ಕಲ್ಕೆರೆ ಪಕ್ಕದಲ್ಲಿ ಬಾಲಾಜಿ ಲೇಔಟ್, ಕಾವೇರಿ ನಗರ, ಸಾಯಿ ಲೇಔಟ್ ಸೇರಿದಂತೆ ವಿವಿಧ ಬಡಾವಣೆಗಳು ಹಾಗೂ ವಸತಿ ಪ್ರದೇಶಗಳು ತಗ್ಗು ಪ್ರದೇಶದಲ್ಲಿವೆ. ಜೋರು ಮಳೆಯಾದಾಗ ಹೆಬ್ಬಾಳ ಕಣಿವೆಯ ನೀರು ಹರಿದುಬರುವ ರಾಜಕಾಲುವೆ ತುಂಬಿ ವಡ್ಡರಪಾಳ್ಯ, ಸಾಯಿಬಾಬಾ ಬಡಾವಣೆ, ಅನುಗ್ರಹ ಬಡಾವಣೆಗಲೂ ಜಲಾವೃತಗೊಳ್ಳುತ್ತವೆ. ಹೆಬ್ಬಾಳ ಕಣಿವೆಯ ರಾಜಕಾಲುವೆಗೆ ಈಗಾಗಲೇ ಕೆಲವೆಡೆ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗಿದೆ. ಕಚ್ಚಾ ರಾಜಕಾಲುವೆ ಇರುವಲ್ಲಿಯೂ ತಡೆಗೋಡೆ ನಿರ್ಮಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದರು.