<p><strong>ಬೆಂಗಳೂರು:</strong> ಬೀದಿ ಬದಿಯಲ್ಲಿ ಕಸ ರಾಶಿ ಬಿದ್ದು ಗಬ್ಬು ನಾರುತ್ತಿದ್ದರೂ ತಮಗೂ ಅದಕ್ಕೂ ಸಂಬಂಧ ಇಲ್ಲವೆಂಬಂತೆ ವರ್ತಿಸುವವರೇ ಹೆಚ್ಚು. ಆದರೆ, ರಾಜರಾಜೇಶ್ವರಿನಗರದ ಶೋಭಾ ಹಾಗಲ್ಲ. ಮನೆಯ ಮಾತ್ರವಲ್ಲ ಬೀದಿಯನ್ನೂ ಸ್ವಚ್ಛವಾಗಿಟ್ಟುಕೊಳ್ಳುವುದರ ಮಹತ್ವವನ್ನು ಸಾರುತ್ತಿದ್ದಾರೆ.</p>.<p>ಚಿಣ್ಣರಲ್ಲಿ ಪರಿಸರ ಕಾಳಜಿ ಬೆಳೆಸುತ್ತಿರುವ ಅವರು ಈ ಸಲುವಾಗಿಯೇ ‘ಉಸಿರು’ ಸಂಸ್ಥೆಯನ್ನು ಕಟ್ಟಿ ಮುನ್ನಡೆಸುತ್ತಿದ್ದಾರೆ. ಕಸ ವಿಂಗಡಣೆ, ಪ್ಲಾಸ್ಟಿಕ್ ನಿಷೇಧ, ಬಿಬಿಎಂಪಿ ನೀರು ಉಳಿಸುವುದು, ಹಬ್ಬದ ಸಂದರ್ಭದಲ್ಲಿ ಮಣ್ಣಿನ ಮೂರ್ತಿಗಳನ್ನು ಬಳಸುವ ಮಹತ್ವ ಸಾರುವ ಕಾರ್ಯಕ್ರಮಗಳನ್ನು ಈ ಸಂಸ್ಥೆ ಮೂಲಕ ಹಮ್ಮಿಕೊಳ್ಳುತ್ತಿದ್ದಾರೆ.</p>.<p>ಗೃಹಿಣಿಯಾಗಿ ಮನೆಯ ನಿರ್ವಹಣೆಯ ಜತೆಗೆ ವಾರದಲ್ಲಿ ಕನಿಷ್ಠ ಮೂರು ಕಡೆಯಾದರೂ ಪ್ರಾತ್ಯಕ್ಷಿಕೆ ನೀಡುತ್ತಾರೆ. ಶಾಲಾ ಕಾಲೇಜುಗಳಲ್ಲೂ ಕಾರ್ಯಕ್ರಮ ನೀಡುತ್ತಿದ್ದಾರೆ. 10 ವರ್ಷಗಳಲ್ಲಿ ಹೆಚ್ಚೂ ಕಡಿಮೆ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಸ ನಿರ್ವಹಣೆ ಹಾಗೂ ಪರಿಸರ ಕಾಳಜಿಯ ಮಹತ್ವ ತಿಳಿಸಿದ್ದಾರೆ. ಬಿಬಿಎಂಪಿಯ ಮಾಸ್ಟರ್ ಟ್ರೈನಿಂಗ್ ತರಬೇತಿಗಳಲ್ಲೂ ಶೋಭಾ ಅವರು ಕೈ ಜೋಡಿಸುತ್ತಾರೆ. ಸ್ವಚ್ಛ ಸರ್ವೇಕ್ಷಣೆ ಬಗ್ಗೆಯೂ ಅನೇಕ ಕಾರ್ಯಕ್ರಮ ನಡೆಸಿದ್ದಾರೆ.</p>.<p>‘ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲವಿತ್ತು. ಈ ಸಲುವಾಗಿ10 ವರ್ಷಗಳ ಹಿಂದೆ ಜ್ಞಾನಭಾರತಿ ವಾರ್ಡ್ನಲ್ಲಿ ಜನರನ್ನು ಸೇರಿಸಿ ಪರಿಸರದ ಬಗ್ಗೆ ಕಾಳಜಿ ಮೂಡಿಸಲು ಆರಂಭಿಸಿದೆ. ಬಳಿಕ ಈ ಸಲುವಾಗಿ ‘ಉಸಿರು’ ಸಂಸ್ಥೆ ಹುಟ್ಟುಹಾಕಿದೆ’ ಎಂದು ಶೋಭಾ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಚಿಣ್ಣರಲ್ಲಿ ಪರಿಸರ ಕಾಳಜಿ ಮೂಡಿಸಿದರೆ ಭವಿಷ್ಯದಲ್ಲಾದರೂ ಪರಿಸ್ಥಿತಿ ಸರಿ ಹೋಗಬಹುದು. ಮಕ್ಕಳು ಪರಿಸರದ ಮಹತ್ವವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. 