‘ಮಂಜುಳಾ ಅವರ ಸ್ನೇಹಿತರಿಗೆ ವಾಟ್ಸ್ಆ್ಯಪ್ನಲ್ಲಿ ಸಂದೇಶ ಕಳುಹಿಸಿದ್ದ ಆರೋಪಿ, ‘ನನ್ನ ತಾಯಿಗೆ ಹುಷಾರಿಲ್ಲ. ವೈದ್ಯಕೀಯ ಚಿಕಿತ್ಸೆಗೆ ಹಣ ಬೇಕಿದೆ. ಹಣ ವರ್ಗಾವಣೆ ಮಾಡಿ’ ಎಂದಿದ್ದ. ಬ್ಯಾಂಕ್ ಖಾತೆಯೊಂದರ ವಿವರವನ್ನೂ ಕಳುಹಿಸಿದ್ದ. ಮಂಜುಳಾ ಅವರೇ ಸಂದೇಶ ಕಳುಹಿಸಿರಬಹುದೆಂದು ನಂಬಿದ್ದ ಸ್ನೇಹಿತರೊಬ್ಬರು, ₹4,500 ನೀಡಿದ್ದರು. ಈ ವಿಷಯ ಮಂಜುಳಾ ಅವರಿಗೆ ಇತ್ತೀಚೆಗೆ ಗೊತ್ತಾಗಿತ್ತು. ಬಳಿಕ ಅವರು ಠಾಣೆಗೆ ದೂರು ನೀಡಿದ್ದರು’ ಎಂದೂ ವಿವರಿಸಿದರು.