<p><strong>ಬೆಂಗಳೂರು:</strong> ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಲೆಕ್ಕಪರಿಶೋಧನೆಯಲ್ಲಿ ₹2,010 ಕೋಟಿಯಷ್ಟು ಅಕ್ರಮ ಕಂಡು ಬಂದಿದ್ದು, ಇದರಲ್ಲಿ ₹422 ಕೋಟಿ ಮಾತ್ರ ವಸೂಲಿ ಮಾಡಲಾಗಿದೆ.</p>.<p>ಬಿಬಿಎಂಪಿ ಮುಖ್ಯ ಲೆಕ್ಕಪರಿಶೋಧಕರು ಸಲ್ಲಿಸಿರುವ 2021–22ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ಈ ಅಂಶ ಪ್ರಕಟಿಸಲಾಗಿದ್ದು, 696 ಆಕ್ಷೇಪಣೆಗಳನ್ನು ಸಲ್ಲಿಸಲಾಗಿತ್ತು. 124 ಕಂಡಿಕೆಗಳಲ್ಲಿ ವಸೂಲಾತಿಯಾಗಿದ್ದು, ಇನ್ನುಳಿದ 625 ಆಕ್ಷೇಪಣೆಗಳಿಗೆ ಯಾವ ಉತ್ತರವನ್ನೂ ಬಿಬಿಎಂಪಿ ನೀಡಿಲ್ಲ. 1964ರಿಂದ 2021–22ರ ಅವಧಿಯಲ್ಲಿ 2021–22ರಲ್ಲಿನ ಆಕ್ಷೇಪಣೆ ಅತಿಹೆಚ್ಚಿನದ್ದಾಗಿದೆ.</p>.<p>ಲೆಕ್ಕಪರಿಶೋಧನೆ ವರದಿಯಲ್ಲಿ ಪ್ರಸ್ತಾಪಿಸಿರುವ ಕಂಡಿಕೆಗಳ ನ್ಯೂನತೆ ಮತ್ತು ವಸೂಲಾತಿಗಳ ಬಗ್ಗೆ ಸಕಾಲದಲ್ಲಿ ಕ್ರಮ ಜರುಗಿಸದಿರುವುದರಿಂದ ಪಾಲಿಕೆಗೆ ನಷ್ಟವಾಗುವ ಸಂಭವವಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ. ಈ ಸಾಲಿನ ಲೆಕ್ಕಪರಿಶೋಧನೆ ವರದಿಯೊಂದಿಗೆ ಹಿಂದಿನ ಸಾಲಿನ ವರದಿಗಳ ಮೇಲೆಯೂ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಸಲ್ಲಿಸಬೇಕು ಎಂದು ಅಭಿಪ್ರಾಯಪಡಲಾಗಿದೆ.</p>.<p><strong>₹8 ಕೋಟಿ ಹೆಚ್ಚುವರಿ ಬಿಲ್ ಪಾವತಿ:</strong> ಸಾಮಾನ್ಯ ಆಡಳಿತ, ಕಾಮಗಾರಿ, ಆರೋಗ್ಯ ಹಾಗೂ ಶಿಕ್ಷಣ ವಿಭಾಗಗಳಲ್ಲಿ ಹೆಚ್ಚುವರಿ ಪಾವತಿಯಿಂದ ₹8.01 ಕೋಟಿ ನಷ್ಟವಾಗಿರುವುದನ್ನು ವರದಿಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.</p>.