗಳ ಒತ್ತಾಸೆಯಾಗಿದೆ.</p>.<div><blockquote>ಈ ಸ್ಥಳ ತುಂಗಭದ್ರಾ ಬೋರ್ಡ್ಗೆ ಸೇರಿದೆ ಅರಣ್ಯ ಇಲಾಖೆಗೆ ಒಳಪಡುವ ಪ್ರದೇಶಗಳಲ್ಲಿ ಬೇಟೆ ಆಡಿದಲ್ಲಿ ಕ್ರಮ ಜರುಗಿಸಲಾಗುವುದು ಈ ಕುರಿತಂತೆ ಗಮನ ಹರಿಸಲಾಗುವುದು </blockquote><span class="attribution">-ಭರತ್ರಾಜ್, ವಲಯ ಅರಣ್ಯ ಅಧಿಕಾರಿ ಹೊಸಪೇಟೆ ವಲಯ</span></div>.<div><blockquote>ಅರಣ್ಯ ಇಲಾಖೆ ಅಧಿಕಾರಿಗಳು ಹಿನ್ನೀರು ಪ್ರದೇಶದಲ್ಲಿ ಪಕ್ಷಿ ಬೇಟೆಯಾಡುವುದನ್ನು ತಡೆಯಲು ಸಿಬ್ಬಂದಿ ನಿಯೋಜಿಸಬೇಕು ಅಲ್ಲಲ್ಲಿ ಎಚ್ಚರಿಕೆಯ ಬೋರ್ಡ್ ಹಾಕಬೇಕು </blockquote><span class="attribution">-ಇಟ್ಟಿಗಿ ವಿಜಯಕುಮಾರ್ ಆನಂದ್ಬಾಬು ಗ್ರೀನ್ ಎಚ್ಬಿಎಚ್ ತಂಡದ ಸದಸ್ಯರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಗರಿಬೊಮ್ಮನಹಳ್ಳಿ:</strong> ತಾಲ್ಲೂಕಿನ ನಾರಾಯಣದೇವರಕೆರೆ ಗ್ರಾಮದ ಬಳಿ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಅಪರೂಪದ ಬಾನಾಡಿಗಳು ಬೇಟೆಗಾರರ ಪಾಲಾಗುತ್ತಿವೆ.</p>.<p>ಹಿನ್ನೀರು ಪ್ರದೇಶದಲ್ಲಿ ದೊರೆಯುವ ಇಷ್ಟವಾದ ಮೀನು, ಹುಳ ಹುಪ್ಪಟೆಗಳ ಆಹಾರ ಅರಸಿ ಬರುವ ಕರಿತಲೆಯ ಕೆಂಬರಲು(ಬ್ಲಾಕ್ ಹೆಡೆಡ್ ಐಬೀಸ್), ಬೂದುಬಕ(ಗ್ರೆಹೆರಾನ್), ನದಿರೀವ (ರಿವರ್ಟರ್ನ್) ಸೇರಿದಂತೆ ಹಲವು ಪಕ್ಷಿಗಳು ಬಲಿಯಾಗಿವೆ.</p>.<p>ಬೇಟೆಯಾಡಿ ತಿನ್ನದೇ ಉಳಿದಿರುವ ಪಕ್ಷಿಗಳ ತಲೆ, ಕಾಲು ಮತ್ತು ಪುಚ್ಚಗಳು ಹಿನ್ನೀರು ಪ್ರದೇಶದ ಬಯಲಿನಲ್ಲಿ ಅಲ್ಲಲ್ಲಿ ಕಾಣಸಿಗುತ್ತವೆ. ಬಿಎನ್ಎಚ್ಎಸ್ ಸಂಶೋಧಕರು ಮತ್ತು ಗ್ರೀನ್ ಎಚ್ಬಿಎಚ್ ತಂಡ ಈಚೆಗೆ ಪ್ರದೇಶಕ್ಕೆ ಭೇಟಿ ನೀಡಿದಾಗ ಪಕ್ಷಿಗಳ ಕಳೇಬರಗಳನ್ನು ಪ್ರತ್ಯಕ್ಷವಾಗಿ ಕಂಡಿದ್ದು, ಬೇಟೆಗಾರರಿಂದಲೇ ಸಾವಾಗಿರುವುದನ್ನು ಖಚಿತಪಡಿಸಿದ್ದಾರೆ.</p>.