<p><strong>ಬೆಂಗಳೂರು: </strong>ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರಲು ಹಾಕಿದ್ದ ಫ್ಲೆಕ್ಸ್ಗಳ ತೆರವಿಗೆ ಒಂದು ವಾರ ಕಾಲಾವಕಾಶವನ್ನು ಬಿಬಿಎಂಪಿ ನೀಡಿದೆ. ಅಲ್ಲದೇ 16 ಸಾವಿರ ಫ್ಲೆಕ್ಸ್ಗಳನ್ನು ಪಾಲಿಕೆಯೇ ತೆರವುಗೊಳಿಸಿದೆ.</p>.<p>ನಗರದಲ್ಲಿ ಫ್ಲೆಕ್ಸ್ ಅಳವಡಿಕೆಗೆ ಅವಕಾಶ ನೀಡಬಾರದು ಎಂದು ಹೈಕೋರ್ಟ್ ಆದೇಶ ಹೊರಡಿಸಿದ್ದು, ಅದಾದ ನಂತರ ಯಾವುದೇ ಫ್ಲೆಕ್ಸ್ ಅಳವಡಿಕೆಗೆ ಬಿಬಿಎಂಪಿ ಅನುಮತಿ ನೀಡುತ್ತಿಲ್ಲ. ಆದರೂ, ಪ್ರಧಾನಿಯವರು ಬೆಂಗಳೂರಿಗೆ ಬಂದಾಗ ಅವರು ಸಂಚರಿಸಿದ ರಸ್ತೆಗಳಲ್ಲಿ ಸಾವಿರಾರು ಫ್ಲೆಕ್ಸ್, ಬಂಟಿಂಗ್ಗಳು ರಾರಾಜಿಸಿದವು.</p>.<p>ಯಾರ ವಿರುದ್ಧವೂ ಪ್ರಕರಣ ದಾಖಲಿಸದ ಬಿಬಿಎಂಪಿ ಈಗ, ಅವುಗಳ ತೆರವಿಗೆ ಒಂದು ವಾರ ಕಾಲಾವಕಾಶ ನೀಡಿದೆ. ‘ಹೈಕೋರ್ಟ್ ಆದೇಶದ ಪ್ರಕಾರ ಫ್ಲೆಕ್ಸ್ ಅಳವಡಿಕೆ ನಿಷೇಧ. ಅನಿವಾರ್ಯ ಸಂದರ್ಭದಲ್ಲಿ ವಿನಾಯಿತಿ ನೀಡಬೇಕಾಗುತ್ತದೆ. ತೆರವುಗೊಳಿ<br />ಸಬೇಕು ಎಂದು ಜೂನ್ 18ರಂದೇ ಆದೇಶ ಹೊರಡಿಸಿದ್ದೇವೆ. ಒಂದು ವಾರದಲ್ಲಿ ತೆರವುಗೊಳಿಸದಿದ್ದರೆ<br />ಪ್ರಕರಣ ದಾಖಲಿಸಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.</p>.<p>‘ಪ್ರಧಾನಿ ಬಂದಿದ್ದ ಕಾರ್ಯಕ್ರಮ ಎಂಬ ಕಾರಣಕ್ಕೆ ಫ್ಲೆಕ್ಸ್ ಹಾಕಲು ಪಾಲಿಕೆ ಯಾರಿಗೂ ಅನುಮತಿ ನೀಡಿಲ್ಲ, ನೀಡುವ ಪ್ರಶ್ನೆಯೂ ಇಲ್ಲ. ಏಕಾಏಕಿ ಪ್ರಕರಣ ದಾಖಲಿಸುವ ಬದಲು ಕಾಲಾವಕಾಶ ನೀಡುವುದು ಸೂಕ್ತ. ವಾರದಲ್ಲಿ ತೆರವುಗೊಳಿಸದಿದ್ದರೆ ಅದರಲ್ಲಿರುವ ಹೆಸರುಗಳನ್ನು ಆಧರಿಸಿ ಪ್ರಕರಣ ದಾಖಲಿಸುತ್ತೇವೆ’ ಎಂದು ಹೇಳಿದರು.</p>.<p>‘ಬೇರೆ ಪಕ್ಷದವರು ಫ್ಲೆಕ್ಸ್ ಹಾಕಿದರೆ ಒಂದು ವಾರ ಕಾಲಾವಕಾಶ ನೀಡಲಾಗುವುದೇ’ ಎಂಬ ಪ್ರಶ್ನೆಗೆ, ‘ಇಲ್ಲ, ಯಾರಿಗೂ ಅವಕಾಶ ನೀಡುವುದಿಲ್ಲ. ವಿಶೇಷ ಸಂದರ್ಭ ಆಗಿದ್ದರಿಂದ ವಿನಾಯಿತಿ ನೀಡಬೇಕಾಗುತ್ತದೆ’ ಎಂದರು.</p>.<p><strong>ಪ್ರಧಾನಿ ಹಾದು ಹೋದ ರಸ್ತೆ: 3 ವರ್ಷ ವೈಟ್ಟಾಪಿಂಗ್ ಇಲ್ಲ</strong></p>.