<p><strong>ಯಲಹಂಕ: ರೇವಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಹತ್ತನೇ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ವಿವಿಧ ವಿಷಯಗಳಲ್ಲಿ ಒಟ್ಟು 4679 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು</strong><strong>.</strong></p>.<p><strong>ಈ ಪೈಕಿ 3409 ಪದವಿ</strong><strong>, </strong><strong>1194 ಸ್ನಾತಕೋತ್ತರ ಪದವಿ ಹಾಗೂ 77 ಪಿ</strong><strong>ಎಚ್.ಡಿ ಪದವಿಗಳನ್ನು ಪ್ರದಾನ ಮಾಡಲಾಯಿತು. ಇದರ ಜೊತೆಗೆ </strong><strong>70 </strong><strong>ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು.</strong></p>.<p><strong>ಈ ವೇಳೆ ಮಾತನಾಡಿದ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್</strong><strong>, ‘</strong><strong>ವಿದ್ಯಾರ್ಥಿಗಳು ಪ್ರಶ್ನೆ ಕೇಳಿಕೊಳ್ಳುವ ಉತ್ಸಾಹ ಹಾಗೂ ಚೈತನ್ಯವನ್ನು ಉಳಿಸಿಕೊಳ್ಳಬೇಕು. </strong><strong>ಮುಂದೇನು</strong><strong>? </strong><strong>ಬೇರೆ ಏನು ಬಾಕಿ ಇದೆ</strong><strong>? </strong><strong>ಹಾಗೂ ಹೆಚ್ಚು ಏನು ಬೇಕಿದೆ</strong><strong>? </strong><strong>ಈ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳುವುದರಿಂದ ಕುತೂಹಲ</strong><strong>, </strong><strong>ನಿರಂತರ ಸುಧಾರಣೆ ನಿಮ್ಮಲ್ಲಿ ರೂಢಿಸುತ್ತದೆ ಎಂದರು.</strong></p>.<p><strong>ಕಠಿಣ ಪರಿಶ್ರಮ</strong><strong>, </strong><strong>ಪ್ರಾಮಾಣಿಕತೆ ಹಾಗೂ ಮಾನವೀಯ ಗುಣಗಳು ಬಹಳ ಮುಖ್ಯ. ಈ ಮೌಲ್ಯಗಳು ಉದ್ದೇಶ ಹಾಗೂ ದೈವತ್ವದ ಮಾರ್ಗದರ್ಶನ ಪಡೆದುಕೊಂಡಲ್ಲಿ ನೈತಿಕವಾಗಿ ಗಟ್ಟಿಯಾಗಿ ನಿಲ್ಲುವಂತೆ ವ್ಯಕ್ತಿಗಳನ್ನು ಸಬಲಗೊಳಿಸುತ್ತವೆ ಎಂದು ತಿಳಿಸಿದರು.</strong></p>.<p><strong>ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಪಿ.ಶ್ಯಾಮರಾಜು ಮಾತನಾಡಿ</strong><strong>, ‘ </strong><strong>ಶಿಕ್ಷಣವೆಂದರೆ ಕೇವಲ ಪದವಿ ಪಡೆಯುವುದು ಮಾತ್ರವಲ್ಲದೆ ಬದುಕಿಗಾಗಿ ಪಾಠ ಕಲಿಯುವುದಾಗಿದೆ</strong><strong>. </strong><strong>ಇದರ ಜೊತೆಗೆ ನಾವೀನ್ಯಕಾರರು</strong><strong>, </strong><strong>ಉದ್ಯಮಿಗಳು ಹಾಗೂ ಭವಿಷ್ಯವನ್ನು ರೂಪಿಸುವ ಸಾಮರ್ಥ್ಯವಿರುವ ವೃತ್ತಿಪರರನ್ನು ಪೋಷಿಸುವುದಕ್ಕೆ ಸಂಸ್ಥೆಯು ಸದಾ ಬದ್ಧವಾಗಿದೆ’ ಎಂದರು</strong><strong>.</strong></p>.<p><strong>ಕುಲಪತಿ ಡಾ ಸಂಜಯ್ ಆರ್.ಚಿಟ್ನಿಸ್</strong><strong>, </strong><strong>ಸಹ ಕುಲಪತಿ ಉಮೇಶ್ ಎಸ್.ರಾಜು</strong><strong>, </strong><strong>ಕುಲಸಚಿವ ಡಾ.ಎಂ.ಧನಂಜಯ</strong><strong>, </strong><strong>ಕುಲಸಚಿವೆ (ಮೌಲ್ಯಮಾಪನ)ಡಾ</strong><strong>.</strong><strong>ಬೀನಾ</strong><strong>.</strong><strong>ಜಿ ಉಪಸ್ಥಿತರಿದ್ದರು.