<p><strong>ಬೆಂಗಳೂರು:</strong>ಸಾರ್ವಜನಿಕ ಸ್ಥಳಗಳಲ್ಲಿನ ಗೋಡೆಗಳ ಮೇಲೆ ಸಿನಿಮಾ ಪೋಸ್ಟರ್ಗಳು, ಹೋರಾಟದ ಘೋಷವಾಕ್ಯಗಳು ಸಾಮಾನ್ಯವಾಗಿರುವ ಈ ಸಂದರ್ಭದಲ್ಲಿ, ಸಿ.ಎನ್.ಆರ್. ರಾವ್ ಅಂಡರ್ಪಾಸ್ನ ಗೋಡೆಗಳು ನಿಮಗೆ ವಿಭಿನ್ನ ಅನುಭವ ನೀಡಲಿವೆ. ರಸಾಯನ, ಭೌತ, ಬಾಹ್ಯಾಕಾಶ ವಿಜ್ಞಾನ ಪರಿಕಲ್ಪನೆಗಳ ಸಂಕೇತಗಳು, ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಕೊಡುಗೆಗಳನ್ನು ಬಿಂಬಿಸುವ ಚಿತ್ರಗಳು ನಿಮ್ಮನ್ನು ಸ್ವಾಗತಿಸಲಿವೆ.</p>.<p>‘ದಿ ಅಗ್ಲಿ ಇಂಡಿಯನ್’ ಸಂಘಟನೆಯ ಕಾರ್ಯಕರ್ತರು ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಅಂಡರ್ಪಾಸ್ನ ಎರಡೂ ಬದಿಯ ಗೋಡೆಯ ಮೇಲೆ ವಿಜ್ಞಾನ ಪರಿಕಲ್ಪನೆಯ ಚಿತ್ರಗಳನ್ನು ಬಿಡಿಸುತ್ತಿದ್ದಾರೆ.</p>.<p>ನಗರದ ಹತ್ತು ಅಂಡರ್ಪಾಸ್ಗಳನ್ನು ಅಂದಗೊಳಿಸುವ ಕಾರ್ಯಕ್ಕೆ ಬಿಬಿಎಂಪಿ ಜೊತೆಗೆ ಈ ಸಂಘಟನೆ ಕೈಜೋಡಿಸಿದೆ. ಮೇಖ್ರಿ ವೃತ್ತ, ವಿಂಡ್ಸರ್ ಮ್ಯಾನರ್, ಅರಮನೆ ರಸ್ತೆ, ಕದಿರೇನಹಳ್ಳಿ ಮತ್ತು ಜೆ.ಪಿ. ನಗರದ ಜಿ.ಆರ್. ವಿಶ್ವನಾಥ್ ಅಂಡರ್ಪಾಸ್ ಇವುಗಳಲ್ಲಿ ಪ್ರಮುಖವಾದವು.</p>.<p>ಅಂಡರ್ಪಾಸ್ಗಳಿಗೆ ಬಣ್ಣ ಹಚ್ಚುವ ಕಾರ್ಯವನ್ನು ಬಿಬಿಎಂಪಿ ಈಗಾಗಲೇ ಪೂರ್ಣಗೊಳಿಸಿದ್ದು, ನೀಲಿ ಮತ್ತು ಬಿಳಿ ಬಣ್ಣಗಳ ಮೇಲೆ ಸಂಘಟನೆಯ ಕಾರ್ಯಕರ್ತರು ಚಿತ್ರ ಬಿಡಿಸಲಿದ್ದಾರೆ. ವಿಜ್ಞಾನದ ಬಗೆಗೆ ಆಸಕ್ತಿ ಹೊಂದಿರುವ ಸ್ಥಳೀಯರು ಕೂಡ ಈ ಕಾರ್ಯಕ್ಕೆ ಕೈಜೋಡಿಸಬಹುದಾಗಿದೆ.</p>.