ಪಟ್ಟಣದ ಶಿಕ್ಷಕರ ಕಾಲೊನಿಯ ದೇವಿ ಮಂದಿರದ ಬಳಿ ಚರಂಡಿ ನೀರಿಗೆ ಮುಕ್ತಿ ಸಿಗುವಂತಿಲ್ಲವಾಗಿದೆ. ಮಳೆಯಾದರೆ ಇಲ್ಲಿ ಬೇರೆ ಬೇರೆ ಕಡೆಯಿಂದ ನೀರು ಸಂಗ್ರಹವಾಗುತ್ತದೆ. ಈ ನೀರು ಮುಂದೆ ಹರಿದು ಹೋಗದೆ ನೈರ್ಮಲ್ಯ ಸಮಸ್ಯೆ ಎದುರಾಗುತ್ತದೆ. ಈ ನಡುವೆ ಹಾವು, ಚೇಳಿನ ಕಾಟದಿಂದ ಇಲ್ಲಿಯ ನಿವಾಸಿಗಳು ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.