ಕೋವಿಡ್ ಜಯಿಸಿ ಬಂದ 23 ವರ್ಷದ ಯುವಕ ದುರ್ಗಪ್ಪ ಅವರ ಅನುಭವದ ಮಾತುಗಳಿವು. ಕೊಪ್ಪಳದ ಕುಷ್ಟಗಿಯ ಅವರು ಸದ್ಯ ಹಲಸೂರಿನ ಬಿಬಿಎಂಪಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾದ ಎರಡು ದಿನಗಳಲ್ಲೇ ಚೇತರಿಸಿಕೊಂಡಿದ್ದ ಅವರನ್ನು ನಿಯಮದಂತೆ 10 ದಿನಗಳು ಆಸ್ಪತ್ರೆಯಲ್ಲಿ ಇರಿಸಿಕೊಂಡು, ಮನೆಗೆ ಕಳುಹಿಸಲಾಗಿತ್ತು. ಈಗ ಕರ್ತವ್ಯಕ್ಕೆ ಮರಳಿರುವ ಅವರು, ಕೋವಿಡ್ ಜಯಿಸುವ ಬಗ್ಗೆ ಜನರಲ್ಲಿ ಸ್ಥೈರ್ಯ ತುಂಬುತ್ತಿದ್ದಾರೆ.