<p><strong>ಬೆಂಗಳೂರು:</strong> ಕೋವಿಡ್ ಬಿಕ್ಕಟ್ಟಿನಿಂದಾಗಿ ವಿಮಾನಯಾನ ಉದ್ಯಮವೂ ಸಂಕಷ್ಟಕ್ಕೆ ಸಿಲುಕಿದೆ. ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವ ಕಾರಣ ಆದಾಯಕ್ಕೂ ಪೆಟ್ಟು ಬಿದ್ದಿದೆ.</p>.<p>ಲಾಕ್ಡೌನ್ ತೆರವುಗೊಂಡ ಬಳಿಕ ಭಾರತದಲ್ಲಿ 2020ರ ಮೇ25ರಂದು ದೇಶೀಯ ವಿಮಾನ ಹಾರಾಟ ಪುನರಾರಂಭವಾಗಿತ್ತು. ಅಂದಿನಿಂದ ಈವರೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧೆಡೆಗೆ ಒಟ್ಟು 1.91 ಕೋಟಿ ಮಂದಿ ಪ್ರಯಾಣ ಬೆಳೆಸಿದ್ದಾರೆ. 2019–20ನೇ ಸಾಲಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಇದು ಶೇ 66ರಷ್ಟು ಕಡಿಮೆ.</p>.<p>‘ಪ್ರಸಕ್ತ ಆರ್ಥಿಕ ವರ್ಷ ದೇಶೀಯ ಮಾರ್ಗದಲ್ಲಿ1.45 ಕೋಟಿ ಮಂದಿ ಸಂಚರಿಸಿದ್ದಾರೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ (2.7 ಕೋಟಿ) ಇದು ಶೇ 63 ರಷ್ಟು ಕ್ಷೀಣಿಸಿದೆ. ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಕೇವಲ46 ಸಾವಿರ ಮಂದಿ ಪ್ರಯಾಣ ಬೆಳೆಸಿದ್ದಾರೆ. ಹಿಂದಿನ ವರ್ಷಕ್ಕೆ ತುಲನೆ ಮಾಡಿದರೆ ಇದು ಶೇ 90ರಷ್ಟು ಕಡಿಮೆ. ಕೋವಿಡ್ನಿಂದಾಗಿ ಎಲ್ಲ ರಾಷ್ಟ್ರಗಳು ವಿಮಾನ ಯಾನದ ಮೇಲೆ ನಿರ್ಬಂಧ ಹೇರಿದ್ದು ಇದಕ್ಕೆ ಕಾರಣ’ ಎಂದು ಪ್ರಕಟಣೆ ತಿಳಿಸಿದೆ.</p>.<p>‘ವಿಮಾನಗಳ ಸಂಚಾರ ಕೂಡ2.31 ಲಕ್ಷದಿಂದ1.13 ಲಕ್ಷಕ್ಕೆ ತಗ್ಗಿದೆ. ಸರಕು ಸಾಗಣೆಯು3.74 ಲಕ್ಷ ಟನ್ನಿಂದ3.26 ಲಕ್ಷ ಟನ್ಗೆ ಇಳಿದಿದೆ. ಹೀಗಿದ್ದರೂ ಕೂಡ ಬಿಐಎಎಲ್ ತಾನು ಯೋಜಿಸಿರುವಂತೆ ಮೂಲಸೌಕಯ ಯೋಜನೆಗಳನ್ನು ಪೂರ್ಣಗೊಳಿಸಲು ಬದ್ಧವಾಗಿದೆ’ ಎಂದೂ ಪ್ರಕಟಣೆ ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೋವಿಡ್ ಬಿಕ್ಕಟ್ಟಿನಿಂದಾಗಿ ವಿಮಾನಯಾನ ಉದ್ಯಮವೂ ಸಂಕಷ್ಟಕ್ಕೆ ಸಿಲುಕಿದೆ. ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವ ಕಾರಣ ಆದಾಯಕ್ಕೂ ಪೆಟ್ಟು ಬಿದ್ದಿದೆ.</p>.<p>ಲಾಕ್ಡೌನ್ ತೆರವುಗೊಂಡ ಬಳಿಕ ಭಾರತದಲ್ಲಿ 2020ರ ಮೇ25ರಂದು ದೇಶೀಯ ವಿಮಾನ ಹಾರಾಟ ಪುನರಾರಂಭವಾಗಿತ್ತು. ಅಂದಿನಿಂದ ಈವರೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧೆಡೆಗೆ ಒಟ್ಟು 1.91 ಕೋಟಿ ಮಂದಿ ಪ್ರಯಾಣ ಬೆಳೆಸಿದ್ದಾರೆ. 2019–20ನೇ ಸಾಲಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಇದು ಶೇ 66ರಷ್ಟು ಕಡಿಮೆ.</p>.<p>‘ಪ್ರಸಕ್ತ ಆರ್ಥಿಕ ವರ್ಷ ದೇಶೀಯ ಮಾರ್ಗದಲ್ಲಿ1.45 ಕೋಟಿ ಮಂದಿ ಸಂಚರಿಸಿದ್ದಾರೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ (2.7 ಕೋಟಿ) ಇದು ಶೇ 63 ರಷ್ಟು ಕ್ಷೀಣಿಸಿದೆ. ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಕೇವಲ46 ಸಾವಿರ ಮಂದಿ ಪ್ರಯಾಣ ಬೆಳೆಸಿದ್ದಾರೆ. ಹಿಂದಿನ ವರ್ಷಕ್ಕೆ ತುಲನೆ ಮಾಡಿದರೆ ಇದು ಶೇ 90ರಷ್ಟು ಕಡಿಮೆ. ಕೋವಿಡ್ನಿಂದಾಗಿ ಎಲ್ಲ ರಾಷ್ಟ್ರಗಳು ವಿಮಾನ ಯಾನದ ಮೇಲೆ ನಿರ್ಬಂಧ ಹೇರಿದ್ದು ಇದಕ್ಕೆ ಕಾರಣ’ ಎಂದು ಪ್ರಕಟಣೆ ತಿಳಿಸಿದೆ.</p>.<p>‘ವಿಮಾನಗಳ ಸಂಚಾರ ಕೂಡ2.31 ಲಕ್ಷದಿಂದ1.13 ಲಕ್ಷಕ್ಕೆ ತಗ್ಗಿದೆ. ಸರಕು ಸಾಗಣೆಯು3.74 ಲಕ್ಷ ಟನ್ನಿಂದ3.26 ಲಕ್ಷ ಟನ್ಗೆ ಇಳಿದಿದೆ. ಹೀಗಿದ್ದರೂ ಕೂಡ ಬಿಐಎಎಲ್ ತಾನು ಯೋಜಿಸಿರುವಂತೆ ಮೂಲಸೌಕಯ ಯೋಜನೆಗಳನ್ನು ಪೂರ್ಣಗೊಳಿಸಲು ಬದ್ಧವಾಗಿದೆ’ ಎಂದೂ ಪ್ರಕಟಣೆ ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>