‘ಸಂಯುಕ್ತ ಹಾಗೂ ಸ್ನೇಹಿತರು, ನಿತ್ಯವೂ ಅಗರ ಕೆರೆ ಆವರಣದಲ್ಲಿ ವ್ಯಾಯಾಮ ಮಾಡಲು ಹೋಗಿ ಬರುತ್ತಿದ್ದರು. ಇದೇ 4ರಂದು ಸಂಜೆ ಸಹ ವ್ಯಾಯಾಮ ಮಾಡುತ್ತಿದ್ದರು. ಸ್ಥಳಕ್ಕೆ ಬಂದು ಪ್ರಶ್ನಿಸಿದ್ದ ಕವಿತಾ ರೆಡ್ಡಿ, ಅನಿಲ್ ರೆಡ್ಡಿ ಹಾಗೂ ಇತರರು, ‘ಸಾರ್ವಜನಿಕವಾಗಿ ತುಂಡು ಬಟ್ಟೆ ಧರಿಸಿ ಅಸಭ್ಯವಾಗಿ ವರ್ತಿಸುತ್ತಿದ್ದೀರಿ’ ಎಂದು ನಟಿಯನ್ನು ಅವಾಚ್ಯವಾಗಿ ನಿಂದಿಸಿದ್ದರು. ಹಲ್ಲೆಗೂ ಯತ್ನಿಸಿದ್ದರು. ಈ ಸಂಗತಿ ಸಂಯುಕ್ತ ಅವರ ದೂರಿನಲ್ಲಿತ್ತು.’