ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಬೆಂಗಳೂರಿನ 68 ಶಾಲೆಗಳಿಗೆ ಬಾಂಬ್ ಬೆದರಿಕೆ: ಪೋಷಕರಲ್ಲಿ ಆತಂಕ

Published : 1 ಡಿಸೆಂಬರ್ 2023, 5:18 IST
Last Updated : 1 ಡಿಸೆಂಬರ್ 2023, 5:18 IST
ಫಾಲೋ ಮಾಡಿ
Comments
‘ಅಲ್ಲಾಹುವಿನ ಶತ್ರುಗಳನ್ನು ಬಿಡುವುದಿಲ್ಲ’
‘ಶಾಲಾ ಮೈದಾನದಲ್ಲಿ ಸ್ಫೋಟಕಗಳನ್ನು ಇರಿಸಲಾಗಿದೆ. ನ.26ರಂದು ಅಲ್ಲಾಹುವಿನ ಮಾರ್ಗದಲ್ಲಿ ನಮ್ಮ ಹುತಾತ್ಮರು ನೂರಾರು ಮೂರ್ತಿ ಪೂಜಕರನ್ನು ಹತ್ಯೆ ಮಾಡಿದ್ದಾರೆ. ನೂರಾರು ಮುಜಾಹಿದ್​ಗಳು ಅಲ್ಲಾಹುವಿನ ಮಾರ್ಗದಲ್ಲಿ ಹೋರಾಟ ನಡೆಸಲು ಈಗ ಸಜ್ಜಾಗಿದ್ದೇವೆ. ನೀವು ಅಲ್ಲಾಹುವಿನ ಶತ್ರುಗಳು. ನಿಮ್ಮನ್ನು ಹಾಗೂ ನಿಮ್ಮ ಮಕ್ಕಳನ್ನು ಬಿಡುವುದಿಲ್ಲ’ ಎಂದು ಇ– ಮೇಲ್‌ನಲ್ಲಿ ಪ್ರಸ್ತಾಪಿಸಲಾಗಿದೆ. ‘ನೀವೆಲ್ಲರೂ ನಮ್ಮ ಗುಲಾಮರಾಗದೆ ಬೇರೆ ಆಯ್ಕೆಗಳೇ ಇಲ್ಲ. ಅಲ್ಲಾಹುವಿನ ನೈಜ ಧರ್ಮವನ್ನು ಸ್ವೀಕರಿಸಿ.‌ ನಿಮ್ಮ ದೇವಸ್ಥಾನಗಳು, ನಿಮ್ಮ ಮೂರ್ತಿಗಳು, ಬುದ್ಧನಿಂದ ಅನಂತತ್ವದವರೆಗಿನ ನಿಮ್ಮ ನಂಬಿಕೆಗಳೆಲ್ಲವನ್ನೂ ಸ್ಪೋಟಿಸಲಿದ್ದೇವೆ. ಇಸ್ಲಾಂಗೆ ಎಲ್ಲರೂ ಮತಾಂತರಗೊಳ್ಳಬೇಕು. ಇಲ್ಲವೇ ಇಸ್ಲಾಂನ ಹರಿತವಾದ ಖಡ್ಗಕ್ಕೆ ಸಿಲುಕಿ ಸಾಯಿರಿ’ ಎಂಬುದು ಸೇರಿದಂತೆ ಹಲವು ವಿಚಾರಗಳನ್ನು ಉಲ್ಲೇಖಿಸಿ ಇ- ಮೇಲ್‌ ಮಾಡಲಾಗಿದೆ.
ಎಲ್ಲ ಶಾಲೆಗಳಿಗೂ ಭದ್ರತೆ ಒದಗಿಸಿ ಎಚ್ಚರಿಕೆಯಿಂದಿರಲು ಪೊಲೀಸರಿಗೆ ಸೂಚಿಸಿದ್ದೇನೆ. ಬೆದರಿಕೆ ಪತ್ರ ಕಳುಹಿಸಿದವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ
ಸಿದ್ದರಾಮಯ್ಯ, ಮುಖ್ಯಮಂತ್ರಿ
ರೋಪಿಗಳು ವಿದೇಶಿ ಇ–ಮೇಲ್‌ ವ್ಯವಸ್ಥೆ ಬಳಸಿರುವುದು ಪತ್ತೆಯಾಗಿದೆ. ಐ.ಪಿ ವಿಳಾಸದ ಮಾಹಿತಿ ಒದಗಿಸುವಂತೆ ಆ ಕಂಪನಿಗೆ ಪೊಲೀಸರು ಪತ್ರ ಬರೆದಿದ್ದಾರೆ.
ಜಿ. ಪರಮೇಶ್ವರ, ಗೃಹ ಸಚಿವ
ಬೆದರಿಕೆ ಇ ಮೇಲ್‌ನ ಹಿಂದಿನ ಹುನ್ನಾರ ಏನಿದೆ ಎಂಬುದು ಕುರಿತು ತನಿಖೆ ನಡೆಯುತ್ತಿದೆ. ಬೀಬಲ್ ಡಾಟ್‌ ಕಾಮ್‌ ಡೊಮೈನ್ ಮೂಲಕ ಇ ಮೇಲ್ ಬಂದಿದೆ.
ಬಿ.ದಯಾನಂದ್, ನಗರ ಪೊಲೀಸ್‌ ಕಮಿಷನರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT