<p><strong>ಬಸವಕಲ್ಯಾಣ:</strong> ವಾಹನ ಡಿಕ್ಕಿಯಾದ ಪರಿಣಾಮ ನಗರದ ತ್ರಿಪುರಾಂತ ಕೆರೆ ನಾಲೆಗಿರುವ ಹೊಸ ಸೇತುವೆಯ ಬ್ಯಾರಿಕೇಡ್ ಮುರಿದಿದೆ. ಇದರಿಂದ ಅಪಾಯದ ಸಾಧ್ಯತೆ ಇದೆ.</p>.<p>ಜಿಲ್ಲೆಯಲ್ಲಿಯೇ ಬಸವಕಲ್ಯಾಣದಲ್ಲಿ ಅತ್ಯಧಿಕ ಸರಕು ಸಾಗಾಣಿಕೆ ವಾಹನಗಳಿವೆ. 10 ಸಾವಿರಕ್ಕೂ ಅಧಿಕ ಲಾರಿಗಳಿರುವ ಬಗ್ಗೆ ಅಂದಾಜು ಮಾಡಲಾಗಿದ್ದು ಸಾವಿರಕ್ಕೂ ಅಧಿಕ ಆಟೊ, ಟಂಟಂಗಳಿವೆ. ಸಾವಿರಾರು ದ್ವಿಚಕ್ರವಾಹನಗಳಿವೆ. ಹೀಗಾಗಿ ಇಲ್ಲಿ ವಾಹನಗಳ ಓಡಾಟ ಹೆಚ್ಚಿರುತ್ತದೆ. ಇಲ್ಲಿಂದ 7 ಕಿ.ಮೀ ಅಂತರದಲ್ಲಿನ ಸಸ್ತಾಪುರ ಬಂಗ್ಲಾ ಬಳಿಯ ರಾಷ್ಟ್ರೀಯ ಹೆದ್ದಾರಿವರೆಗೆ ರಾತ್ರಿ ಹಗಲು ವಾಹನಗಳು ಸಂಚರಿಸುತ್ತವೆ. ಆದರೆ ಈ ರಸ್ತೆಯಲ್ಲಿನ ತ್ರಿಪುರಾಂತ ಕೆರೆಯ ನಾಲೆಗೆ ಕಟ್ಟಿರುವ ಹೊಸ ಸೇತುವೆಯ ಬ್ಯಾರಿಕೇಡ್ಗೆ ಈಚೆಗೆ ಹಾನಿ ಆಗಿದ್ದರಿಂದ ತೊಂದರೆಯಾಗಿದೆ.</p>.<p>ನಗರದಿಂದ ಹೊರ ಹೋಗುವ ವಾಹನಗಳು ಇಲ್ಲಿನ ಎತ್ತರದ ಹೊಸ ಸೇತುವೆಯಿಂದ ಸಾಗುತ್ತವೆ. ಆದರೆ ನಗರದೊಳಗೆ ಬರುವ ವಾಹನಗಳು ಪಕ್ಕದಲ್ಲಿನ ಚಿಕ್ಕದಾಗಿರುವ ಹಳೆಯ ಸೇತುವೆಯ ಮೇಲಿಂದಲೇ ಸಂಚರಿಸುತ್ತವೆ. ಈ ಸೇತುವೆ ಸಹ ಶಿಥಿಲಗೊಂಡಿದೆ. ಇಲ್ಲಿಯೂ ಹೊಸದಾಗಿ ಎತ್ತರದ ಸೇತುವೆ ನಿರ್ಮಿಸುವ ಅಗತ್ಯವಿದೆ.</p>.<p>ಎರಡೂ ಸೇತುವೆಗಳಿಂದಲೂ ಅಪಾಯದ ಭಯ ಕಾಡುತ್ತಿದ್ದರೂ ಸಂಬಂಧಿತರು ಮಾತ್ರ ನಿರ್ಲಕ್ಷ ತೋರಿದ್ದಾರೆ. ಹೊಸ ಸೇತುವೆಯ ಬ್ಯಾರಿಕೇಡ್ ಮುರಿದು ಕೆಲ ತಿಂಗಳುಗಳಾದರೂ ಇದುವರೆಗೆ ದುರಸ್ತಿ ಕೈಗೊಂಡಿಲ್ಲ. ತಡೆಗೋಡೆಯೂ ನಿರ್ಮಿಸಿಲ್ಲ.</p>.<p>‘ಬ್ಯಾರಿಕೇಡ್ ಹಾಳಾಗಿದ್ದರಿಂದ ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನದವರಿಗೆ ರಸ್ತೆ ಕಾಣದೆ ಕೆಳಗೆ ಜಾರಿ ಬೀಳುವ ಸಾಧ್ಯತೆಯಿದೆ’ ಎಂದು ವ್ಯಾಪಾರಸ್ಥ ವೀರೇಶ ಬೋರಗೆ ಭೀತಿ ವ್ಯಕ್ತಪಡಿಸಿದ್ದಾರೆ.</p>.<p>‘ರಸ್ತೆ ಸರಳವಾಗಿರದೆ ತಿರುವಿನಂತಿದೆ. ಇಂಥದರಲ್ಲಿ ಬ್ಯಾರಿಕೇಡ್ ಸಹ ವ್ಯವಸ್ಥಿತವಾಗಿಲ್ಲ. ಹೊಸಬರಿಗೆ ಇಲ್ಲಿಂದ ಸುಲಭವಾಗಿ ವಾಹನಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಆಗಲಾರದು' ಎಂದು ಮುಖಂಡ ಲಕ್ಷ್ಮಣ ಕಪನೂರೆ ಹೇಳಿದ್ದಾರೆ.</p>.<p>‘ಹೊಸ ಸೇತುವೆಗೆ ಬ್ಯಾರಿಕೇಡ್ ಅಳವಡಿಸುವುದಕ್ಕೆ ಮತ್ತು ಹಳೆಯ ಸೇತುವೆಯ ದುರಸ್ತಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಸಂಬಂಧ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನಕ್ಕಗಿ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಧನರಾಜ ಚವಾಣ್ ಹೇಳಿದ್ದಾರೆ.</p>.<p>ಇಲಾಖೆಗೆ ಹೊಸ ಅನುದಾನ ಬಿಡುಗಡೆಯಾದ ಬಳಿಕ ಬ್ಯಾರಿಕೇಡ್ ಅಳವಡಿಸಲಾಗುವುದು. ಹಳೆಯ ಸೇತುವೆಯ ದುರುಸ್ತಿಗೂ ಕ್ರಮ ಕೈಗೊಳ್ಳಲಾಗುವುದು </p><p>-ಧನರಾಜ ಚವಾಣ್ ಎಇಇ ಲೋಕೋಪಯೋಗಿ ಇಲಾಖೆ</p>.<p>ಸೇತುವೆ 25 ಅಡಿ ಎತ್ತರವಿದೆ. ಅಲ್ಲದೆ ರಸ್ತೆಗೆ ಹತ್ತಿಕೊಂಡಿಯೇ ಮುಳ್ಳುಕಂಟೆಗಳು ಇರುವುದರಿಂದ ವಾಹನ ಕೆಳಕ್ಕೆ ಬಿದ್ದರೆ ದೊಡ್ಡ ಪ್ರಮಾಣದ ಹಾನಿ ಆಗಲಿದೆ </p><p>-ಲಕ್ಷ್ಮಣ ಕಪನೂರೆ ಮುಖಂಡ ಬಸವಕಲ್ಯಾಣ</p>.<p>ಸೇತುವೆ ಸ್ಥಳದಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಹಾಗೂ ಸಿಗ್ನಲ್ ಫಲಕಗಳನ್ನು ಅಳವಡಿಸಲು ಆಗ್ರಹಿಸಿ ಸಂಬಂಧಿತರಿಗೆ ಈಚೆಗೆ ಮನವಿಪತ್ರ ಸಲ್ಲಿಸಲಾಗಿದೆ </p><p>-ವೀರೇಶ ಬೋರಗೆ ವ್ಯಾಪಾರಸ್ಥ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ:</strong> ವಾಹನ ಡಿಕ್ಕಿಯಾದ ಪರಿಣಾಮ ನಗರದ ತ್ರಿಪುರಾಂತ ಕೆರೆ ನಾಲೆಗಿರುವ ಹೊಸ ಸೇತುವೆಯ ಬ್ಯಾರಿಕೇಡ್ ಮುರಿದಿದೆ. ಇದರಿಂದ ಅಪಾಯದ ಸಾಧ್ಯತೆ ಇದೆ.