<p><strong>ನಿಯಮ ಉಲ್ಲಂಘನೆ:</strong> ಕಾಮಗಾರಿ ಅನುಷ್ಠಾನ ಹಾಗೂ ಸಾಮಗ್ರಿ ಖರೀದಿಯಲ್ಲಿ ₹15.95 ಕೋಟಿಯನ್ನು ನಿಯಮ ಉಲ್ಲಂಘಿಸಿ ಪಾವತಿಸಲಾಗಿದೆ. ಸಾಮಾನ್ಯ ಆಡಳಿತದಲ್ಲಿ ₹9.98 ಕೋಟಿ, ಆರೋಗ್ಯ ವಿಭಾಗದಲ್ಲಿ ₹1.57 ಕೋಟಿ, ಕಾಮಗಾರಿಯಲ್ಲಿ ₹4.28 ಹಾಗೂ ಶಿಕ್ಷಣ ಇಲಾಖೆಯಲ್ಲಿ ₹11.36 ಲಕ್ಷ ಪಾವತಿಸಲಾಗಿದೆ.</p>.<p>ಬೃಹತ್ ನೀರುಗಾಲುವೆ ಹಾಗೂ ಘನತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ಅತಿಹೆಚ್ಚು ನಿಯಮ ಉಲ್ಲಂಘನೆಗಳಾಗಿವೆ. ಎಸ್ಆರ್ ದರ ಜಾರಿಯಾಗುವ ಮುನ್ನವೇ ದರಪಟ್ಟಿಯನ್ನು ಅನ್ವಯಿಸಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಅದರಂತೆಯೇ ಬೊಮ್ಮನಹಳ್ಳಿ ವಿಭಾಗದಲ್ಲಿ ₹78.97 ಲಕ್ಷ ಪಾವತಿಸಲಾಗಿದೆ. ಒಂದು ಸಂಸ್ಥೆಗೆ ಗುತ್ತಿಗೆ ನೀಡಿದ್ದರೆ ಮತ್ತೊಬ್ಬ ಗುತ್ತಿಗೆದಾರರಿಗೆ ಬಿಲ್ ಪಾವತಿಸಿರುವ ಪ್ರಕರಣಗಳು ಈ ಎರಡು ವಿಭಾಗಗಳಲ್ಲಿ ಹೆಚ್ಚಾಗಿವೆ.</p>.<h2>ಒಂದೇ ಕಾಮಗಾರಿಗೆ ಎರಡು ಬಿಲ್ಲು!</h2><p>ಬೃಹತ್ ನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಕಚೇರಿಯಿಂದ ಮಾಗಡಿ ರಸ್ತೆಯಲ್ಲಿ ನಿರ್ವಹಿಸಲಾದ ನೀರುಗಾಲುವೆ ಕಾಂಕ್ರೀಟ್ ಬಾಕ್ಸ್ ಕಾಮಗಾರಿಗೆ ಆನ್ಲೈನ್ ಹಾಗೂ ಆಫ್ಲೈನ್ ಎರಡಲ್ಲೂ ಪಾಂಡುರಂಗ ಅವರಿಗೆ ₹7.37 ಲಕ್ಷ ಪಾವತಿಸಲಾಗಿದೆ. ಮುಖ್ಯ ಎಂಜಿನಿಯರ್ ಅವರ ಕರ್ತವ್ಯ ನಿರ್ಲಕ್ಷ್ಯತೆ ಗಂಭೀರವಾದದ್ದು ಎಂದು ವರದಿಯಲ್ಲಿ ಹೇಳಲಾಗಿದೆ.</p><p><strong>ಇಬ್ಬರಿಗೆ ಬಿಲ್:</strong> ದಾಸರಹಳ್ಳಿ ಉಪವಿಭಾಗದಲ್ಲಿ ಹಣಕಾಸು ಉಪ ನಿಯಂತ್ರಕರ ಕಚೇರಿಯ ಶೌಚಾಲಯ ದುರಸ್ತಿಗೆ ಗುತ್ತಿಗೆದಾರರ ಎಚ್.