ಕಾರಿಡಾರ್ಗೆ ಪರ್ಯಾಯವಾಗಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಅಧ್ಯಯನ ಕೈಗೊಂಡ ನಿಗಮ, ರಸ್ತೆ ಅಗಲಗೊಳಿಸುವುದು ಮತ್ತು ಕೆ.ಆರ್. ಪುರದಲ್ಲಿ ಮೇಲ್ಸೇತುವೆ ನಿರ್ಮಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿತು.ರಸ್ತೆ ವಿಸ್ತರಣೆಗಾಗಿ 12,140 ಚ.ಮೀ. ಜಾಗವನ್ನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. 6 ಮಾರ್ಗಗಳ ಬದಲಿಗೆ, ಮಹದೇವಪುರ ಜಂಕ್ಷನ್ ಮತ್ತು ಟಿನ್ಫ್ಯಾಕ್ಟರಿ ನಡುವಿನ ಎರಡು ಮಾರ್ಗ ಕಡಿತಗೊಳಿಸಿ, 4 ದೊಡ್ಡ ಮಾರ್ಗಗಳು ಮತ್ತು ಎರಡು ಸರ್ವೀಸ್ ರಸ್ತೆಗಳನ್ನು ನಿರ್ಮಿಸುವ ಸಲಹೆಯನ್ನು ಸರ್ಕಾರಕ್ಕೆ ನೀಡಿತ್ತು.