</p>.<p>ಜಿಲ್ಲೆಯಲ್ಲಿಯೇ ಬಸವಕಲ್ಯಾಣದಲ್ಲಿ ಅತ್ಯಧಿಕ ಸರಕು ಸಾಗಾಣಿಕೆ ವಾಹನಗಳಿವೆ. 10 ಸಾವಿರಕ್ಕೂ ಅಧಿಕ ಲಾರಿಗಳಿರುವ ಬಗ್ಗೆ ಅಂದಾಜು ಮಾಡಲಾಗಿದ್ದು ಸಾವಿರಕ್ಕೂ ಅಧಿಕ ಆಟೊ, ಟಂಟಂಗಳಿವೆ. ಸಾವಿರಾರು ದ್ವಿಚಕ್ರವಾಹನಗಳಿವೆ. ಹೀಗಾಗಿ ಇಲ್ಲಿ ವಾಹನಗಳ ಓಡಾಟ ಹೆಚ್ಚಿರುತ್ತದೆ. ಇಲ್ಲಿಂದ 7 ಕಿ.ಮೀ ಅಂತರದಲ್ಲಿನ ಸಸ್ತಾಪುರ ಬಂಗ್ಲಾ ಬಳಿಯ ರಾಷ್ಟ್ರೀಯ ಹೆದ್ದಾರಿವರೆಗೆ ರಾತ್ರಿ ಹಗಲು ವಾಹನಗಳು ಸಂಚರಿಸುತ್ತವೆ. ಆದರೆ ಈ ರಸ್ತೆಯಲ್ಲಿನ ತ್ರಿಪುರಾಂತ ಕೆರೆಯ ನಾಲೆಗೆ ಕಟ್ಟಿರುವ ಹೊಸ ಸೇತುವೆಯ ಬ್ಯಾರಿಕೇಡ್ಗೆ ಈಚೆಗೆ ಹಾನಿ ಆಗಿದ್ದರಿಂದ ತೊಂದರೆಯಾಗಿದೆ.</p>.<p>ನಗರದಿಂದ ಹೊರ ಹೋಗುವ ವಾಹನಗಳು ಇಲ್ಲಿನ ಎತ್ತರದ ಹೊಸ ಸೇತುವೆಯಿಂದ ಸಾಗುತ್ತವೆ. ಆದರೆ ನಗರದೊಳಗೆ ಬರುವ ವಾಹನಗಳು ಪಕ್ಕದಲ್ಲಿನ ಚಿಕ್ಕದಾಗಿರುವ ಹಳೆಯ ಸೇತುವೆಯ ಮೇಲಿಂದಲೇ ಸಂಚರಿಸುತ್ತವೆ. ಈ ಸೇತುವೆ ಸಹ ಶಿಥಿಲಗೊಂಡಿದೆ. ಇಲ್ಲಿಯೂ ಹೊಸದಾಗಿ ಎತ್ತರದ ಸೇತುವೆ ನಿರ್ಮಿಸುವ ಅಗತ್ಯವಿದೆ.</p>.<p>ಎರಡೂ ಸೇತುವೆಗಳಿಂದಲೂ ಅಪಾಯದ ಭಯ ಕಾಡುತ್ತಿದ್ದರೂ ಸಂಬಂಧಿತರು ಮಾತ್ರ ನಿರ್ಲಕ್ಷ ತೋರಿದ್ದಾರೆ. ಹೊಸ ಸೇತುವೆಯ ಬ್ಯಾರಿಕೇಡ್ ಮುರಿದು ಕೆಲ ತಿಂಗಳುಗಳಾದರೂ ಇದುವರೆಗೆ ದುರಸ್ತಿ ಕೈಗೊಂಡಿಲ್ಲ. ತಡೆಗೋಡೆಯೂ ನಿರ್ಮಿಸಿಲ್ಲ.</p>.<p>‘ಬ್ಯಾರಿಕೇಡ್ ಹಾಳಾಗಿದ್ದರಿಂದ ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನದವರಿಗೆ ರಸ್ತೆ ಕಾಣದೆ ಕೆಳಗೆ ಜಾರಿ ಬೀಳುವ ಸಾಧ್ಯತೆಯಿದೆ’ ಎಂದು ವ್ಯಾಪಾರಸ್ಥ ವೀರೇಶ ಬೋರಗೆ ಭೀತಿ ವ್ಯಕ್ತಪಡಿಸಿದ್ದಾರೆ.