ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದ ಮುನಿಸ್ವಾಮಿ ಮತ್ತು ಕುಮಾರ ಎಂಬುವವರು ಗಾಯಗೊಂಡವರು.
ಮುನಿಸ್ವಾಮಿ ಅವರು ಪಟ್ಟಣದಲ್ಲಿ ಲಾರಿ ಚಾಲಕರಾಗಿದ್ದು, ಮಂಗಳವಾರ ಎಂದಿನಂತೆ ಕೆಲಸಕ್ಕೆ ತೆರಳುತ್ತಿದ್ದರು. ಇವರನ್ನು ಬಿಟ್ಟು ಬರಲು ಕುಮಾರ ಎಂಬುವವರು ಜೊತೆಗೆ ಹೋಗಿದ್ದರು. ಪಟ್ಟಣದ ಹೊರವಲಯದಲ್ಲಿರುವ ರಾಮಯ್ಯನಕೆರೆ ಬಳಿ ರಸ್ತೆಯಲ್ಲಿ ಬರುತ್ತಿದ್ದಾಗ ಬದಿಯಲ್ಲಿದ್ದ ಆಲದ ಮರ ಏಕಾಏಕಿ ಇವರು ಹೋಗುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಮುರಿದು ಬಿದ್ದಿದೆ.