ಈ ಪ್ರದೇಶ ಪದೇ ಪದೇ ನೆರೆ ಹಾವಳಿಗೆ ಸಿಲುಕುವುದನ್ನು ತಪ್ಪಿಸಲು ಮೂಲ ನಕ್ಷೆ ಆಧರಿಸಿ ಬಿಬಿಎಂಪಿಯ ‘ಮಳೆನೀರು ಕಾಲುವೆ ಘಟಕ’ವು, ಕಾಲುವೆ ನಿರ್ಮಾಣದ ಕೆಲಸ ಕೈಗೆತ್ತಿಕೊಂಡಿದೆ. ‘ನಕ್ಷೆಯ ಪ್ರಕಾರ ಸರ್ವೆ ನಂ. 239ರಲ್ಲಿ ಈ ಕಾಲುವೆ ಹಾದು ಹೋಗುತ್ತದೆ. ಆದರೆ ನಕ್ಷೆಯನ್ನು ಉಲ್ಲಂಘಿಸಿ, ಪ್ರಭಾವಿಯೊಬ್ಬರ ಮನೆಯ ಬಳಿ ಹಾದು ಹೋಗುವುದನ್ನು ತಪ್ಪಿಸಲು ಸರ್ವೆ ನಂ.238ರಲ್ಲಿ ಇರುವ ರಸ್ತೆಗೆ ‘ಝಡ್’ ಆಕಾರದಲ್ಲಿ ತಿರುಗಿಸಲಾಗಿದೆ. ಇದರಿಂದ ರಸ್ತೆಯಲ್ಲಿ ಕಾವೇರಿ ಲೈನ್, ಯುಜಿಡಿ ಸಂರ್ಪಕ ಕಲ್ಪಿಸಲು ಅಡ್ಡಿಯಾಗಲಿದೆ’ ಎಂಬುದು ಸ್ಥಳೀಯರ ಆಕ್ಷೇಪ.