<p>‘ಮಹಾನ್ ವಿಜ್ಞಾನಿಗಳು ಜಗತ್ತಿಗೆ ನೀಡಿರುವ ಕೊಡುಗೆಗಳ ಕುರಿತು ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚನ್ನು ಗೋಡೆಗಳ ಮೇಲೆ ಬಿಡಿಸುತ್ತಿದ್ದೇವೆ’ ಎಂದು ಸಂಘಟನೆಯ ಕಾರ್ಯಕರ್ತರು ಹೇಳಿದರು.</p>.<p>‘ಸಿ.ಎನ್.ಆರ್. ರಾವ್ ಅಂಡರ್ಪಾಸ್ನಲ್ಲಿ ವಾಹನಗಳು ತುಂಬಾ ವೇಗವಾಗಿ ಸಂಚರಿಸುತ್ತವೆ. ದಟ್ಟಣೆ ಇರದ ಕಾರಣ ವೇಗ ಇನ್ನೂ ಹೆಚ್ಚಾಗಿರುತ್ತದೆ. ಚಿತ್ರಗಳನ್ನು ನೋಡಲು ಆಗುವುದೇ ಇಲ್ಲ. ಅಲ್ಲದೆ, ಈ ಅಂಡರ್ಪಾಸ್ನಲ್ಲಿ ಸಾರ್ವಜನಿಕರು ಕೂಡ ಓಡಾಡುವುದಿಲ್ಲ. ಗೋಡೆ ಹಾಳಾಗಬಾರದೆಂಬ ಉದ್ದೇಶಕ್ಕೆ ಚಿತ್ರಗಳನ್ನು ಬಿಡಿಸಬಹುದೇ ವಿನಾ ವಿಜ್ಞಾನ ಕುರಿತು ಅರಿವು ಮೂಡಿಸುವ ಉದ್ದೇಶ ನಿರೀಕ್ಷಿತ ಮಟ್ಟದಲ್ಲಿ ಸಫಲವಾಗಲಾರದು’ ಎಂದು ವಾಹನ ಸವಾರ ನರಸಿಂಹ ಮೂರ್ತಿ ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಸಾರ್ವಜನಿಕ ಸ್ಥಳಗಳಲ್ಲಿನ ಗೋಡೆಗಳ ಮೇಲೆ ಸಿನಿಮಾ ಪೋಸ್ಟರ್ಗಳು, ಹೋರಾಟದ ಘೋಷವಾಕ್ಯಗಳು ಸಾಮಾನ್ಯವಾಗಿರುವ ಈ ಸಂದರ್ಭದಲ್ಲಿ, ಸಿ.ಎನ್.ಆರ್. ರಾವ್ ಅಂಡರ್ಪಾಸ್ನ ಗೋಡೆಗಳು ನಿಮಗೆ ವಿಭಿನ್ನ ಅನುಭವ ನೀಡಲಿವೆ. ರಸಾಯನ, ಭೌತ, ಬಾಹ್ಯಾಕಾಶ ವಿಜ್ಞಾನ ಪರಿಕಲ್ಪನೆಗಳ ಸಂಕೇತಗಳು, ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಕೊಡುಗೆಗಳನ್ನು ಬಿಂಬಿಸುವ ಚಿತ್ರಗಳು ನಿಮ್ಮನ್ನು ಸ್ವಾಗತಿಸಲಿವೆ.</p>.<p>‘ದಿ ಅಗ್ಲಿ ಇಂಡಿಯನ್’ ಸಂಘಟನೆಯ ಕಾರ್ಯಕರ್ತರು ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಅಂಡರ್ಪಾಸ್ನ ಎರಡೂ ಬದಿಯ ಗೋಡೆಯ ಮೇಲೆ ವಿಜ್ಞಾನ ಪರಿಕಲ್ಪನೆಯ ಚಿತ್ರಗಳನ್ನು ಬಿಡಿಸುತ್ತಿದ್ದಾರೆ.