<p><strong>ಬೆಂಗಳೂರು:</strong> ನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಬಿಬಿಎಂಪಿಯು ಬಡಾವಣೆಗಳ ಹಾಗೂ ಅಪಾರ್ಟ್ಮೆಂಟ್ ಸಮುಚ್ಚಯಗಳ ನಿವಾಸಿಗಳಿಗೆ ಸ್ವಚ್ಛತೆ ಕಾಪಾಡುವಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ಮಾಡಿದೆ.</p>.<p>ಒಳಬರುವವರನ್ನು ಹಾಗೂ ಹೊರ ಹೋಗುವವರನ್ನು ಥರ್ಮಲ್ ಸ್ಕ್ಯಾನರ್ ಬಳಸಿ ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕು ಎಂದು ಸೂಚಿಸಿದೆ.</p>.<p>ಈ ಕುರಿತು ಬಿಬಿಎಂಪಿ ಮಂಗಳವಾರ ಸುತ್ತೋಲೆ ಹೊರಡಿಸಿದ್ದು ಅದರ ಪ್ರಮುಖ ಸೂಚನೆಗಳು ಈ ರೀತಿ ಇವೆ.</p>.<p>* ಕಟ್ಟಡಕ್ಕೆ ಹಾಗೂ ವಠಾರಕ್ಕೆ ಸೋಂಕು ನಿವಾರಣಾ ದ್ರಾವಣವನ್ನು ಸಿಂಪಡಿಸಬೇಕು/ ಧೂಮೀಕರಣ ಮಾಡಬೇಕು</p>.<p>* ಒಳಬರುವವರು ಹಾಗೂ ಹೊರ ಹೋಗುವವರು ಸೋಂಕು ನಿವಾರಣ ದ್ರಾವಣದಿಂದ (ಸ್ಯಾನಿಟೈಸರ್) ಅಥವಾ ಸಾಬೂನಿನ ದ್ರಾವಣದಿಂದ ಕಡ್ಡಾಯವಾಗಿ ಕೈತೊಳೆಯಬೇಕು. ಇದಕ್ಕೆ ಅಗತ್ಯ ಪ್ರಮಾಣದ ದ್ರಾವಣ ಲಭ್ಯ ಇರುವಂತೆ ನೋಡಿಕೊಳ್ಳಬೇಕು.</p>.<p>*ಹಸಿ, ಒಣ ಹಾಗೂ ಜೈವಿಕ–ವೈದ್ಯಕೀಯ (ಬಯೋ ಮೆಡಿಕಲ್) ತ್ಯಾಜ್ಯಗಳನ್ನು ಕಡ್ಡಾಯವಾಗಿ ಮೂಲದಲ್ಲೇ ಬೇರ್ಪಡಿಸಬೇಕು. ಸ್ಯಾನಿಟರಿ ಬಯೋಮೆಡಿಕಲ್ ತ್ಯಾಜ್ಯವನ್ನು ಕಾಗದದ ಚೀಲ ಅಥವಾ ಇತರ ಪರಿಸರಸ್ನೇಹಿ ಚೀಲದಲ್ಲಿ ಸಂಗ್ರಹಿಸಿ ಪ್ರತ್ಯೇಕವಾಗಿ ಸಗಟು ಕಸ ಸಂಗ್ರಹಿಸುವವರಿಗೆ ನೀಡಬೇಕು</p>.<p>*ಈಜುಕೊಳ ಜಿಮ್, ಕ್ಲಬ್ಹೌಸ್ ಉದ್ಯಾನ, ಆಟಪಾಠದ ಸಾಂಗ್ರಿ, ಮನರಂಜನಾ ಸಾಮಗ್ರಿ ಬಳಕೆ ನಿಲ್ಲಿಸಬೇಕು.</p>.<p>*ಶೀತ, ಕೆಮ್ಮು, ಜ್ವರದ ಲಕ್ಷಣ ಇದ್ದವರನ್ನು ತಕ್ಷಣ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು</p>.<p>*ಸುರಕ್ಷತಾ ದಿರಿಸು ಧರಿಸಬೇಕು. ಪರಸ್ಪರ ಮಾತನಾಡುವಾಗ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು</p>.