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ: ರೇವಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಹತ್ತನೇ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ವಿವಿಧ ವಿಷಯಗಳಲ್ಲಿ ಒಟ್ಟು 4679 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು</strong><strong>.</strong></p>.<p><strong>ಈ ಪೈಕಿ 3409 ಪದವಿ</strong><strong>, </strong><strong>1194 ಸ್ನಾತಕೋತ್ತರ ಪದವಿ ಹಾಗೂ 77 ಪಿ</strong><strong>ಎಚ್.ಡಿ ಪದವಿಗಳನ್ನು ಪ್ರದಾನ ಮಾಡಲಾಯಿತು. ಇದರ ಜೊತೆಗೆ </strong><strong>70 </strong><strong>ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು.</strong></p>.<p><strong>ಈ ವೇಳೆ ಮಾತನಾಡಿದ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್</strong><strong>, ‘</strong><strong>ವಿದ್ಯಾರ್ಥಿಗಳು ಪ್ರಶ್ನೆ ಕೇಳಿಕೊಳ್ಳುವ ಉತ್ಸಾಹ ಹಾಗೂ ಚೈತನ್ಯವನ್ನು ಉಳಿಸಿಕೊಳ್ಳಬೇಕು. </strong><strong>ಮುಂದೇನು</strong><strong>? </strong><strong>ಬೇರೆ ಏನು ಬಾಕಿ ಇದೆ</strong><strong>? </strong><strong>ಹಾಗೂ ಹೆಚ್ಚು ಏನು ಬೇಕಿದೆ</strong><strong>? </strong><strong>ಈ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳುವುದರಿಂದ ಕುತೂಹಲ</strong><strong>, </strong><strong>ನಿರಂತರ ಸುಧಾರಣೆ ನಿಮ್ಮಲ್ಲಿ ರೂಢಿಸುತ್ತದೆ ಎಂದರು.</strong></p>.<p><strong>ಕಠಿಣ ಪರಿಶ್ರಮ</strong><strong>, </strong><strong>ಪ್ರಾಮಾಣಿಕತೆ ಹಾಗೂ ಮಾನವೀಯ ಗುಣಗಳು ಬಹಳ ಮುಖ್ಯ. ಈ ಮೌಲ್ಯಗಳು ಉದ್ದೇಶ ಹಾಗೂ ದೈವತ್ವದ ಮಾರ್ಗದರ್ಶನ ಪಡೆದುಕೊಂಡಲ್ಲಿ ನೈತಿಕವಾಗಿ ಗಟ್ಟಿಯಾಗಿ ನಿಲ್ಲುವಂತೆ ವ್ಯಕ್ತಿಗಳನ್ನು ಸಬಲಗೊಳಿಸುತ್ತವೆ ಎಂದು ತಿಳಿಸಿದರು.</strong></p>.<p><strong>ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಪಿ.ಶ್ಯಾಮರಾಜು ಮಾತನಾಡಿ</strong><strong>, ‘ </strong><strong>ಶಿಕ್ಷಣವೆಂದರೆ ಕೇವಲ ಪದವಿ ಪಡೆಯುವುದು ಮಾತ್ರವಲ್ಲದೆ ಬದುಕಿಗಾಗಿ ಪಾಠ ಕಲಿಯುವುದಾಗಿದೆ</strong><strong>. </strong><strong>ಇದರ ಜೊತೆಗೆ ನಾವೀನ್ಯಕಾರರು</strong><strong>, </strong><strong>ಉದ್ಯಮಿಗಳು ಹಾಗೂ ಭವಿಷ್ಯವನ್ನು ರೂಪಿಸುವ ಸಾಮರ್ಥ್ಯವಿರುವ ವೃತ್ತಿಪರರನ್ನು ಪೋಷಿಸುವುದಕ್ಕೆ ಸಂಸ್ಥೆಯು ಸದಾ ಬದ್ಧವಾಗಿದೆ’ ಎಂದರು</strong><strong>.</strong></p>.<p><strong>ಕುಲಪತಿ ಡಾ ಸಂಜಯ್ ಆರ್.ಚಿಟ್ನಿಸ್</strong><strong>, </strong><strong>ಸಹ ಕುಲಪತಿ ಉಮೇಶ್ ಎಸ್.ರಾಜು</strong><strong>, </strong><strong>ಕುಲಸಚಿವ ಡಾ.ಎಂ.ಧನಂಜಯ</strong><strong>, </strong><strong>ಕುಲಸಚಿವೆ (ಮೌಲ್ಯಮಾಪನ)ಡಾ</strong><strong>.</strong><strong>ಬೀನಾ</strong><strong>.</strong><strong>ಜಿ ಉಪಸ್ಥಿತರಿದ್ದರು.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>