100 ಮಂದಿಯಲ್ಲಿ 10 ಮಂದಿ ನಾನು ಹೇಳಿದ ವಿಷಯ ಪಾಲಿಸಿದರೂ ಅದರಿಂದ ಪ್ರಯೋಜನವಾಗುತ್ತದೆ’ ಎನ್ನುತ್ತಾರೆ ಶೋಭಾ.</p>.<p>‘ಏನನ್ನು ಹೇಳುತ್ತೇನೋ ಅದನ್ನು ಮೊದಲು ನಾನೇ ಪಾಲಿಸುತ್ತೇನೆ. ನಮ್ಮ ಮನೆಯ ಕಸ ಹೊರಗೆ ಹೋಗುವುದಿಲ್ಲ. ಎಲ್ಲವನ್ನೂ ಕಾಂಪೋಸ್ಟ್ ಮಾಡುತ್ತೇನೆ. ಪ್ಲಾಸ್ಟಿಕ್ ನಿಷೇಧ ಜಾರಿಗೆ ಮುನ್ನವೇ ನಾವು ಪ್ಲಾಸ್ಟಿಕ್ ಬಳಕೆ ನಿಲ್ಲಿಸಿದ್ದೇನೆ’ ಎಂದು ಅವರು ಹೇಳಿದರು.</p>.<p><strong>ಕೆರೆ ಉಳಿಸಲು ಪಣ</strong><br />ಶ್ರೀಗಂಧ ಕಾವಲ್ ಕೆರೆಯ ಸಂರಕ್ಷಣೆ ಬಗ್ಗೆಯೂ ಶೋಭಾ ಹೋರಾಟ ನಡೆಸಿದ್ದಾರೆ.</p>.<p>‘ಮೂರು ವರ್ಷಗಳ ಹಿಂದೆ ವಾರ್ಡ್ನ ಕಸವನ್ನೆಲ್ಲ ಈ ಕೆರೆಗೆ ಹಾಕುತ್ತಿದ್ದರು. ಕಟ್ಟಡದ ಅವಶೇಷಗಳನ್ನು ಸುರಿಯುತ್ತಿದ್ದರು. ಇದಕ್ಕೆಲ್ಲ ಕಡಿವಾಣ ಹಾಕಿದ್ದೇವೆ. ಈ ಕೆರೆ ಅಭಿವೃದ್ಧಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಬೇಕಿದೆ’ ಎಂದು ಶೋಭಾ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೀದಿ ಬದಿಯಲ್ಲಿ ಕಸ ರಾಶಿ ಬಿದ್ದು ಗಬ್ಬು ನಾರುತ್ತಿದ್ದರೂ ತಮಗೂ ಅದಕ್ಕೂ ಸಂಬಂಧ ಇಲ್ಲವೆಂಬಂತೆ ವರ್ತಿಸುವವರೇ ಹೆಚ್ಚು. ಆದರೆ, ರಾಜರಾಜೇಶ್ವರಿನಗರದ ಶೋಭಾ ಹಾಗಲ್ಲ. ಮನೆಯ ಮಾತ್ರವಲ್ಲ ಬೀದಿಯನ್ನೂ ಸ್ವಚ್ಛವಾಗಿಟ್ಟುಕೊಳ್ಳುವುದರ ಮಹತ್ವವನ್ನು ಸಾರುತ್ತಿದ್ದಾರೆ.</p>.<p>ಚಿಣ್ಣರಲ್ಲಿ ಪರಿಸರ ಕಾಳಜಿ ಬೆಳೆಸುತ್ತಿರುವ ಅವರು ಈ ಸಲುವಾಗಿಯೇ ‘ಉಸಿರು’ ಸಂಸ್ಥೆಯನ್ನು ಕಟ್ಟಿ ಮುನ್ನಡೆಸುತ್ತಿದ್ದಾರೆ. ಕಸ ವಿಂಗಡಣೆ, ಪ್ಲಾಸ್ಟಿಕ್ ನಿಷೇಧ, ಬಿಬಿಎಂಪಿ ನೀರು ಉಳಿಸುವುದು, ಹಬ್ಬದ ಸಂದರ್ಭದಲ್ಲಿ ಮಣ್ಣಿನ ಮೂರ್ತಿಗಳನ್ನು ಬಳಸುವ ಮಹತ್ವ ಸಾರುವ ಕಾರ್ಯಕ್ರಮಗಳನ್ನು ಈ ಸಂಸ್ಥೆ ಮೂಲಕ ಹಮ್ಮಿಕೊಳ್ಳುತ್ತಿದ್ದಾರೆ.</p>.<p>ಗೃಹಿಣಿಯಾಗಿ ಮನೆಯ ನಿರ್ವಹಣೆಯ ಜತೆಗೆ ವಾರದಲ್ಲಿ ಕನಿಷ್ಠ ಮೂರು ಕಡೆಯಾದರೂ ಪ್ರಾತ್ಯಕ್ಷಿಕೆ ನೀಡುತ್ತಾರೆ. ಶಾಲಾ ಕಾಲೇಜುಗಳಲ್ಲೂ ಕಾರ್ಯಕ್ರಮ ನೀಡುತ್ತಿದ್ದಾರೆ. 