<p><strong>ಚಿಕ್ಕಬಳ್ಳಾಪುರ:</strong> ಗುರುವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯ ಜನಜೀವನ ತತ್ತರಿಸಿದೆ. ವಿಶೇಷವಾಗಿ ಚಿಕ್ಕಬಳ್ಳಾಪುರದ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚಾರ ವ್ಯತ್ಯಯವಾಯಿತು. ಅಲ್ಲದೆ ತೋಟಗಳು, ರಸ್ತೆಗಳು ಮುಳುಗಡೆಯಾಗಿವೆ.</p>.<p>ಗುರುವಾರ ರಾತ್ರಿ 11ರ ಸುಮಾರಿಗೆ ಆರಂಭವಾದ ಮಳೆ ಶುಕ್ರವಾರ ಬೆಳಗಿನ ಜಾವದವರೆಗೂ ಸುರಿಯಿತು. ಮುಸ್ಟೂರು ಕೆರೆ ಕೋಡಿ ಬಿದ್ದ ಪರಿಣಾಮ ಆ ನೀರು ನಗರದ ಕೆಲವು ಪ್ರದೇಶಗಳ ಕಡೆಗೆ ಹರಿಯಿತು.</p>.<p>ವಿಶೇಷವಾಗಿ ವಾಪಸಂದ್ರ ಭಾಗದಲ್ಲಿ ರಸ್ತೆಗಳು, ದೊಡ್ಡ ಮೋರಿಗಳೇ ಮಳೆಯಿಂದ ಮುಚ್ಚಿ ಹೋಗಿವೆ. ನಗರಸಭೆ ಸಿಬ್ಬಂದಿ ಇಲ್ಲಿನ ರಸ್ತೆಗಳಲ್ಲಿ ಮೋಟರ್ ಇಟ್ಟು ನೀರನ್ನು ರಸ್ತೆಯಿಂದ ಹೊರ ಹಾಕಿದರು. ಜೆಸಿಬಿ ಮೂಲಕ ನೀರು ತೆರವುಗೊಳಿಸಿದರು.</p>.<p>ಈ ಹಿಂದಿನಿಂದಲೂ ಜೋರು ಮಳೆ ಬಂದರೆ ವಾಪಸಂದ್ರದ ಕೆಳಸೇತುವೆ ಮಳೆಯಿಂದ ಮುಳುಗುತ್ತದೆ. ಒಂದೇ ರಾತ್ರಿ ಸುರಿದ ಮಳೆಗೆ ಇಡೀ ಕೆಳಸೇತುವೆ ಜಲಾವೃತವಾಯಿತು. ಕಾರು, ಓಮ್ನಿ, ಬೈಕ್ಗಳು ಈ ನೀರಿನಲ್ಲಿ ಸಿಲುಕಿದವು. ಕಾರುಗಳ ತಳ್ಳಾಟ, ಬೈಕ್ಗಳ ನೂಕಾಟ ಸಾಮಾನ್ಯವಾಗಿತ್ತು. ಇಲ್ಲಿನ ಅವ್ಯವಸ್ಥೆಗೆ ಜನರು ಆಡಳಿತಕ್ಕೆ ಶಪಿಸುತ್ತಲೇ ಸಾಗಿದರು. </p>.<p>ಕೆಳಸೇತುವೆ ಸುತ್ತಮುತ್ತಲಿನ ದ್ರಾಕ್ಷಿ, ಹೂ ಮತ್ತಿತರ ತೋಟಗಳಿಗೆ ಅಪಾರವಾಗಿ ನೀರು ನುಗ್ಗಿತ್ತು. ಇಡೀ ತೋಟಗಳೇ ನೀರಿನಿಂದ ಮುಳಗಿದ್ದವು. ವಾಪಸಂದ್ರದಲ್ಲಿರುವ ರೈತ ಕಿರಣ್ ಅವರ ಮೂರು ಎಕರೆ ದ್ರಾಕ್ಷಿ ತೋಟ ಸಂಪೂರ್ಣ ನೀರಿನಲ್ಲಿ ಮುಳುಗಿದೆ.</p>.<p>ಚಿಕ್ಕಬಳ್ಳಾಪುರದ ಬಿಬಿ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ನಿಂತಿತ್ತು. 24ನೇ ವಾರ್ಡ್ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. </p>.