<p><strong>ಬೆಳಗಾವಿ:</strong> ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂದು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಂಗೇಶ ಪವಾರ್ ಹಾಗೂ ಜಯಂತ ಜಾಧವ ಅವರ ಮಹಾನಗರ ಪಾಲಿಕೆ ಸದಸ್ಯತ್ವ ರದ್ದು ಮಾಡಲಾಗಿತ್ತು. </p><p>ಪಾಲಿಕೆಯಿಂದ ನಿರ್ಮಿಸಿದ ವಾಣಿಜ್ಯ ಮಳಿಗೆಗಳಲ್ಲಿ ಈ ಇಬ್ಬರೂ ತಮ್ಮ ಪತ್ನಿ ಹೆಸರಿನಲ್ಲಿ ಮಳಿಗೆ ಹೊಂದಿದ್ದಾರೆ ಎಂದು ಆರೋಪಿಸಿ ನೀಡಿದ ದೂರು ಆಧರಿಸಿ ಅನರ್ಹ ಮಾಡಲಾಗಿತ್ತು.</p>.ಬೆಳಗಾವಿ ಮಹಾನಗರ ಪಾಲಿಕೆ: ಮರಾಠಿಗ ಮಂಗೇಶ ಮೇಯರ್, ಕನ್ನಡತಿ ವಾಣಿ ಉಪಮೇಯರ್ .<p>ಇದನ್ನು ಪ್ರಶ್ನಿಸಿ ನಗರಾಭಿವೃದ್ಧಿ ಇಲಾಖೆಯ ಅಯುಕ್ತರಿಗೆ ದೂರು ನೀಡಲಾಗಿತ್ತು. ಆದರೆ, ಅಲ್ಲಿಯೂ ಇಬ್ಬರ ಸದಸ್ಯತ್ವ ಅನೂರ್ಜಿತ ಮಾಡಲಾಗಿತ್ತು.</p><p>ನಂತರ ಇಬ್ಬರೂ ಸದಸ್ಯರು ಹೈಕೋರ್ಟ್ ಮೊರೆಹೋದರು. ಅಧಿಕಾರಿಗಳ ಕ್ರಮಕ್ಕೆ ಚಾಟಿ ಬೀಸಿದ ಹೈಕೋರ್ಟ್ ಸದಸ್ಯತ್ವ ರದ್ದತಿಯ ಆದೇಶಕ್ಕೆ ತಡೆ ನೀಡಿತು.</p><p>ಮೇಯರ್ ಚುನಾವಣೆ ಎರಡೇ ದಿನ ಬಾಕಿ ಇರುವಾಗ ಈ ಆದೇಶ ಹೊರಬಿತ್ತು. </p>.ಬೆಳಗಾವಿ | ಕನ್ನಡಿಗರಿಗೆ ಮೇಯರ್, ಮರಾಠಿಗರಿಗೆ ಉಪಮೇಯರ್?.<p>ಅನರ್ಹಗೊಂಡಿದ್ದ ಮಂಗೇಶ ಅವರನ್ನೇ ಮೇಯರ್ ಮಾಡಬೇಕು. ಕಾಂಗ್ರೆಸ್ ಮಾತು ಕೇಳಿ ಅನರ್ಹಗೊಳಿಸಿದ ಅಧಿಕಾರಿಯಿಂದಲೇ ಮೇಯರ್ ಪ್ರಮಾಣ ಪತ್ರ ಕೊಡಿಸಬೇಕು ಎಂದು ಹಟ ಹಿಡಿದ ಶಾಸಕ ಅಭಯ ಪಾಟೀಲ ಅದನ್ನು ಸಾಧಿಸಿಯೇ ಬಿಟ್ಟರು. </p><p>ಇವರ ಪತ್ನಿ ಪಾಲಿಕೆ ಚುನಾವಣೆಗೂ ಎರಡು ವರ್ಷ ಮುಂಚೆಯೇ ಮಳಿಗೆಯನ್ನು ಹರಾಜಿನಲ್ಲಿ ಪಡೆದಿದ್ದಾರೆ. ಅದು ವಾಣಿಜ್ಯ ಚಟುವಟಿಕೆ. ಲಾಭದಾಯಕ ಹುದ್ದೆ ಅಲ್ಲ ಎಂದು ನ್ಯಾಯಾಲಯದಲ್ಲಿ ಆರೋಪಿಗಳ ಪರ ವಕೀಲರು ವಾದ ಮಂಡಿಸಿದ್ದರು. </p><p>ಮಂಗೇಶ ಅವರನ್ನು ಅನರ್ಹಗೊಳಿಸಿದ್ದ ಪ್ರಾದೇಶಿಕ ಆಯಕ್ತ ಸಂಜಯ ಶೆಟ್ಟೆಣ್ಣವರ ಅವರೇ ಶನಿವಾರ ಅವರಿಗೆ ಮೇಯರ್ ಪ್ರಮಾಣ ಪತ್ರ ನೀಡಿದರು.</p> .