ಎಸ್. ಗಿರೀಶ್ ಅವರಿಗೆ 2021ರ ಫೆಬ್ರುವರಿ 16ರಂದು ₹99,508 ಪಾವತಿಸಲಾಗಿದೆ. ಇದೇ ಕೆಲಸಕ್ಕಾಗಿ ಗುತ್ತಿಗೆದಾರ ಎನ್.ಎಂ. ಚೇತನ್ ಅವರಿಗೆ ಅಷ್ಟೇ ಮೊತ್ತವನ್ನು ಮಾರ್ಚ್ 19ರಂದು ಪಾವತಿಸಲಾಗಿದೆ.</p><p><strong>ಎರಡು ಬಾರಿ ಪಾವತಿ:</strong> ಬೊಮ್ಮನಹಳ್ಳಿ ವಿಭಾಗದ ರಸ್ತೆ ಮೂಲಸೌಕರ್ಯ ಕಾರ್ಯಪಾಲಕ ಎಂಜಿನಿಯರ್ ವತಿಯಿಂದ ಕೈಗೊಂಡ ಚರಂಡಿ ಸ್ಲ್ಯಾಬ್ ತೆಗೆಯುವುದು ಮತ್ತು ಮರು ಅಳವಡಿಸುವ ಕಾರ್ಯಕ್ಕೆ ಎರಡು ಬಾರಿ ಒಟ್ಟು ₹1.16 ಲಕ್ಷ ಪಾವತಿಸಲಾಗಿದೆ.</p><p><strong>ಒಂದು ಶುಲ್ಕ, ಎರಡು ಬಿಲ್ಲು</strong>: ಒಎಫ್ಸಿ ವಿಭಾಗದ ಕಾರ್ಯಪಾಲಕರ ಕಚೇರಿಯಲ್ಲಿ ಒಂದೇ ಡಿ.ಡಿಗೆ ಎರಡು ಬಾರಿ ರಸೀದಿಯನ್ನು ನೀಡಲಾಗಿದೆ. 31 ಪ್ರಕರಣಗಳಲ್ಲಿ <br>₹4.21 ಕೋಟಿ ಮೊತ್ತಕ್ಕೆ 62 ರಸೀದಿಗಳನ್ನು ನೀಡಲಾಗಿದೆ.</p>.<p><strong>ಮಾಡದ ಕಾಮಗಾರಿಗೆ ಬಿಲ್ಲು!</strong></p><p>ಗಾಂಧಿನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ವ್ಯಾಪ್ತಿಯಲ್ಲಿ ದಕ್ಷಿಣ ಸೆಂಟ್ರಲ್ ಲಿಂಕ್ ರಸ್ತೆಗೆ ಎರಡು ದಿಕ್ಕಿನಲ್ಲಿ ಡ್ರೈನ್ನಲ್ಲಿ ಹೂಳು ತೆಗೆಯಲು, ಹಳೆಯ ಸ್ಲ್ಯಾಬ್ ತೆಗೆದು ಮರು ಅಳವಡಿಸುವ ಕಾಮಗಾರಿಗಾಗಿ ₹63.83 ಲಕ್ಷ ಪಾವತಿಸಲಾಗಿದೆ. ಆದರೆ, ಹಳೆಯ ಸ್ಲ್ಯಾಬ್ ತೆಗೆದು, ಹೊಸದಾಗಿ ಅಳವಡಿಸಿದ ಯಾವುದೇ ವಿವರ ಇಲ್ಲದ್ದರಿಂದ, ಕಾಮಗಾರಿ ನಡೆದಿರುವುದು ಸತ್ಯಕ್ಕೆ ದೂರವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.</p><p><strong>ಇಂದಿರಾ ಕ್ಯಾಂಟೀನ್: ಪಾರ್ಸಲ್ಗೆ ಶುಲ್ಕ!