ಬೆಂಗಳೂರು: 12 ವರ್ಷಗಳ ನಂತರ ಸ್ಯಾಂಕಿ ಕೆರೆ ಭರ್ತಿಯಾಗಿದ್ದು, ಸುತ್ತಮುತ್ತಲ ಜನರ ಸಂತಸಕ್ಕೆ ಕಾರಣವಾಗಿದೆ.
ಸದಾಶಿವನಗರ, ಅರಣ್ಯ ಭವನ ಸುತ್ತಮುತ್ತಲ ಮಳೆ ನೀರ ವ್ಯರ್ಥವಾಗಿ ಹರಿದು ಹೋಗುತ್ತಿತ್ತು.ಇತ್ತೀಚೆಗೆ ಕೆರೆ ಸುತ್ತ ಪಾದಚಾರಿ ಮಾರ್ಗ ಅಭಿವೃದ್ಧಿಪಡಿಸಿದ ಬಿಬಿಎಂಪಿ, ಹೂಳು, ಕಸದಿಂದ ಮುಚ್ಚಿ ಹೋಗಿದ್ದ ಕಾಲುವೆಗಳನ್ನು ಸರಿಪಡಿಸಿದ ಕಾರಣ ಕೆರೆಗೆ ನೀರಿನ ಹರಿದಿದೆ ಎಂದು ಅಧಿಕಾರಿಗಳು ಹೇಳಿದರು.
ಮೈದುಂಬಿದ್ದ ಮತ್ತು ಗುರುವಾರ ಬೆಳಿಗ್ಗೆ ಇಬ್ಬನಿ ಹೊದ್ದಿದ್ದ ಸ್ಯಾಂಕಿ ಕೆರೆಗೆ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಬಾಗಿನ ಅರ್ಪಿಸಿದರು.