ಇದಕ್ಕೆ ವಿರೋಧ ವ್ಯಕ್ತಪಡಿಸಿದ ನೌಕರರು, ಮುಖ್ಯಮಂತ್ರಿಯೇ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ಕುಪಿತರಾದ ಸಚಿವರು, ‘ನಿಮ್ಮಿಂದ ಹೇಳಿಸಿಕೊಳ್ಳಲು ಬಂದಿಲ್ಲ. ಅದೇನ್ ಮಾಡ್ಕೊತಿರೊ ಮಾಡ್ಕೊಳಿ. ಸರ್ಕಾರದ ಮಟ್ಟದಲ್ಲಿ ನಿರ್ಧಾರ ಮಾಡುವಾಗ ಸಾಧಕ– ಬಾಧಕಗಳ ಕುರಿತು ಚರ್ಚಿಸಬೇಕಾಗುತ್ತದೆ. ಎಲ್ಲವನ್ನೂ ಇಲ್ಲಿಯೇ ಮಾಡಲಾಗುವುದಿಲ್ಲ. ಮುಖ್ಯಮಂತ್ರಿಯೇ ಬರಬೆಕು ಎನ್ನುವುದೂ ಸರಿಯಲ್ಲ’ ಎಂದು ತಿಳಿಸಿದರು. ‘ನಾವು ಬಂದದ್ದು ತಪ್ಪಾಯಿತು; ಕ್ಷಮಿಸಿ’ ಎಂದು ಮಾತು ಮುಗಿಸಿ ಹೊರಡಲು ಮುಂದಾದರು.