</p>.<p>‘ರಸ್ತೆ ಸರಳವಾಗಿರದೆ ತಿರುವಿನಂತಿದೆ. ಇಂಥದರಲ್ಲಿ ಬ್ಯಾರಿಕೇಡ್ ಸಹ ವ್ಯವಸ್ಥಿತವಾಗಿಲ್ಲ. ಹೊಸಬರಿಗೆ ಇಲ್ಲಿಂದ ಸುಲಭವಾಗಿ ವಾಹನಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಆಗಲಾರದು' ಎಂದು ಮುಖಂಡ ಲಕ್ಷ್ಮಣ ಕಪನೂರೆ ಹೇಳಿದ್ದಾರೆ.</p>.<p>‘ಹೊಸ ಸೇತುವೆಗೆ ಬ್ಯಾರಿಕೇಡ್ ಅಳವಡಿಸುವುದಕ್ಕೆ ಮತ್ತು ಹಳೆಯ ಸೇತುವೆಯ ದುರಸ್ತಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಸಂಬಂಧ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನಕ್ಕಗಿ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಧನರಾಜ ಚವಾಣ್ ಹೇಳಿದ್ದಾರೆ.</p>.<p>ಇಲಾಖೆಗೆ ಹೊಸ ಅನುದಾನ ಬಿಡುಗಡೆಯಾದ ಬಳಿಕ ಬ್ಯಾರಿಕೇಡ್ ಅಳವಡಿಸಲಾಗುವುದು. ಹಳೆಯ ಸೇತುವೆಯ ದುರುಸ್ತಿಗೂ ಕ್ರಮ ಕೈಗೊಳ್ಳಲಾಗುವುದು </p><p>-ಧನರಾಜ ಚವಾಣ್ ಎಇಇ ಲೋಕೋಪಯೋಗಿ ಇಲಾಖೆ</p>.<p>ಸೇತುವೆ 25 ಅಡಿ ಎತ್ತರವಿದೆ. ಅಲ್ಲದೆ ರಸ್ತೆಗೆ ಹತ್ತಿಕೊಂಡಿಯೇ ಮುಳ್ಳುಕಂಟೆಗಳು ಇರುವುದರಿಂದ ವಾಹನ ಕೆಳಕ್ಕೆ ಬಿದ್ದರೆ ದೊಡ್ಡ ಪ್ರಮಾಣದ ಹಾನಿ ಆಗಲಿದೆ </p><p>-ಲಕ್ಷ್ಮಣ ಕಪನೂರೆ ಮುಖಂಡ ಬಸವಕಲ್ಯಾಣ</p>.<p>ಸೇತುವೆ ಸ್ಥಳದಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಹಾಗೂ ಸಿಗ್ನಲ್ ಫಲಕಗಳನ್ನು ಅಳವಡಿಸಲು ಆಗ್ರಹಿಸಿ ಸಂಬಂಧಿತರಿಗೆ ಈಚೆಗೆ ಮನವಿಪತ್ರ ಸಲ್ಲಿಸಲಾಗಿದೆ </p><p>-ವೀರೇಶ ಬೋರಗೆ ವ್ಯಾಪಾರಸ್ಥ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>