‘ಪೀಣ್ಯ– ಕೆನ್ನಮೆಟಲ್ (ವಿಡಿಯಾ) ನಡುವೆ ಈ ಮೇಲ್ಸೇತುವೆ ಹಾದುಹೋಗಿದ್ದು, 120 ಪಿಲ್ಲರ್ಗಳಿವೆ. ಸ್ಪ್ಯಾನ್ಗಳ ನಡುವೆ ಇರುವ ಹಳೆಯದಾದ 1,200 ಕೇಬಲ್ಗಳನ್ನು ಬದಲಾವಣೆ ಮಾಡಬೇಕಿದೆ. ಕೇಬಲ್ ಬದಲಾವಣೆ ಮಾಡಿದ ಮೇಲೆ ಕಾಂಕ್ರೀಟ್ ಹಾಕಬೇಕು. ಕಾಂಕ್ರೀಟ್ ಭದ್ರಗೊಳ್ಳಲು 5 ತಾಸು ಬೇಕಿದ್ದು ರಾತ್ರಿ ವೇಳೆ ಕಾಮಗಾರಿ ನಡೆಸಲಾಗುವುದು. ಹೀಗಾಗಿ, ರಾತ್ರಿ ವೇಳೆ ಮೇಲ್ಸೇತುವೆಯಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸುವಂತೆ ಸಂಚಾರ ಪೊಲೀಸರನ್ನು ಕೋರಲಾಗಿದೆ. ಪೊಲೀಸರು ಅನುಮತಿ ನೀಡಿದರೆ ರಾತ್ರಿ ವೇಳೆ ಎಲ್ಲ ವಾಹನ ಸಂಚಾರ ನಿರ್ಬಂಧಿಸಿ ಕಾಮಗಾರಿ ನಡೆಸಲಾಗುವುದು. ಎಲ್ಲ ಕೇಬಲ್ಗಳನ್ನು ಬದಲಾವಣೆ ಮಾಡಿದರೆ ಸೇತುವೆ ಮತ್ತಷ್ಟು ಭದ್ರವಾಗಲಿದೆ’ ಎಂದು ಮೇಲ್ಸೇತುವೆ ಅಧ್ಯಯನ ಸಮಿತಿ ಸದಸ್ಯ ಚಂದ್ರಕಿಶನ್ ತಿಳಿಸಿದ್ದಾರೆ.