</strong></p><p>ಇಂದಿರಾ ಕ್ಯಾಂಟೀನ್ಗಳಲ್ಲಿ ಪಾರ್ಸೆಲ್ಗೆ ಅವಕಾಶವಿಲ್ಲದಿದ್ದರೂ ₹11.59 ಲಕ್ಷವನ್ನು ಬೊಮ್ಮನಹಳ್ಳಿ ವಲಯದ ಹಣಕಾಸು ವಿಭಾಗದ ಉಪ ನಿಯಂತ್ರಕರು ರಿವಾರ್ಡ್ಸ್ ಎಂಬ ಸಂಸ್ಥೆಗೆ ಜಿಸಿಎಸ್ಟಿ ಸೇರಿದಂತೆ ಹಣ ಪಾವತಿಸಿದ್ದಾರೆ. ಟೆಂಡರ್ ಕರಾರು ಒಪ್ಪಂದ ಮತ್ತು ಕಾರ್ಯಾದೇಶದಲ್ಲೂ ಪಾರ್ಸಲ್ ಶುಲ್ಕ ಪಾವತಿಸಲು ಅವಕಾಶವಿಲ್ಲ.</p>.<p><strong>ಪ್ರಮುಖ ತೊಡಕುಗಳು</strong></p><p>* ನಗದು ಪುಸ್ತಕ ಅಸರ್ಮಪಕ ನಿರ್ವಹಣೆ</p><p>* ಪೂರ್ಣ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಒದಗಿಸದಿರುವುದು</p><p>* ಅಸಮರ್ಪಕ ಕಾರಣ ನೀಡಿ ಲೆಕ್ಕ ತನಿಖಾ ಕಾರ್ಯಕ್ರಮ ಮುಂದೂಡಿಕೆ</p><p>* ಲೆಕ್ಕಪರಿಶೋಧನೆಗ ಅಧಿಕಾರಿ/ ಸಿಬ್ಬಂದಿಯಿಂದ ಅಸಹಕಾರ ಮನೋಭಾವ</p><p>* ನಿಗದಿತ ಅವಧಿಯಲ್ಲಿ ಸಲ್ಲಿಕೆಯಾಗದ ವಾರ್ಷಿಕ ಲೆಕ್ಕಪತ್ರ </p><p>* ಲೆಕ್ಕಪತ್ರಗಳು, ದಾಖಲೆಗಳು, ನಿಗದಿತ ನಮೂನೆಯ ವಹಿ ನಿರ್ವಹಿಸದಿರುವುದು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಲೆಕ್ಕಪರಿಶೋಧನೆಯಲ್ಲಿ ₹2,010 ಕೋಟಿಯಷ್ಟು ಅಕ್ರಮ ಕಂಡು ಬಂದಿದ್ದು, ಇದರಲ್ಲಿ ₹422 ಕೋಟಿ ಮಾತ್ರ ವಸೂಲಿ ಮಾಡಲಾಗಿದೆ.</p>.<p>ಬಿಬಿಎಂಪಿ ಮುಖ್ಯ ಲೆಕ್ಕಪರಿಶೋಧಕರು ಸಲ್ಲಿಸಿರುವ 2021–22ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ಈ ಅಂಶ ಪ್ರಕಟಿಸಲಾಗಿದ್ದು, 696 ಆಕ್ಷೇಪಣೆಗಳನ್ನು ಸಲ್ಲಿಸಲಾಗಿತ್ತು. 124 ಕಂಡಿಕೆಗಳಲ್ಲಿ ವಸೂಲಾತಿಯಾಗಿದ್ದು, ಇನ್ನುಳಿದ 625 ಆಕ್ಷೇಪಣೆಗಳಿಗೆ ಯಾವ ಉತ್ತರವನ್ನೂ ಬಿಬಿಎಂಪಿ ನೀಡಿಲ್ಲ. 1964ರಿಂದ 2021–22ರ ಅವಧಿಯಲ್ಲಿ 2021–22ರಲ್ಲಿನ ಆಕ್ಷೇಪಣೆ ಅತಿಹೆಚ್ಚಿನದ್ದಾಗಿದೆ.</p>.