<p>‘ಪ್ರಧಾನಿ ಅವರು ಹಾದು ಹೋದ 14 ಕಿಲೋ ಮೀಟರ್ ರಸ್ತೆಯಲ್ಲಿ ಮೂರು ವರ್ಷಗಳ ಕಾಲ ವೈಟ್ಟಾಪಿಂಗ್ ಕಾಮಗಾರಿ ಕೈಗೊಳ್ಳುವುದಿಲ್ಲ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದರು.</p>.<p>‘ಪ್ರಧಾನಿ ಅವರು ಬರುವ ದಾರಿಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಆದ್ದರಿಂದ ತುರ್ತು ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ವೈಟ್ಟಾಪಿಂಗ್ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಿದ್ದ ರಸ್ತೆಗಳೂ ಇದರಲ್ಲಿವೆ. ವೈಟ್ಟಾಪಿಂಗ್ ಕಾಮಗಾರಿ ತುರ್ತಾಗಿ ನಿರ್ವಹಿಸಲು ಸಾಧ್ಯವಿಲ್ಲ. ಆದ್ದರಿಂದ ಡಾಂಬರ್ ಹಾಕಲಾಗಿದೆ’ ಎಂದರು.</p>.<p>ಮಳೆಯ ನಡುವೆ ಕಾಮಗಾರಿ ನಿರ್ವಹಿಸಿದ್ದರಿಂದ ಒಂದು ಕಡೆ ಗುಣಮಟ್ಟ ಸರಿ ಇಲ್ಲ ಎಂಬ<br />ದೂರು ಇದೆ. ಪರಿಶೀಲಿಸಿ ಸರಿಪಡಿಸಲಾಗುವುದು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರಲು ಹಾಕಿದ್ದ ಫ್ಲೆಕ್ಸ್ಗಳ ತೆರವಿಗೆ ಒಂದು ವಾರ ಕಾಲಾವಕಾಶವನ್ನು ಬಿಬಿಎಂಪಿ ನೀಡಿದೆ. ಅಲ್ಲದೇ 16 ಸಾವಿರ ಫ್ಲೆಕ್ಸ್ಗಳನ್ನು ಪಾಲಿಕೆಯೇ ತೆರವುಗೊಳಿಸಿದೆ.</p>.<p>ನಗರದಲ್ಲಿ ಫ್ಲೆಕ್ಸ್ ಅಳವಡಿಕೆಗೆ ಅವಕಾಶ ನೀಡಬಾರದು ಎಂದು ಹೈಕೋರ್ಟ್ ಆದೇಶ ಹೊರಡಿಸಿದ್ದು, ಅದಾದ ನಂತರ ಯಾವುದೇ ಫ್ಲೆಕ್ಸ್ ಅಳವಡಿಕೆಗೆ ಬಿಬಿಎಂಪಿ ಅನುಮತಿ ನೀಡುತ್ತಿಲ್ಲ. ಆದರೂ, ಪ್ರಧಾನಿಯವರು ಬೆಂಗಳೂರಿಗೆ ಬಂದಾಗ ಅವರು ಸಂಚರಿಸಿದ ರಸ್ತೆಗಳಲ್ಲಿ ಸಾವಿರಾರು ಫ್ಲೆಕ್ಸ್, ಬಂಟಿಂಗ್ಗಳು ರಾರಾಜಿಸಿದವು.</p>.<p>ಯಾರ ವಿರುದ್ಧವೂ ಪ್ರಕರಣ ದಾಖಲಿಸದ ಬಿಬಿಎಂಪಿ ಈಗ, ಅವುಗಳ ತೆರವಿಗೆ ಒಂದು ವಾರ ಕಾಲಾವಕಾಶ ನೀಡಿದೆ. ‘ಹೈಕೋರ್ಟ್ ಆದೇಶದ ಪ್ರಕಾರ ಫ್ಲೆಕ್ಸ್ ಅಳವಡಿಕೆ ನಿಷೇಧ. ಅನಿವಾರ್ಯ ಸಂದರ್ಭದಲ್ಲಿ ವಿನಾಯಿತಿ ನೀಡಬೇಕಾಗುತ್ತದೆ. ತೆರವುಗೊಳಿ<br />ಸಬೇಕು ಎಂದು ಜೂನ್ 18ರಂದೇ ಆದೇಶ ಹೊರಡಿಸಿದ್ದೇವೆ. ಒಂದು ವಾರದಲ್ಲಿ ತೆರವುಗೊಳಿಸದಿದ್ದರೆ<br />ಪ್ರಕರಣ ದಾಖಲಿಸಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.