ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಪಘಾತ ಉಂಟು ಮಾಡಿದ ಚಾಲಕ, ಮೃತರು ಹಾಗೂ ಗಾಯಾಳುಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗುವುದು. ಚಾಲಕ ಮದ್ಯ ಕುಡಿದಿದ್ದು ಖಾತ್ರಿಯಾಗುತ್ತಿದ್ದಂತೆ ಐಪಿಸಿ 304 ಸೆಕ್ಷನ್ ಸೇರಿಸಲಾಗುವುದು. ಇತ್ತೀಚೆಗೆ ಸಂಭವಿಸಿದ್ದ 8 ಅಪಘಾತ ಪ್ರಕರಣಗಳಲ್ಲಿ ಈಗಾಗಲೇ ಈ ಕ್ರಮ ಕೈಗೊಳ್ಳಲಾಗಿದೆ’ ಎಂದರು.