‘ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ನ. 8 ರಂದು ರಾತ್ರಿ ಬಂದಿದ್ದ ದೂರುದಾರ, ಬೊಮ್ಮನಹಳ್ಳಿಗೆ ಹೋಗಲು ಆಟೊ ಗಳಿಗೆ ಕೈ ಮಾಡಿದ್ದರು. ಆಟೊ ನಿಲ್ಲಿಸಿದ್ದ ಆರೋಪಿ, ದೂರುದಾರರನ್ನು ಹತ್ತಿಸಿ ಕೊಂಡಿದ್ದ. ಮಾರ್ಗಮಧ್ಯೆ ಮನೋಜ್ ಹಾಗೂ ಇತರೆ ಮೂವರು ಆರೋಪಿಗಳು ಆಟೊ ಹತ್ತಿದ್ದರು. ‘ದೂರುದಾರರಿಗೆ ಚಾಕು ತೋರಿಸಿದ್ದ ಆರೋಪಿಗಳು, ಚಿನ್ನದ ಸರ ಸುಲಿಗೆ ಮಾಡಿದ್ದರು. ದೂರು ದಾರರನ್ನು ರಸ್ತೆಯಲ್ಲೇ ಇಳಿಸಿ, ಆಟೊ ಸಮೇತ ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿ. ಸ್ಥಳ ಪರಿಶೀಲನೆ ಹಾಗೂ ಪುರಾವೆಗಳನ್ನು ಸಂಗ್ರಹಿಸಿ ಮನೋಜ್ನನ್ನು ಬಂಧಿಸಲಾಗಿದೆ. ಆಟೊ ಚಾಲಕ ಸೇರಿ ನಾಲ್ವರು ತಲೆಮರೆಸಿಕೊಂಡಿದ್ದಾರೆ’ ಎಂದೂ ಮೂಲಗಳು ಹೇಳಿವೆ.