<p>ಜಲಾಶಯಕ್ಕೆ ಬರುವ ಮೀನುಗಾರರು ಬೀಸಿದ ಬಲೆಗಳಲ್ಲಿಯೂ ಪಕ್ಷಿಗಳು ಸುಲಭವಾಗಿ ಸೆರೆಯಾಗಿ ಜೀವ ಕಳೆದುಕೊಂಡಿವೆ. ಈ ಕುರಿತಂತೆ ಪಕ್ಷಿಪ್ರೇಮಿಗಳು ಮೀನುಗಾರರು ಮತ್ತು ಬೇಟೆಗಾರರಿಗೆ ಹಲವು ಬಾರಿ ತಿಳಿವಳಿಕೆ ನೀಡಿದ್ದರೂ ಅಪರೂಪದ ಬಾನಾಡಿಗಳ ಬೇಟೆ ಮಾತ್ರ ಕಡಿಮೆ ಆಗಿಲ್ಲ.</p>.<p>ತಾಲ್ಲೂಕಿನ ರಾಮ್ಸಾರ್ ತಾಣ ಖ್ಯಾತಿಯ ಅಂಕಸಮುದ್ರ ಪಕ್ಷಿಧಾಮದಲ್ಲಿ ವಾಸ್ತವ್ಯ ಹೂಡಿರುವ ಹಲವು ಬಾನಾಡಿಗಳು ಆಹಾರಕ್ಕಾಗಿ ಹಿನ್ನೀರು ಪ್ರದೇಶವನ್ನು ಆಯ್ಕೆ ಮಾಡಿಕೊಂಡಿವೆ. 168 ಪ್ರಭೇದಗಳ 50 ಸಾವಿರಕ್ಕೂ ಹೆಚ್ಚು ಪಕ್ಷಿಗಳು ಈಚೆಗೆ ನಡೆಸಿದ ಗಣತಿಯಲ್ಲಿ ಪತ್ತೆಯಾಗಿದ್ದವು.</p>.<p>ಬಣ್ಣದ ಕೊಕ್ಕರೆ (ಪೇಂಟೆಡ್ ಸ್ಟಾರ್ಕ್), ಓಪನ್ ಬಿಲ್ ಸ್ಟಾರ್ಕ್(ಬಾಯ್ಕಳಕ), ಮಿಂಚು ಕೆಂಬರಲು (ಗ್ಲೋಸಿ ಐಬೀಸ್) ಸಾವಿರಾರು ಸಂಖ್ಯೆಯಲ್ಲಿವೆ. ದೇಶವಿದೇಶಗಳಿಂದ ವಲಸೆ ಬರುವ ಅತಿಥಿ ಬಾನಾಡಿಗಳಿಗೆ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ರಕ್ಷಣೆ ದೊರೆಯಬೇಕು ಎನ್ನುವುದು ಇಲ್ಲಿನ ಪಕ್ಷಿಪ್ರೇಮಿಗಳ ಒತ್ತಾಸೆಯಾಗಿದೆ.</p>.<div><blockquote>ಈ ಸ್ಥಳ ತುಂಗಭದ್ರಾ ಬೋರ್ಡ್ಗೆ ಸೇರಿದೆ ಅರಣ್ಯ ಇಲಾಖೆಗೆ ಒಳಪಡುವ ಪ್ರದೇಶಗಳಲ್ಲಿ ಬೇಟೆ ಆಡಿದಲ್ಲಿ ಕ್ರಮ ಜರುಗಿಸಲಾಗುವುದು ಈ ಕುರಿತಂತೆ ಗಮನ ಹರಿಸಲಾಗುವುದು </blockquote><span class="attribution">-ಭರತ್ರಾಜ್, ವಲಯ ಅರಣ್ಯ ಅಧಿಕಾರಿ ಹೊಸಪೇಟೆ ವಲಯ</span></div>.<div><blockquote>ಅರಣ್ಯ ಇಲಾಖೆ ಅಧಿಕಾರಿಗಳು ಹಿನ್ನೀರು ಪ್ರದೇಶದಲ್ಲಿ ಪಕ್ಷಿ ಬೇಟೆಯಾಡುವುದನ್ನು ತಡೆಯಲು ಸಿಬ್ಬಂದಿ ನಿಯೋಜಿಸಬೇಕು ಅಲ್ಲಲ್ಲಿ ಎಚ್ಚರಿಕೆಯ ಬೋರ್ಡ್ ಹಾಕಬೇಕು </blockquote><span class="attribution">-ಇಟ್ಟಿಗಿ ವಿಜಯಕುಮಾರ್ ಆನಂದ್ಬಾಬು ಗ್ರೀನ್ ಎಚ್ಬಿಎಚ್ ತಂಡದ ಸದಸ್ಯರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>