ಬೆಂಗಳೂರು: ವಿಧಾನಸೌಧದ ಎದುರು ಸೀಮೆಎಣ್ಣೆ ಸುರಿದುಕೊಂಡು ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಸೀಮೆಎಣ್ಣೆ ಸುರಿದುಕೊಳ್ಳುತ್ತಿದ್ದ ದಂಪತಿ ಶಾಯಿಸ್ತಾ ಬಾನು ಹಾಗೂ ಮಹಮ್ಮದ್ ಮುನಾಯಿದ್ ಅವರನ್ನು ಸ್ಥಳದಲ್ಲಿದ್ದ ಸ್ಥಳೀಯರು ಹಾಗೂ ಪೊಲೀಸರು ತಡೆದು ರಕ್ಷಿಸಿದರು. ದಂಪತಿ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೆ.ಜೆ.ನಗರದ ಶಾಯಿಸ್ತಾ ಹಾಗೂ ಮಹಮ್ಮದ್ ಮನಾಯಿದ್ ಬ್ಯಾಂಕ್ನಿಂದ ಸಾಲ ಪಡೆದಿದ್ದರು. ಸಾಲ ಪಾವತಿಸದ ಕಾರಣಕ್ಕೆ ಬ್ಯಾಂಕ್ನವರು ಜಮೀನು ಹರಾಜು ಹಾಕಿದ್ದರು. ಇದರಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ದಂಪತಿ ತಿಳಿಸಿದರು. ‘ನಮಗೆ ನ್ಯಾಯ ಬೇಕು’ ಎಂದು ದಂಪತಿ ಕೋರಿದರು.