<p>*ಸ್ವಚ್ಛತಾ ಕಾರ್ಮಿಕರು ಹಾಗೂ ಮನೆಗಳಲ್ಲಿ ಕೆಲಸ ಮಾಡುವವರು ಕೈಗವಸು, ಮುಖಗವಸು ಹಾಗೂ ಶೂ ಧರಿಸುವಂತೆ ನೋಡಿಕೊಳ್ಳಬೇಕು. ಕೈಗಳನ್ನು ಆಗಾಗ ಸ್ಯಾನಿಟೈಸರ್ ಬಳಸಿ ಶುಚಿಗೊಳಿಸಿಕೊಳ್ಳಬೇಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಬಿಬಿಎಂಪಿಯು ಬಡಾವಣೆಗಳ ಹಾಗೂ ಅಪಾರ್ಟ್ಮೆಂಟ್ ಸಮುಚ್ಚಯಗಳ ನಿವಾಸಿಗಳಿಗೆ ಸ್ವಚ್ಛತೆ ಕಾಪಾಡುವಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ಮಾಡಿದೆ.</p>.<p>ಒಳಬರುವವರನ್ನು ಹಾಗೂ ಹೊರ ಹೋಗುವವರನ್ನು ಥರ್ಮಲ್ ಸ್ಕ್ಯಾನರ್ ಬಳಸಿ ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕು ಎಂದು ಸೂಚಿಸಿದೆ.</p>.<p>ಈ ಕುರಿತು ಬಿಬಿಎಂಪಿ ಮಂಗಳವಾರ ಸುತ್ತೋಲೆ ಹೊರಡಿಸಿದ್ದು ಅದರ ಪ್ರಮುಖ ಸೂಚನೆಗಳು ಈ ರೀತಿ ಇವೆ.</p>.<p>* ಕಟ್ಟಡಕ್ಕೆ ಹಾಗೂ ವಠಾರಕ್ಕೆ ಸೋಂಕು ನಿವಾರಣಾ ದ್ರಾವಣವನ್ನು ಸಿಂಪಡಿಸಬೇಕು/ ಧೂಮೀಕರಣ ಮಾಡಬೇಕು</p>.<p>* ಒಳಬರುವವರು ಹಾಗೂ ಹೊರ ಹೋಗುವವರು ಸೋಂಕು ನಿವಾರಣ ದ್ರಾವಣದಿಂದ (ಸ್ಯಾನಿಟೈಸರ್) ಅಥವಾ ಸಾಬೂನಿನ ದ್ರಾವಣದಿಂದ ಕಡ್ಡಾಯವಾಗಿ ಕೈತೊಳೆಯಬೇಕು. ಇದಕ್ಕೆ ಅಗತ್ಯ ಪ್ರಮಾಣದ ದ್ರಾವಣ ಲಭ್ಯ ಇರುವಂತೆ ನೋಡಿಕೊಳ್ಳಬೇಕು.</p>.<p>*ಹಸಿ, ಒಣ ಹಾಗೂ ಜೈವಿಕ–ವೈದ್ಯಕೀಯ (ಬಯೋ ಮೆಡಿಕಲ್) ತ್ಯಾಜ್ಯಗಳನ್ನು ಕಡ್ಡಾಯವಾಗಿ ಮೂಲದಲ್ಲೇ ಬೇರ್ಪಡಿಸಬೇಕು. ಸ್ಯಾನಿಟರಿ ಬಯೋಮೆಡಿಕಲ್ ತ್ಯಾಜ್ಯವನ್ನು ಕಾಗದದ ಚೀಲ ಅಥವಾ ಇತರ ಪರಿಸರಸ್ನೇಹಿ ಚೀಲದಲ್ಲಿ ಸಂಗ್ರಹಿಸಿ ಪ್ರತ್ಯೇಕವಾಗಿ ಸಗಟು ಕಸ ಸಂಗ್ರಹಿಸುವವರಿಗೆ ನೀಡಬೇಕು</p>.<p>*ಈಜುಕೊಳ ಜಿಮ್, ಕ್ಲಬ್ಹೌಸ್ ಉದ್ಯಾನ, ಆಟಪಾಠದ ಸಾಂಗ್ರಿ, ಮನರಂಜನಾ ಸಾಮಗ್ರಿ ಬಳಕೆ ನಿಲ್ಲಿಸಬೇಕು.</p>.<p>*ಶೀತ, ಕೆಮ್ಮು, ಜ್ವರದ ಲಕ್ಷಣ ಇದ್ದವರನ್ನು ತಕ್ಷಣ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು</p>.<p>*ಸುರಕ್ಷತಾ ದಿರಿಸು ಧರಿಸಬೇಕು. ಪರಸ್ಪರ ಮಾತನಾಡುವಾಗ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು</p>.<p>*ಸ್ವಚ್ಛತಾ ಕಾರ್ಮಿಕರು ಹಾಗೂ ಮನೆಗಳಲ್ಲಿ ಕೆಲಸ ಮಾಡುವವರು ಕೈಗವಸು, ಮುಖಗವಸು ಹಾಗೂ ಶೂ ಧರಿಸುವಂತೆ ನೋಡಿಕೊಳ್ಳಬೇಕು. ಕೈಗಳನ್ನು ಆಗಾಗ ಸ್ಯಾನಿಟೈಸರ್ ಬಳಸಿ ಶುಚಿಗೊಳಿಸಿಕೊಳ್ಳಬೇಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>