<p>ತಾಲ್ಲೂಕಿನ ಗ್ರಾಮೀಣ ಭಾಗಗಳ ತೋಟಗಳಿಗೆ ನೀರು ನುಗ್ಗಿ ಬೆಳೆಗಳು ಹಾನಿಯಾಗಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ಗುರುವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯ ಜನಜೀವನ ತತ್ತರಿಸಿದೆ. ವಿಶೇಷವಾಗಿ ಚಿಕ್ಕಬಳ್ಳಾಪುರದ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚಾರ ವ್ಯತ್ಯಯವಾಯಿತು. ಅಲ್ಲದೆ ತೋಟಗಳು, ರಸ್ತೆಗಳು ಮುಳುಗಡೆಯಾಗಿವೆ.</p>.<p>ಗುರುವಾರ ರಾತ್ರಿ 11ರ ಸುಮಾರಿಗೆ ಆರಂಭವಾದ ಮಳೆ ಶುಕ್ರವಾರ ಬೆಳಗಿನ ಜಾವದವರೆಗೂ ಸುರಿಯಿತು. ಮುಸ್ಟೂರು ಕೆರೆ ಕೋಡಿ ಬಿದ್ದ ಪರಿಣಾಮ ಆ ನೀರು ನಗರದ ಕೆಲವು ಪ್ರದೇಶಗಳ ಕಡೆಗೆ ಹರಿಯಿತು.</p>.<p>ವಿಶೇಷವಾಗಿ ವಾಪಸಂದ್ರ ಭಾಗದಲ್ಲಿ ರಸ್ತೆಗಳು, ದೊಡ್ಡ ಮೋರಿಗಳೇ ಮಳೆಯಿಂದ ಮುಚ್ಚಿ ಹೋಗಿವೆ. ನಗರಸಭೆ ಸಿಬ್ಬಂದಿ ಇಲ್ಲಿನ ರಸ್ತೆಗಳಲ್ಲಿ ಮೋಟರ್ ಇಟ್ಟು ನೀರನ್ನು ರಸ್ತೆಯಿಂದ ಹೊರ ಹಾಕಿದರು. ಜೆಸಿಬಿ ಮೂಲಕ ನೀರು ತೆರವುಗೊಳಿಸಿದರು.</p>.<p>ಈ ಹಿಂದಿನಿಂದಲೂ ಜೋರು ಮಳೆ ಬಂದರೆ ವಾಪಸಂದ್ರದ ಕೆಳಸೇತುವೆ ಮಳೆಯಿಂದ ಮುಳುಗುತ್ತದೆ. ಒಂದೇ ರಾತ್ರಿ ಸುರಿದ ಮಳೆಗೆ ಇಡೀ ಕೆಳಸೇತುವೆ ಜಲಾವೃತವಾಯಿತು. ಕಾರು, ಓಮ್ನಿ, ಬೈಕ್ಗಳು ಈ ನೀರಿನಲ್ಲಿ ಸಿಲುಕಿದವು. ಕಾರುಗಳ ತಳ್ಳಾಟ, ಬೈಕ್ಗಳ ನೂಕಾಟ ಸಾಮಾನ್ಯವಾಗಿತ್ತು. ಇಲ್ಲಿನ ಅವ್ಯವಸ್ಥೆಗೆ ಜನರು ಆಡಳಿತಕ್ಕೆ ಶಪಿಸುತ್ತಲೇ ಸಾಗಿದರು. </p>.<p>ಕೆಳಸೇತುವೆ ಸುತ್ತಮುತ್ತಲಿನ ದ್ರಾಕ್ಷಿ, ಹೂ ಮತ್ತಿತರ ತೋಟಗಳಿಗೆ ಅಪಾರವಾಗಿ ನೀರು ನುಗ್ಗಿತ್ತು. ಇಡೀ ತೋಟಗಳೇ ನೀರಿನಿಂದ ಮುಳಗಿದ್ದವು. ವಾಪಸಂದ್ರದಲ್ಲಿರುವ ರೈತ ಕಿರಣ್ ಅವರ ಮೂರು ಎಕರೆ ದ್ರಾಕ್ಷಿ ತೋಟ ಸಂಪೂರ್ಣ ನೀರಿನಲ್ಲಿ ಮುಳುಗಿದೆ.</p>.<p>ಚಿಕ್ಕಬಳ್ಳಾಪುರದ ಬಿಬಿ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ನಿಂತಿತ್ತು. 24ನೇ ವಾರ್ಡ್ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. </p>.<p>ತಾಲ್ಲೂಕಿನ ಗ್ರಾಮೀಣ ಭಾಗಗಳ ತೋಟಗಳಿಗೆ ನೀರು ನುಗ್ಗಿ ಬೆಳೆಗಳು ಹಾನಿಯಾಗಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>