<p>ಲೆಕ್ಕಪರಿಶೋಧನೆ ವರದಿಯಲ್ಲಿ ಪ್ರಸ್ತಾಪಿಸಿರುವ ಕಂಡಿಕೆಗಳ ನ್ಯೂನತೆ ಮತ್ತು ವಸೂಲಾತಿಗಳ ಬಗ್ಗೆ ಸಕಾಲದಲ್ಲಿ ಕ್ರಮ ಜರುಗಿಸದಿರುವುದರಿಂದ ಪಾಲಿಕೆಗೆ ನಷ್ಟವಾಗುವ ಸಂಭವವಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ. ಈ ಸಾಲಿನ ಲೆಕ್ಕಪರಿಶೋಧನೆ ವರದಿಯೊಂದಿಗೆ ಹಿಂದಿನ ಸಾಲಿನ ವರದಿಗಳ ಮೇಲೆಯೂ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಸಲ್ಲಿಸಬೇಕು ಎಂದು ಅಭಿಪ್ರಾಯಪಡಲಾಗಿದೆ.</p>.<p><strong>₹8 ಕೋಟಿ ಹೆಚ್ಚುವರಿ ಬಿಲ್ ಪಾವತಿ:</strong> ಸಾಮಾನ್ಯ ಆಡಳಿತ, ಕಾಮಗಾರಿ, ಆರೋಗ್ಯ ಹಾಗೂ ಶಿಕ್ಷಣ ವಿಭಾಗಗಳಲ್ಲಿ ಹೆಚ್ಚುವರಿ ಪಾವತಿಯಿಂದ ₹8.01 ಕೋಟಿ ನಷ್ಟವಾಗಿರುವುದನ್ನು ವರದಿಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.</p>.<p><strong>ನಿಯಮ ಉಲ್ಲಂಘನೆ:</strong> ಕಾಮಗಾರಿ ಅನುಷ್ಠಾನ ಹಾಗೂ ಸಾಮಗ್ರಿ ಖರೀದಿಯಲ್ಲಿ ₹15.95 ಕೋಟಿಯನ್ನು ನಿಯಮ ಉಲ್ಲಂಘಿಸಿ ಪಾವತಿಸಲಾಗಿದೆ. ಸಾಮಾನ್ಯ ಆಡಳಿತದಲ್ಲಿ ₹9.98 ಕೋಟಿ, ಆರೋಗ್ಯ ವಿಭಾಗದಲ್ಲಿ ₹1.57 ಕೋಟಿ, ಕಾಮಗಾರಿಯಲ್ಲಿ ₹4.28 ಹಾಗೂ ಶಿಕ್ಷಣ ಇಲಾಖೆಯಲ್ಲಿ ₹11.36 ಲಕ್ಷ ಪಾವತಿಸಲಾಗಿದೆ.</p>.<p>ಬೃಹತ್ ನೀರುಗಾಲುವೆ ಹಾಗೂ ಘನತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ಅತಿಹೆಚ್ಚು ನಿಯಮ ಉಲ್ಲಂಘನೆಗಳಾಗಿವೆ. ಎಸ್ಆರ್ ದರ ಜಾರಿಯಾಗುವ ಮುನ್ನವೇ ದರಪಟ್ಟಿಯನ್ನು ಅನ್ವಯಿಸಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಅದರಂತೆಯೇ ಬೊಮ್ಮನಹಳ್ಳಿ ವಿಭಾಗದಲ್ಲಿ ₹78.97 ಲಕ್ಷ ಪಾವತಿಸಲಾಗಿದೆ. ಒಂದು ಸಂಸ್ಥೆಗೆ ಗುತ್ತಿಗೆ ನೀಡಿದ್ದರೆ ಮತ್ತೊಬ್ಬ ಗುತ್ತಿಗೆದಾರರಿಗೆ ಬಿಲ್ ಪಾವತಿಸಿರುವ ಪ್ರಕರಣಗಳು ಈ ಎರಡು ವಿಭಾಗಗಳಲ್ಲಿ ಹೆಚ್ಚಾಗಿವೆ.