ಯಲಹಂಕದಿಂದ 7 ಕಿ.ಮೀ.ಅಂತರದಲ್ಲಿರುವ ಬೆಟ್ಟಲಸೂರು, ಸೊಂಡಪ್ಪನಹಳ್ಳಿ, ಕಾಡಿಗಾನಹಳ್ಳಿ ವ್ಯಾಪ್ತಿಯ 184.09 ಎಕರೆಯಲ್ಲಿ ಉದ್ಯಾನ ತಲೆ ಎತ್ತಲಿದೆ. ತೋಟಗಾರಿಕೆ ಇಲಾಖೆಯ ನೇತೃತ್ವದಲ್ಲಿ ಅಧಿಕಾರಿಗಳನ್ನು ಒಳಗೊಂಡ ಸಂಘ ಅಭಿವೃದ್ಧಿ ಕಾರ್ಯಗಳ ನಿರ್ವಹಣೆ ಮಾಡಲಿದೆ. ಬೆಟ್ಟಲಸೂರು ಬಂಡೆಯಲ್ಲಿ ಕೆಂಪೇಗೌಡರ 100 ಅಡಿಯ ಏಕಶಿಲಾ ಮೂರ್ತಿ ಕೆತ್ತಿಸಲಾಗುವುದು. ಅಲ್ಲಲ್ಲಿ ಕೆರೆಗಳ ನಿರ್ಮಾಣ, ಹಕ್ಕಿಗಳ ಆವಾಸಸ್ಥಾನ ನಿರ್ಮಿಸಲಾಗುವುದು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.