</p>.<p>ನಗರದ ಹತ್ತು ಅಂಡರ್ಪಾಸ್ಗಳನ್ನು ಅಂದಗೊಳಿಸುವ ಕಾರ್ಯಕ್ಕೆ ಬಿಬಿಎಂಪಿ ಜೊತೆಗೆ ಈ ಸಂಘಟನೆ ಕೈಜೋಡಿಸಿದೆ. ಮೇಖ್ರಿ ವೃತ್ತ, ವಿಂಡ್ಸರ್ ಮ್ಯಾನರ್, ಅರಮನೆ ರಸ್ತೆ, ಕದಿರೇನಹಳ್ಳಿ ಮತ್ತು ಜೆ.ಪಿ. ನಗರದ ಜಿ.ಆರ್. ವಿಶ್ವನಾಥ್ ಅಂಡರ್ಪಾಸ್ ಇವುಗಳಲ್ಲಿ ಪ್ರಮುಖವಾದವು.</p>.<p>ಅಂಡರ್ಪಾಸ್ಗಳಿಗೆ ಬಣ್ಣ ಹಚ್ಚುವ ಕಾರ್ಯವನ್ನು ಬಿಬಿಎಂಪಿ ಈಗಾಗಲೇ ಪೂರ್ಣಗೊಳಿಸಿದ್ದು, ನೀಲಿ ಮತ್ತು ಬಿಳಿ ಬಣ್ಣಗಳ ಮೇಲೆ ಸಂಘಟನೆಯ ಕಾರ್ಯಕರ್ತರು ಚಿತ್ರ ಬಿಡಿಸಲಿದ್ದಾರೆ. ವಿಜ್ಞಾನದ ಬಗೆಗೆ ಆಸಕ್ತಿ ಹೊಂದಿರುವ ಸ್ಥಳೀಯರು ಕೂಡ ಈ ಕಾರ್ಯಕ್ಕೆ ಕೈಜೋಡಿಸಬಹುದಾಗಿದೆ.</p>.<p>‘ಮಹಾನ್ ವಿಜ್ಞಾನಿಗಳು ಜಗತ್ತಿಗೆ ನೀಡಿರುವ ಕೊಡುಗೆಗಳ ಕುರಿತು ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚನ್ನು ಗೋಡೆಗಳ ಮೇಲೆ ಬಿಡಿಸುತ್ತಿದ್ದೇವೆ’ ಎಂದು ಸಂಘಟನೆಯ ಕಾರ್ಯಕರ್ತರು ಹೇಳಿದರು.</p>.<p>‘ಸಿ.ಎನ್.ಆರ್. ರಾವ್ ಅಂಡರ್ಪಾಸ್ನಲ್ಲಿ ವಾಹನಗಳು ತುಂಬಾ ವೇಗವಾಗಿ ಸಂಚರಿಸುತ್ತವೆ. ದಟ್ಟಣೆ ಇರದ ಕಾರಣ ವೇಗ ಇನ್ನೂ ಹೆಚ್ಚಾಗಿರುತ್ತದೆ. ಚಿತ್ರಗಳನ್ನು ನೋಡಲು ಆಗುವುದೇ ಇಲ್ಲ. ಅಲ್ಲದೆ, ಈ ಅಂಡರ್ಪಾಸ್ನಲ್ಲಿ ಸಾರ್ವಜನಿಕರು ಕೂಡ ಓಡಾಡುವುದಿಲ್ಲ. ಗೋಡೆ ಹಾಳಾಗಬಾರದೆಂಬ ಉದ್ದೇಶಕ್ಕೆ ಚಿತ್ರಗಳನ್ನು ಬಿಡಿಸಬಹುದೇ ವಿನಾ ವಿಜ್ಞಾನ ಕುರಿತು ಅರಿವು ಮೂಡಿಸುವ ಉದ್ದೇಶ ನಿರೀಕ್ಷಿತ ಮಟ್ಟದಲ್ಲಿ ಸಫಲವಾಗಲಾರದು’ ಎಂದು ವಾಹನ ಸವಾರ ನರಸಿಂಹ ಮೂರ್ತಿ ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>