<p><strong>ಭಾಲ್ಕಿ: </strong>‘ಶ್ರಾವಣದ ಮಾಸದಲ್ಲಿ ತಿಂಗಳು ಪರ್ಯಂತ ಕೇಳಿರುವ ಶರಣರ ವಚನಗಳ ಚಿಂತನ, ತತ್ವಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕು’ ಎಂದು ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.</p>.<p>ಇಲ್ಲಿನ ಚನ್ನಬಸವಾಶ್ರಮದಲ್ಲಿ ನಡೆದ ವಚನ ದರ್ಶನ ಪ್ರವಚನ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಬಸವಾದಿ ಶರಣರ ವಚನಗಳು ಬರೀ ಹೇಳುವುದು, ಕೇಳುವುದಕ್ಕೆ ಸೀಮಿತವಾಗಿರದೇ ಅವುಗಳನ್ನು ಆಚರಣೆಯಲ್ಲಿ ತರುವ ಅವಶ್ಯಕತೆ ಇದೆ. ನಾವು ನಮ್ಮ ಜೀವನ ಸುಖಿ ಸಮಾಧಾನ ಮಾಡಿಕೊಳ್ಳಬೇಕಾದರೆ ನಡೆ-ನುಡಿ ಒಂದಾಗಿಸಿಕೊಳ್ಳಬೇಕು ಎಂದರು.</p>.<p>ನಮ್ಮ ಜೀವನ ಶರಣರ ಜೀವನ ಆಗಬೇಕಾದರೆ ನಾವು ಸಂಸಾರ, ಮನೆ, ಹೊಲ, ಮಕ್ಕಳು ಬಿಡಬೇಕಾಗಿಲ್ಲ. ಸಂಸಾರದಲ್ಲಿದ್ದುಕೊಂಡೆ ಸದ್ಗತಿ ಪಡೆಯುವ ಮಾರ್ಗವನ್ನು ಶರಣರು ಹೇಳಿದ್ದಾರೆ. ಶರಣರು ಎಲ್ಲವನ್ನು ಇಟ್ಟುಕೊಂಡೇ ಲಿಂಗಾಂಗ ಸಾಮರಸ್ಯವನ್ನು ಪಡೆದಿದ್ದಾರೆ. ಅದಕ್ಕಾಗಿ ನಾವು ಸಂಸಾರದಲ್ಲಿದ್ದರು ಇಲ್ಲದ ಹಾಗೆ ಇರಬೇಕು.</p>.<p>ಕಮಲದ ಹೂ ಕೆಸರಲ್ಲಿಯೇ ಅರಳುತ್ತದೆ. ಆದರೂ ಅದು ಕೆಸರಿಗೆ ಅಂಟಿಕೊಳ್ಳುವುದಿಲ್ಲ. ಹಾಗೆಯೇ ನಮ್ಮ ಜೀವನ ಇರಬೇಕು ಎಂದು ಮಾರ್ಮಿಕ ಉದಾಹರಣೆಗಳೊಂದಿಗೆ ವಿವರಿಸಿದರು.</p>.<p>ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ನಿರಂಜನ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಲ್ಕಿ: </strong>‘ಶ್ರಾವಣದ ಮಾಸದಲ್ಲಿ ತಿಂಗಳು ಪರ್ಯಂತ ಕೇಳಿರುವ ಶರಣರ ವಚನಗಳ ಚಿಂತನ, ತತ್ವಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕು’ ಎಂದು ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.</p>.<p>ಇಲ್ಲಿನ ಚನ್ನಬಸವಾಶ್ರಮದಲ್ಲಿ ನಡೆದ ವಚನ ದರ್ಶನ ಪ್ರವಚನ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಬಸವಾದಿ ಶರಣರ ವಚನಗಳು ಬರೀ ಹೇಳುವುದು, ಕೇಳುವುದಕ್ಕೆ ಸೀಮಿತವಾಗಿರದೇ ಅವುಗಳನ್ನು ಆಚರಣೆಯಲ್ಲಿ ತರುವ ಅವಶ್ಯಕತೆ ಇದೆ. ನಾವು ನಮ್ಮ ಜೀವನ ಸುಖಿ ಸಮಾಧಾನ ಮಾಡಿಕೊಳ್ಳಬೇಕಾದರೆ ನಡೆ-ನುಡಿ ಒಂದಾಗಿಸಿಕೊಳ್ಳಬೇಕು ಎಂದರು.</p>.<p>ನಮ್ಮ ಜೀವನ ಶರಣರ ಜೀವನ ಆಗಬೇಕಾದರೆ ನಾವು ಸಂಸಾರ, ಮನೆ, ಹೊಲ, ಮಕ್ಕಳು ಬಿಡಬೇಕಾಗಿಲ್ಲ. ಸಂಸಾರದಲ್ಲಿದ್ದುಕೊಂಡೆ ಸದ್ಗತಿ ಪಡೆಯುವ ಮಾರ್ಗವನ್ನು ಶರಣರು ಹೇಳಿದ್ದಾರೆ. ಶರಣರು ಎಲ್ಲವನ್ನು ಇಟ್ಟುಕೊಂಡೇ ಲಿಂಗಾಂಗ ಸಾಮರಸ್ಯವನ್ನು ಪಡೆದಿದ್ದಾರೆ. ಅದಕ್ಕಾಗಿ ನಾವು ಸಂಸಾರದಲ್ಲಿದ್ದರು ಇಲ್ಲದ ಹಾಗೆ ಇರಬೇಕು.</p>.<p>ಕಮಲದ ಹೂ ಕೆಸರಲ್ಲಿಯೇ ಅರಳುತ್ತದೆ. ಆದರೂ ಅದು ಕೆಸರಿಗೆ ಅಂಟಿಕೊಳ್ಳುವುದಿಲ್ಲ. ಹಾಗೆಯೇ ನಮ್ಮ ಜೀವನ ಇರಬೇಕು ಎಂದು ಮಾರ್ಮಿಕ ಉದಾಹರಣೆಗಳೊಂದಿಗೆ ವಿವರಿಸಿದರು.</p>.<p>ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ನಿರಂಜನ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>