‘ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನ ಮೂಲಕ ಶಿವಶಂಕರ್ಗೆ ಆರೋಪಿ ಕೆ. ರವಿಕುಮಾರ್ ಪರಿಚಯವಾಗಿತ್ತು. ಸುಲಿಗೆ ಯತ್ನ ಪ್ರಕರಣದಲ್ಲಿ ರವಿಕುಮಾರ್ ಜೈಲಿಗೆ ಹೋಗಿಬಂದಿದ್ದ ವಿಷಯ ತಿಳಿದಿದ್ದ ಶಿವಶಂಕರ್, ‘ಪತ್ತೇದಾರಿ ಕೆಲಸಕ್ಕೆ ನೋಂದಣಿ ಸಂಖ್ಯೆ ಫಲಕವಿಲ್ಲದ ವಾಹನಗಳು ಬೇಕು. ಕಳವು ಮಾಡಿ ತನ್ನಿ, ಹಣ ಕೊಡುತ್ತೇನೆ’ ಎಂದಿದ್ದ. ಅದಕ್ಕೆ ಒಪ್ಪಿದ್ದ ರವಿಕುಮಾರ್, ಸಹಚರರ ಜೊತೆ ಸೇರಿ ವಾಹನ ಕಳವು ಮಾಡಲಾರಂಭಿಸಿದ್ದ’ ಎಂದೂ ಪೊಲೀಸರು ತಿಳಿಸಿದರು.