ಗೋಕಾಕ ನಗರಸಭೆ: ₹4.95 ಲಕ್ಷ ಉಳಿತಾಯದ ಬಜೆಟ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂದು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಂಗೇಶ ಪವಾರ್ ಹಾಗೂ ಜಯಂತ ಜಾಧವ ಅವರ ಮಹಾನಗರ ಪಾಲಿಕೆ ಸದಸ್ಯತ್ವ ರದ್ದು ಮಾಡಲಾಗಿತ್ತು. </p><p>ಪಾಲಿಕೆಯಿಂದ ನಿರ್ಮಿಸಿದ ವಾಣಿಜ್ಯ ಮಳಿಗೆಗಳಲ್ಲಿ ಈ ಇಬ್ಬರೂ ತಮ್ಮ ಪತ್ನಿ ಹೆಸರಿನಲ್ಲಿ ಮಳಿಗೆ ಹೊಂದಿದ್ದಾರೆ ಎಂದು ಆರೋಪಿಸಿ ನೀಡಿದ ದೂರು ಆಧರಿಸಿ ಅನರ್ಹ ಮಾಡಲಾಗಿತ್ತು.</p>.ಬೆಳಗಾವಿ ಮಹಾನಗರ ಪಾಲಿಕೆ: ಮರಾಠಿಗ ಮಂಗೇಶ ಮೇಯರ್, ಕನ್ನಡತಿ ವಾಣಿ ಉಪಮೇಯರ್ .<p>ಇದನ್ನು ಪ್ರಶ್ನಿಸಿ ನಗರಾಭಿವೃದ್ಧಿ ಇಲಾಖೆಯ ಅಯುಕ್ತರಿಗೆ ದೂರು ನೀಡಲಾಗಿತ್ತು. ಆದರೆ, ಅಲ್ಲಿಯೂ ಇಬ್ಬರ ಸದಸ್ಯತ್ವ ಅನೂರ್ಜಿತ ಮಾಡಲಾಗಿತ್ತು.</p><p>ನಂತರ ಇಬ್ಬರೂ ಸದಸ್ಯರು ಹೈಕೋರ್ಟ್ ಮೊರೆಹೋದರು. ಅಧಿಕಾರಿಗಳ ಕ್ರಮಕ್ಕೆ ಚಾಟಿ ಬೀಸಿದ ಹೈಕೋರ್ಟ್ ಸದಸ್ಯತ್ವ ರದ್ದತಿಯ ಆದೇಶಕ್ಕೆ ತಡೆ ನೀಡಿತು.</p><p>ಮೇಯರ್ ಚುನಾವಣೆ ಎರಡೇ ದಿನ ಬಾಕಿ ಇರುವಾಗ ಈ ಆದೇಶ ಹೊರಬಿತ್ತು. </p>.ಬೆಳಗಾವಿ | ಕನ್ನಡಿಗರಿಗೆ ಮೇಯರ್, ಮರಾಠಿಗರಿಗೆ ಉಪಮೇಯರ್?.<p>ಅನರ್ಹಗೊಂಡಿದ್ದ ಮಂಗೇಶ ಅವರನ್ನೇ ಮೇಯರ್ ಮಾಡಬೇಕು. ಕಾಂಗ್ರೆಸ್ ಮಾತು ಕೇಳಿ ಅನರ್ಹಗೊಳಿಸಿದ ಅಧಿಕಾರಿಯಿಂದಲೇ ಮೇಯರ್ ಪ್ರಮಾಣ ಪತ್ರ ಕೊಡಿಸಬೇಕು ಎಂದು ಹಟ ಹಿಡಿದ ಶಾಸಕ ಅಭಯ ಪಾಟೀಲ ಅದನ್ನು ಸಾಧಿಸಿಯೇ ಬಿಟ್ಟರು. </p><p>ಇವರ ಪತ್ನಿ ಪಾಲಿಕೆ ಚುನಾವಣೆಗೂ ಎರಡು ವರ್ಷ ಮುಂಚೆಯೇ ಮಳಿಗೆಯನ್ನು ಹರಾಜಿನಲ್ಲಿ ಪಡೆದಿದ್ದಾರೆ. ಅದು ವಾಣಿಜ್ಯ ಚಟುವಟಿಕೆ. ಲಾಭದಾಯಕ ಹುದ್ದೆ ಅಲ್ಲ ಎಂದು ನ್ಯಾಯಾಲಯದಲ್ಲಿ ಆರೋಪಿಗಳ ಪರ ವಕೀಲರು ವಾದ ಮಂಡಿಸಿದ್ದರು. </p><p>ಮಂಗೇಶ ಅವರನ್ನು ಅನರ್ಹಗೊಳಿಸಿದ್ದ ಪ್ರಾದೇಶಿಕ ಆಯಕ್ತ ಸಂಜಯ ಶೆಟ್ಟೆಣ್ಣವರ ಅವರೇ ಶನಿವಾರ ಅವರಿಗೆ ಮೇಯರ್ ಪ್ರಮಾಣ ಪತ್ರ ನೀಡಿದರು.</p> .ಗೋಕಾಕ ನಗರಸಭೆ: ₹4.95 ಲಕ್ಷ ಉಳಿತಾಯದ ಬಜೆಟ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>