</p>.<h2>ಒಂದೇ ಕಾಮಗಾರಿಗೆ ಎರಡು ಬಿಲ್ಲು!</h2><p>ಬೃಹತ್ ನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಕಚೇರಿಯಿಂದ ಮಾಗಡಿ ರಸ್ತೆಯಲ್ಲಿ ನಿರ್ವಹಿಸಲಾದ ನೀರುಗಾಲುವೆ ಕಾಂಕ್ರೀಟ್ ಬಾಕ್ಸ್ ಕಾಮಗಾರಿಗೆ ಆನ್ಲೈನ್ ಹಾಗೂ ಆಫ್ಲೈನ್ ಎರಡಲ್ಲೂ ಪಾಂಡುರಂಗ ಅವರಿಗೆ ₹7.37 ಲಕ್ಷ ಪಾವತಿಸಲಾಗಿದೆ. ಮುಖ್ಯ ಎಂಜಿನಿಯರ್ ಅವರ ಕರ್ತವ್ಯ ನಿರ್ಲಕ್ಷ್ಯತೆ ಗಂಭೀರವಾದದ್ದು ಎಂದು ವರದಿಯಲ್ಲಿ ಹೇಳಲಾಗಿದೆ.</p><p><strong>ಇಬ್ಬರಿಗೆ ಬಿಲ್:</strong> ದಾಸರಹಳ್ಳಿ ಉಪವಿಭಾಗದಲ್ಲಿ ಹಣಕಾಸು ಉಪ ನಿಯಂತ್ರಕರ ಕಚೇರಿಯ ಶೌಚಾಲಯ ದುರಸ್ತಿಗೆ ಗುತ್ತಿಗೆದಾರರ ಎಚ್.ಎಸ್. ಗಿರೀಶ್ ಅವರಿಗೆ 2021ರ ಫೆಬ್ರುವರಿ 16ರಂದು ₹99,508 ಪಾವತಿಸಲಾಗಿದೆ. ಇದೇ ಕೆಲಸಕ್ಕಾಗಿ ಗುತ್ತಿಗೆದಾರ ಎನ್.ಎಂ. ಚೇತನ್ ಅವರಿಗೆ ಅಷ್ಟೇ ಮೊತ್ತವನ್ನು ಮಾರ್ಚ್ 19ರಂದು ಪಾವತಿಸಲಾಗಿದೆ.</p><p><strong>ಎರಡು ಬಾರಿ ಪಾವತಿ:</strong> ಬೊಮ್ಮನಹಳ್ಳಿ ವಿಭಾಗದ ರಸ್ತೆ ಮೂಲಸೌಕರ್ಯ ಕಾರ್ಯಪಾಲಕ ಎಂಜಿನಿಯರ್ ವತಿಯಿಂದ ಕೈಗೊಂಡ ಚರಂಡಿ ಸ್ಲ್ಯಾಬ್ ತೆಗೆಯುವುದು ಮತ್ತು ಮರು ಅಳವಡಿಸುವ ಕಾರ್ಯಕ್ಕೆ ಎರಡು ಬಾರಿ ಒಟ್ಟು ₹1.16 ಲಕ್ಷ ಪಾವತಿಸಲಾಗಿದೆ.</p><p><strong>ಒಂದು ಶುಲ್ಕ, ಎರಡು ಬಿಲ್ಲು</strong>: ಒಎಫ್ಸಿ ವಿಭಾಗದ ಕಾರ್ಯಪಾಲಕರ ಕಚೇರಿಯಲ್ಲಿ ಒಂದೇ ಡಿ.ಡಿಗೆ ಎರಡು ಬಾರಿ ರಸೀದಿಯನ್ನು ನೀಡಲಾಗಿದೆ. 31 ಪ್ರಕರಣಗಳಲ್ಲಿ <br>₹4.21 ಕೋಟಿ ಮೊತ್ತಕ್ಕೆ 62 ರಸೀದಿಗಳನ್ನು ನೀಡಲಾಗಿದೆ.</p>.<p><strong>ಮಾಡದ ಕಾಮಗಾರಿಗೆ ಬಿಲ್ಲು!