<p><strong>ಬಳ್ಳಾರಿ:</strong> ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ (ವಿಎಸ್ಕೆಯು) ಗುರುವಾರ ನಡೆದ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಯರಾದ ಹಂಸಾ 4 ಮತ್ತು ರಾಜೇಶ್ವರಿ 3 ಚಿನ್ನದ ಪದಕ ಪಡೆದು, ಸಂಭ್ರಮಿಸಿದರು.</p>.<p><strong>ಬಡತನದಲ್ಲಿ ಅರಳಿದ ಪ್ರತಿಭೆ:</strong> ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆಯ ಹಂಸಾ ಅವರ ತಾಯಿ ನಾಗಮ್ಮ ತರಕಾರಿ ಮಾರುತ್ತಾರೆ. ಅವರಿಗೆ ಹಂಸಾ ನಾಲ್ಕನೇ ಪುತ್ರಿ. ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುವ ಅವರು, ನಾಲ್ಕು ಚಿನ್ನದ ಪದಕಗಳನ್ನು ಪಡೆದರು.</p>.<p>‘ನನಗೆ ಪ್ರಾಧ್ಯಾಪಕಿ ಆಗುವ ಗುರಿಯಿದೆ. ಅದು ನನ್ನ ಕನಸಿನ ವೃತ್ತಿ. ಅದಕ್ಕೆ ಈಗಾಗಲೇ ತಯಾರಿ ನಡೆಸಿದ್ದೇನೆ. ಎಲ್ಲರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಸಿಗುತ್ತಿದೆ’ ಎಂದು ಹಂಸಾ ತಿಳಿಸಿದರು.</p>.<p><strong>ಸಾಧನೆಗೆ ಗ್ರಾಂಥಾಲಯ ಕಾರಣ:</strong> ಸ್ನಾತಕೋತ್ತರ ಔದ್ಯೋಗಿಕ ರಸಾಯನಶಾಸ್ತ್ರದಲ್ಲಿ ಮೂರು ಚಿನ್ನದ ಪದಕ ಪಡೆದಿರುವ ರಾಜೇಶ್ವರಿ, ತಮ್ಮ ಸಾಧನೆಗೆ ಗ್ರಂಥಾಲಯ ಕಾರಣ ಎಂದಿದ್ದಾರೆ. ನಿತ್ಯ ಬೆಳಿಗ್ಗೆ 8ಕ್ಕೆ ಬಂದು ಇಡೀ ದಿನ ಪತ್ರಿಕೆ, ಪುಸ್ತಕಗಳನ್ನು ಓದುತ್ತಿದ್ದೆ. ಅಗತ್ಯ ಮಾಹಿತಿ ಪಡೆದುಕೊಳ್ಳುತ್ತಿದ್ದೆ’ ಎಂದು ರಾಜೇಶ್ವರಿ ತಿಳಿಸಿದರು.</p>.<p>ವೃತ್ತಿಯಲ್ಲಿ ಅಕ್ಕಸಾಲಿಗರಾದ ಗಿರೀಶ್ ಅವರ ಪುತ್ರಿ ರಾಜೇಶ್ವರಿ ಅವರು ಪ್ರಾಧ್ಯಾಪಕಿ ಆಗುವ ಗುರಿ ಹೊಂದಿದ್ದಾರೆ. ‘ಪ್ರೊಫೆಸರ್ ಆಗುವ ಗುರಿ ಇದೆ. ಅದಕ್ಕಾಗಿ ಪ್ರಯತ್ನ ನಡೆಸಿದ್ದೇನೆ’ ಎಂದು ಅವರು ತಿಳಿಸಿದರು.</p>.<p><strong>ಮೂವರಿಗೆ ಡಾಕ್ಟರೇಟ್</strong>: ವೈದ್ಯ ಸಾಹಿತಿ ಡಾ. ವಸುಂದರಾ ಭೂಪತಿ, ಗಣಿ ಉದ್ಯಮಿ ಬಾವಿಹಳ್ಳಿ ನಾಗನಗೌಡ, ಪ್ರೆಸ್ಟೀಜ್ ಗ್ರೂಪ್ನ ಗೌರವಾಧ್ಯಕ್ಷ ಇರ್ಫಾನ್ ರಜಾಕ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.</p>.<p>ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹಲೊತ್ ಮಾತನಾಡಿ, ‘ವೇದ, ಉಪನಿಷತ್ತು, ಆಯುರ್ವೇದ, ಯೋಗ, ವಾಸ್ತು, ತತ್ವಶಾಸ್ತ್ರ, ನ್ಯಾಯಶಾಸ್ತ್ರ ಎಲ್ಲವೂ ನಮ್ಮ ಅಮೂಲ್ಯ ಪರಂಪರೆ. ಹೊಸ ಶಿಕ್ಷಣ ನೀತಿಯು ಶಿಕ್ಷಣ ವ್ಯವಸ್ಥೆಯಲ್ಲಿ ಅವುಗಳಿಗೆ ಮತ್ತೆ ಸ್ಥಾನ ನೀಡಿದೆ. ಭಾರತ ‘ವಿಶ್ವ ಗುರು’ ಆಗುವತ್ತ ಮುನ್ನಡೆದಿದೆ. ಈ ಪ್ರಯಾಣದಲ್ಲಿ ಯುವಕರು ಪ್ರಮುಖ ಶಕ್ತಿಯಾಗಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ (ವಿಎಸ್ಕೆಯು) ಗುರುವಾರ ನಡೆದ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಯರಾದ ಹಂಸಾ 4 ಮತ್ತು ರಾಜೇಶ್ವರಿ 3 ಚಿನ್ನದ ಪದಕ ಪಡೆದು, ಸಂಭ್ರಮಿಸಿದರು.