<p><strong>ಬೆಂಗಳೂರು</strong>: ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಜಂಟಿಯಾಗಿ ‘ಬೆಂಗಳೂರು ಕಿರುನಾಟಕೋತ್ಸವ’ 5ನೇ ಆವೃತ್ತಿಯ ಅಂತಿಮ ಸ್ಪರ್ಧೆಯನ್ನು ಇದೇ ಶನಿವಾರ (ಜುಲೈ 12) ಸಂಜೆ 6 ಗಂಟೆಗೆ ಮಲ್ಲತ್ತಹಳ್ಳಿಯ ಕಲಾ ಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಂಡಿದೆ. </p><p>ಈ ನಾಟಕೋತ್ಸವವು ‘ಪ್ರಜಾವಾಣಿ’ ಮಾಧ್ಯಮ ಸಹಯೋಗದಲ್ಲಿ ನಡೆಯಲಿದೆ. ‘ಸಮಗ್ರತೆ’ ನಾಟಕೋತ್ಸವದ ವಿಷಯವಾಗಿದೆ. ಮೊದಲ ಹಂತದ ಸ್ಪರ್ಧೆಯಲ್ಲಿ 13 ತಂಡಗಳು ಭಾಗವಹಿಸಿದ್ದವು. ಆರು ತಂಡಗಳು ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿವೆ.</p><p>ರಂಗಕರ್ಮಿ ಬಿ. ಸುರೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕಿ ಬನಶಂಕರಿ ವಿ. ಅಂಗಡಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಅವರು ಅಂತಿಮ ಸ್ಪರ್ಧೆಯ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸುತ್ತಾರೆ.</p><p>ದೃಶ್ಯಕಾವ್ಯ ತಂಡದ ‘ನೀಲಿ-ನೀರು’, ರಂಗಚಿರಂತನ ತಂಡದ ‘ಅಕ್ಕ’, ಖಾಲಿರಂಗ ತಂಡದ ‘ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ವೀಕೆಂಡ್ ಥಿಯೇಟರ್ನ ‘3/4’, ರಿ-ವ್ಯೂ ಥಿಯೇಟರ್ ಕಲೆಕ್ಟಿವ್ ತಂಡದ ‘ವಿಧುರ’ ಹಾಗೂ ಸ್ಪಷ್ಟ ಥಿಯೇಟರ್ ತಂಡದ ‘ಪಲ್ಸ್’ ನಾಟಕ ಅಂತಿಮ ಪ್ರದರ್ಶನಕ್ಕೆ ಆಯ್ಕೆಯಾಗಿವೆ.</p><p>ಅತ್ಯುತ್ತಮ ನಾಟಕ ಸೇರಿ ಹತ್ತು ಪ್ರಶಸ್ತಿಗಳನ್ನು ಕಿರುನಾಟಕೋತ್ಸವ ಒಳಗೊಂಡಿದ್ದು, ₹ 2,500ರಿಂದ ₹ 10,000ದವರೆಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಕಿರುನಾಟಕೋತ್ಸವದ ಕಲಾತ್ಮಕ ನಿರ್ದೇಶಕ ಹನು ರಾಮಸಂಜೀವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಜಂಟಿಯಾಗಿ ‘ಬೆಂಗಳೂರು ಕಿರುನಾಟಕೋತ್ಸವ’ 5ನೇ ಆವೃತ್ತಿಯ ಅಂತಿಮ ಸ್ಪರ್ಧೆಯನ್ನು ಇದೇ ಶನಿವಾರ (ಜುಲೈ 12) ಸಂಜೆ 6 ಗಂಟೆಗೆ ಮಲ್ಲತ್ತಹಳ್ಳಿಯ ಕಲಾ ಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಂಡಿದೆ. </p><p>ಈ ನಾಟಕೋತ್ಸವವು ‘ಪ್ರಜಾವಾಣಿ’ ಮಾಧ್ಯಮ ಸಹಯೋಗದಲ್ಲಿ ನಡೆಯಲಿದೆ. ‘ಸಮಗ್ರತೆ’ ನಾಟಕೋತ್ಸವದ ವಿಷಯವಾಗಿದೆ. ಮೊದಲ ಹಂತದ ಸ್ಪರ್ಧೆಯಲ್ಲಿ 13 ತಂಡಗಳು ಭಾಗವಹಿಸಿದ್ದವು. ಆರು ತಂಡಗಳು ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿವೆ.</p><p>ರಂಗಕರ್ಮಿ ಬಿ. ಸುರೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕಿ ಬನಶಂಕರಿ ವಿ. ಅಂಗಡಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಅವರು ಅಂತಿಮ ಸ್ಪರ್ಧೆಯ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸುತ್ತಾರೆ.</p><p>ದೃಶ್ಯಕಾವ್ಯ ತಂಡದ ‘ನೀಲಿ-ನೀರು’, ರಂಗಚಿರಂತನ ತಂಡದ ‘ಅಕ್ಕ’, ಖಾಲಿರಂಗ ತಂಡದ ‘ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ವೀಕೆಂಡ್ ಥಿಯೇಟರ್ನ ‘3/4’, ರಿ-ವ್ಯೂ ಥಿಯೇಟರ್ ಕಲೆಕ್ಟಿವ್ ತಂಡದ ‘ವಿಧುರ’ ಹಾಗೂ ಸ್ಪಷ್ಟ ಥಿಯೇಟರ್ ತಂಡದ ‘ಪಲ್ಸ್’ ನಾಟಕ ಅಂತಿಮ ಪ್ರದರ್ಶನಕ್ಕೆ ಆಯ್ಕೆಯಾಗಿವೆ.</p><p>ಅತ್ಯುತ್ತಮ ನಾಟಕ ಸೇರಿ ಹತ್ತು ಪ್ರಶಸ್ತಿಗಳನ್ನು ಕಿರುನಾಟಕೋತ್ಸವ ಒಳಗೊಂಡಿದ್ದು, ₹ 2,500ರಿಂದ ₹ 10,000ದವರೆಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಕಿರುನಾಟಕೋತ್ಸವದ ಕಲಾತ್ಮಕ ನಿರ್ದೇಶಕ ಹನು ರಾಮಸಂಜೀವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>