10 ವರ್ಷಗಳಲ್ಲಿ ಹೆಚ್ಚೂ ಕಡಿಮೆ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಸ ನಿರ್ವಹಣೆ ಹಾಗೂ ಪರಿಸರ ಕಾಳಜಿಯ ಮಹತ್ವ ತಿಳಿಸಿದ್ದಾರೆ. ಬಿಬಿಎಂಪಿಯ ಮಾಸ್ಟರ್ ಟ್ರೈನಿಂಗ್ ತರಬೇತಿಗಳಲ್ಲೂ ಶೋಭಾ ಅವರು ಕೈ ಜೋಡಿಸುತ್ತಾರೆ. ಸ್ವಚ್ಛ ಸರ್ವೇಕ್ಷಣೆ ಬಗ್ಗೆಯೂ ಅನೇಕ ಕಾರ್ಯಕ್ರಮ ನಡೆಸಿದ್ದಾರೆ.</p>.<p>‘ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲವಿತ್ತು. ಈ ಸಲುವಾಗಿ10 ವರ್ಷಗಳ ಹಿಂದೆ ಜ್ಞಾನಭಾರತಿ ವಾರ್ಡ್ನಲ್ಲಿ ಜನರನ್ನು ಸೇರಿಸಿ ಪರಿಸರದ ಬಗ್ಗೆ ಕಾಳಜಿ ಮೂಡಿಸಲು ಆರಂಭಿಸಿದೆ. ಬಳಿಕ ಈ ಸಲುವಾಗಿ ‘ಉಸಿರು’ ಸಂಸ್ಥೆ ಹುಟ್ಟುಹಾಕಿದೆ’ ಎಂದು ಶೋಭಾ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಚಿಣ್ಣರಲ್ಲಿ ಪರಿಸರ ಕಾಳಜಿ ಮೂಡಿಸಿದರೆ ಭವಿಷ್ಯದಲ್ಲಾದರೂ ಪರಿಸ್ಥಿತಿ ಸರಿ ಹೋಗಬಹುದು. ಮಕ್ಕಳು ಪರಿಸರದ ಮಹತ್ವವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. 100 ಮಂದಿಯಲ್ಲಿ 10 ಮಂದಿ ನಾನು ಹೇಳಿದ ವಿಷಯ ಪಾಲಿಸಿದರೂ ಅದರಿಂದ ಪ್ರಯೋಜನವಾಗುತ್ತದೆ’ ಎನ್ನುತ್ತಾರೆ ಶೋಭಾ.</p>.<p>‘ಏನನ್ನು ಹೇಳುತ್ತೇನೋ ಅದನ್ನು ಮೊದಲು ನಾನೇ ಪಾಲಿಸುತ್ತೇನೆ. ನಮ್ಮ ಮನೆಯ ಕಸ ಹೊರಗೆ ಹೋಗುವುದಿಲ್ಲ. ಎಲ್ಲವನ್ನೂ ಕಾಂಪೋಸ್ಟ್ ಮಾಡುತ್ತೇನೆ. ಪ್ಲಾಸ್ಟಿಕ್ ನಿಷೇಧ ಜಾರಿಗೆ ಮುನ್ನವೇ ನಾವು ಪ್ಲಾಸ್ಟಿಕ್ ಬಳಕೆ ನಿಲ್ಲಿಸಿದ್ದೇನೆ’ ಎಂದು ಅವರು ಹೇಳಿದರು.</p>.<p><strong>ಕೆರೆ ಉಳಿಸಲು ಪಣ</strong><br />ಶ್ರೀಗಂಧ ಕಾವಲ್ ಕೆರೆಯ ಸಂರಕ್ಷಣೆ ಬಗ್ಗೆಯೂ ಶೋಭಾ ಹೋರಾಟ ನಡೆಸಿದ್ದಾರೆ.</p>.<p>‘ಮೂರು ವರ್ಷಗಳ ಹಿಂದೆ ವಾರ್ಡ್ನ ಕಸವನ್ನೆಲ್ಲ ಈ ಕೆರೆಗೆ ಹಾಕುತ್ತಿದ್ದರು. ಕಟ್ಟಡದ ಅವಶೇಷಗಳನ್ನು ಸುರಿಯುತ್ತಿದ್ದರು. ಇದಕ್ಕೆಲ್ಲ ಕಡಿವಾಣ ಹಾಕಿದ್ದೇವೆ. ಈ ಕೆರೆ ಅಭಿವೃದ್ಧಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಬೇಕಿದೆ’ ಎಂದು ಶೋಭಾ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>