</p>.<p><strong>ಬಡತನದಲ್ಲಿ ಅರಳಿದ ಪ್ರತಿಭೆ:</strong> ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆಯ ಹಂಸಾ ಅವರ ತಾಯಿ ನಾಗಮ್ಮ ತರಕಾರಿ ಮಾರುತ್ತಾರೆ. ಅವರಿಗೆ ಹಂಸಾ ನಾಲ್ಕನೇ ಪುತ್ರಿ. ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುವ ಅವರು, ನಾಲ್ಕು ಚಿನ್ನದ ಪದಕಗಳನ್ನು ಪಡೆದರು.</p>.<p>‘ನನಗೆ ಪ್ರಾಧ್ಯಾಪಕಿ ಆಗುವ ಗುರಿಯಿದೆ. ಅದು ನನ್ನ ಕನಸಿನ ವೃತ್ತಿ. ಅದಕ್ಕೆ ಈಗಾಗಲೇ ತಯಾರಿ ನಡೆಸಿದ್ದೇನೆ. ಎಲ್ಲರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಸಿಗುತ್ತಿದೆ’ ಎಂದು ಹಂಸಾ ತಿಳಿಸಿದರು.</p>.<p><strong>ಸಾಧನೆಗೆ ಗ್ರಾಂಥಾಲಯ ಕಾರಣ:</strong> ಸ್ನಾತಕೋತ್ತರ ಔದ್ಯೋಗಿಕ ರಸಾಯನಶಾಸ್ತ್ರದಲ್ಲಿ ಮೂರು ಚಿನ್ನದ ಪದಕ ಪಡೆದಿರುವ ರಾಜೇಶ್ವರಿ, ತಮ್ಮ ಸಾಧನೆಗೆ ಗ್ರಂಥಾಲಯ ಕಾರಣ ಎಂದಿದ್ದಾರೆ. ನಿತ್ಯ ಬೆಳಿಗ್ಗೆ 8ಕ್ಕೆ ಬಂದು ಇಡೀ ದಿನ ಪತ್ರಿಕೆ, ಪುಸ್ತಕಗಳನ್ನು ಓದುತ್ತಿದ್ದೆ. ಅಗತ್ಯ ಮಾಹಿತಿ ಪಡೆದುಕೊಳ್ಳುತ್ತಿದ್ದೆ’ ಎಂದು ರಾಜೇಶ್ವರಿ ತಿಳಿಸಿದರು.</p>.<p>ವೃತ್ತಿಯಲ್ಲಿ ಅಕ್ಕಸಾಲಿಗರಾದ ಗಿರೀಶ್ ಅವರ ಪುತ್ರಿ ರಾಜೇಶ್ವರಿ ಅವರು ಪ್ರಾಧ್ಯಾಪಕಿ ಆಗುವ ಗುರಿ ಹೊಂದಿದ್ದಾರೆ. ‘ಪ್ರೊಫೆಸರ್ ಆಗುವ ಗುರಿ ಇದೆ. ಅದಕ್ಕಾಗಿ ಪ್ರಯತ್ನ ನಡೆಸಿದ್ದೇನೆ’ ಎಂದು ಅವರು ತಿಳಿಸಿದರು.</p>.<p><strong>ಮೂವರಿಗೆ ಡಾಕ್ಟರೇಟ್</strong>: ವೈದ್ಯ ಸಾಹಿತಿ ಡಾ. ವಸುಂದರಾ ಭೂಪತಿ, ಗಣಿ ಉದ್ಯಮಿ ಬಾವಿಹಳ್ಳಿ ನಾಗನಗೌಡ, ಪ್ರೆಸ್ಟೀಜ್ ಗ್ರೂಪ್ನ ಗೌರವಾಧ್ಯಕ್ಷ ಇರ್ಫಾನ್ ರಜಾಕ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.</p>.<p>ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹಲೊತ್ ಮಾತನಾಡಿ, ‘ವೇದ, ಉಪನಿಷತ್ತು, ಆಯುರ್ವೇದ, ಯೋಗ, ವಾಸ್ತು, ತತ್ವಶಾಸ್ತ್ರ, ನ್ಯಾಯಶಾಸ್ತ್ರ ಎಲ್ಲವೂ ನಮ್ಮ ಅಮೂಲ್ಯ ಪರಂಪರೆ. ಹೊಸ ಶಿಕ್ಷಣ ನೀತಿಯು ಶಿಕ್ಷಣ ವ್ಯವಸ್ಥೆಯಲ್ಲಿ ಅವುಗಳಿಗೆ ಮತ್ತೆ ಸ್ಥಾನ ನೀಡಿದೆ. ಭಾರತ ‘ವಿಶ್ವ ಗುರು’ ಆಗುವತ್ತ ಮುನ್ನಡೆದಿದೆ. ಈ ಪ್ರಯಾಣದಲ್ಲಿ ಯುವಕರು ಪ್ರಮುಖ ಶಕ್ತಿಯಾಗಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>