</strong></p><p>ಗಾಂಧಿನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ವ್ಯಾಪ್ತಿಯಲ್ಲಿ ದಕ್ಷಿಣ ಸೆಂಟ್ರಲ್ ಲಿಂಕ್ ರಸ್ತೆಗೆ ಎರಡು ದಿಕ್ಕಿನಲ್ಲಿ ಡ್ರೈನ್ನಲ್ಲಿ ಹೂಳು ತೆಗೆಯಲು, ಹಳೆಯ ಸ್ಲ್ಯಾಬ್ ತೆಗೆದು ಮರು ಅಳವಡಿಸುವ ಕಾಮಗಾರಿಗಾಗಿ ₹63.83 ಲಕ್ಷ ಪಾವತಿಸಲಾಗಿದೆ. ಆದರೆ, ಹಳೆಯ ಸ್ಲ್ಯಾಬ್ ತೆಗೆದು, ಹೊಸದಾಗಿ ಅಳವಡಿಸಿದ ಯಾವುದೇ ವಿವರ ಇಲ್ಲದ್ದರಿಂದ, ಕಾಮಗಾರಿ ನಡೆದಿರುವುದು ಸತ್ಯಕ್ಕೆ ದೂರವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.</p><p><strong>ಇಂದಿರಾ ಕ್ಯಾಂಟೀನ್: ಪಾರ್ಸಲ್ಗೆ ಶುಲ್ಕ!</strong></p><p>ಇಂದಿರಾ ಕ್ಯಾಂಟೀನ್ಗಳಲ್ಲಿ ಪಾರ್ಸೆಲ್ಗೆ ಅವಕಾಶವಿಲ್ಲದಿದ್ದರೂ ₹11.59 ಲಕ್ಷವನ್ನು ಬೊಮ್ಮನಹಳ್ಳಿ ವಲಯದ ಹಣಕಾಸು ವಿಭಾಗದ ಉಪ ನಿಯಂತ್ರಕರು ರಿವಾರ್ಡ್ಸ್ ಎಂಬ ಸಂಸ್ಥೆಗೆ ಜಿಸಿಎಸ್ಟಿ ಸೇರಿದಂತೆ ಹಣ ಪಾವತಿಸಿದ್ದಾರೆ. ಟೆಂಡರ್ ಕರಾರು ಒಪ್ಪಂದ ಮತ್ತು ಕಾರ್ಯಾದೇಶದಲ್ಲೂ ಪಾರ್ಸಲ್ ಶುಲ್ಕ ಪಾವತಿಸಲು ಅವಕಾಶವಿಲ್ಲ.</p>.<p><strong>ಪ್ರಮುಖ ತೊಡಕುಗಳು</strong></p><p>* ನಗದು ಪುಸ್ತಕ ಅಸರ್ಮಪಕ ನಿರ್ವಹಣೆ</p><p>* ಪೂರ್ಣ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಒದಗಿಸದಿರುವುದು</p><p>* ಅಸಮರ್ಪಕ ಕಾರಣ ನೀಡಿ ಲೆಕ್ಕ ತನಿಖಾ ಕಾರ್ಯಕ್ರಮ ಮುಂದೂಡಿಕೆ</p><p>* ಲೆಕ್ಕಪರಿಶೋಧನೆಗ ಅಧಿಕಾರಿ/ ಸಿಬ್ಬಂದಿಯಿಂದ ಅಸಹಕಾರ ಮನೋಭಾವ</p><p>* ನಿಗದಿತ ಅವಧಿಯಲ್ಲಿ ಸಲ್ಲಿಕೆಯಾಗದ ವಾರ್ಷಿಕ ಲೆಕ್ಕಪತ್ರ </p><p>* ಲೆಕ್ಕಪತ್ರಗಳು, ದಾಖಲೆಗಳು, ನಿಗದಿತ ನಮೂನೆಯ ವಹಿ ನಿರ್ವಹಿಸದಿರುವುದು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>