ಹಲ್ಲೆ ಆರೋಪದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ಆಸ್ಪತ್ರೆ ವೈದ್ಯರು, ‘ಐಸಿಯುದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಷ್ಟ. ಪ್ರಾಣಸಂಕಟದಿಂದ ಒದ್ದಾಡುವ ರೋಗಿಗಳು, ಚಿಕಿತ್ಸೆಗೆ ಅಡ್ಡಿಪಡಿಸುತ್ತಾರೆ. ಇಂಥ ರೋಗಿಗಳನ್ನು ನಿಯಂತ್ರಣ ಅಗತ್ಯ. ವೆಂಕಟೇಶ್ ವಿಚಾರದಲ್ಲೂ ಅವರನ್ನು ನಿಯಂತ್ರಿಸಿ ಚಿಕಿತ್ಸೆ ನೀಡಲಾಗಿದೆ. ಹಲ್ಲೆ ಮಾಡಿಲ್ಲ’ ಎಂದಿದ್ದಾರೆ.