</p>.<p>‘ಪ್ರಧಾನಿ ಬಂದಿದ್ದ ಕಾರ್ಯಕ್ರಮ ಎಂಬ ಕಾರಣಕ್ಕೆ ಫ್ಲೆಕ್ಸ್ ಹಾಕಲು ಪಾಲಿಕೆ ಯಾರಿಗೂ ಅನುಮತಿ ನೀಡಿಲ್ಲ, ನೀಡುವ ಪ್ರಶ್ನೆಯೂ ಇಲ್ಲ. ಏಕಾಏಕಿ ಪ್ರಕರಣ ದಾಖಲಿಸುವ ಬದಲು ಕಾಲಾವಕಾಶ ನೀಡುವುದು ಸೂಕ್ತ. ವಾರದಲ್ಲಿ ತೆರವುಗೊಳಿಸದಿದ್ದರೆ ಅದರಲ್ಲಿರುವ ಹೆಸರುಗಳನ್ನು ಆಧರಿಸಿ ಪ್ರಕರಣ ದಾಖಲಿಸುತ್ತೇವೆ’ ಎಂದು ಹೇಳಿದರು.</p>.<p>‘ಬೇರೆ ಪಕ್ಷದವರು ಫ್ಲೆಕ್ಸ್ ಹಾಕಿದರೆ ಒಂದು ವಾರ ಕಾಲಾವಕಾಶ ನೀಡಲಾಗುವುದೇ’ ಎಂಬ ಪ್ರಶ್ನೆಗೆ, ‘ಇಲ್ಲ, ಯಾರಿಗೂ ಅವಕಾಶ ನೀಡುವುದಿಲ್ಲ. ವಿಶೇಷ ಸಂದರ್ಭ ಆಗಿದ್ದರಿಂದ ವಿನಾಯಿತಿ ನೀಡಬೇಕಾಗುತ್ತದೆ’ ಎಂದರು.</p>.<p><strong>ಪ್ರಧಾನಿ ಹಾದು ಹೋದ ರಸ್ತೆ: 3 ವರ್ಷ ವೈಟ್ಟಾಪಿಂಗ್ ಇಲ್ಲ</strong></p>.<p>‘ಪ್ರಧಾನಿ ಅವರು ಹಾದು ಹೋದ 14 ಕಿಲೋ ಮೀಟರ್ ರಸ್ತೆಯಲ್ಲಿ ಮೂರು ವರ್ಷಗಳ ಕಾಲ ವೈಟ್ಟಾಪಿಂಗ್ ಕಾಮಗಾರಿ ಕೈಗೊಳ್ಳುವುದಿಲ್ಲ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದರು.</p>.<p>‘ಪ್ರಧಾನಿ ಅವರು ಬರುವ ದಾರಿಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಆದ್ದರಿಂದ ತುರ್ತು ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ವೈಟ್ಟಾಪಿಂಗ್ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಿದ್ದ ರಸ್ತೆಗಳೂ ಇದರಲ್ಲಿವೆ. ವೈಟ್ಟಾಪಿಂಗ್ ಕಾಮಗಾರಿ ತುರ್ತಾಗಿ ನಿರ್ವಹಿಸಲು ಸಾಧ್ಯವಿಲ್ಲ. ಆದ್ದರಿಂದ ಡಾಂಬರ್ ಹಾಕಲಾಗಿದೆ’ ಎಂದರು.</p>.<p>ಮಳೆಯ ನಡುವೆ ಕಾಮಗಾರಿ ನಿರ್ವಹಿಸಿದ್ದರಿಂದ ಒಂದು ಕಡೆ ಗುಣಮಟ್ಟ ಸರಿ ಇಲ್ಲ ಎಂಬ<br />ದೂರು ಇದೆ. ಪರಿಶೀಲಿಸಿ ಸರಿಪಡಿಸಲಾಗುವುದು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>