<p><strong>ಚಿಕ್ಕಬಳ್ಳಾಪುರ:</strong> ಐತಿಹಾಸಿಕ ಮತ್ತು ರಾಜ್ಯದಲ್ಲಿಯೇ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ತಾಲ್ಲೂಕಿನ ನಂದಿಗಿರಿಧಾಮಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಗಿರಿಧಾಮದಲ್ಲಿ ವಾಸ್ತವ್ಯ ಹೂಡುವವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿ ಇದೆ. </p>.<p>ಗಿರಿಧಾಮದಲ್ಲಿ ವಾಸ್ತವ್ಯ ಹೂಡುವ ಅತಿಥಿಗಳ ಆತಿಥ್ಯವನ್ನು ಭಿನ್ನವಾಗಿಸುವ ಉದ್ದೇಶವನ್ನು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಕೆಎಸ್ಟಿಡಿಸಿ) ಹೊಂದಿದೆ. </p>.<p>ಈ ಹಿನ್ನೆಲೆಯಲ್ಲಿ ಗಿರಿಧಾಮದಲ್ಲಿ ಹಮ್ಮಿಕೊಂಡಿರುವ ಮಯೂರ ಹೋಟೆಲ್ ಘಟಕಗಳ ಸಪ್ತಾಹಕ್ಕೆ ಬುಧವಾರ (ಮೇ 7) ತೆರೆ ಬೀಳಲಿದೆ. ಈ ಸಪ್ತಾಹವು ಭಿನ್ನವಾಗಿ ನಡೆದಿದ್ದು ಪ್ರವಾಸಿಗರ ಮನದಲ್ಲಿ ಅಚ್ಚೊತ್ತಿದೆ. </p>.<p>ರಾಜ್ಯ, ದೇಶದ ನಾನಾ ಭಾಗಗಳ ಜನರಷ್ಟೇ ಅಲ್ಲ ವಿದೇಶಿ ಪ್ರವಾಸಿಗರನ್ನೂ ನಂದಿಗಿರಿಧಾಮ ಸೆಳೆಯುತ್ತಿದೆ. </p>.<p><strong>ಸಪ್ತಾಹದ ವಿಶೇಷ:</strong> ಸಾಮಾನ್ಯವಾಗಿ ಖಾಸಗಿ ಐಶಾರಾಮಿ ಹೋಟೆಲ್ಗಳಲ್ಲಿ ವಾಸ್ತವ್ಯಕ್ಕೆ ಬರುವ ಅತಿಥಿಗಳನ್ನು ಅಲ್ಲಿನ ಸಿಬ್ಬಂದಿ ಸ್ವಾಗತಿಸುವರು. ಕೆಲವು ಹೋಟೆಲ್ಗಳಲ್ಲಿ ವಾಸ್ತವ್ಯಕ್ಕೆ ಬರುವವರಿಗೆ ಹಾರ ಹಾಕಿ ಬರಮಾಡಿಕೊಳ್ಳುವರು. ತಿಲಕವಿಟ್ಟು ಆರತಿ ಬೆಳಗುವರು. </p>.<p>ಇದೇ ಹಾದಿಯಲ್ಲಿಯೇ ನಂದಿ ಗಿರಿಧಾಮದಲ್ಲಿ ಮಯೂರ ಹೋಟೆಲ್ ಘಟಕಗಳ ಸಪ್ತಾಹ ನಡೆಯುತ್ತಿದೆ. ಗಿರಿಧಾಮದಲ್ಲಿ ಒಟ್ಟು 34 ಕೊಠಡಿಗಳು ಇವೆ. ಇಲ್ಲಿ ವಾಸ್ತವ್ಯಕ್ಕೆ ಪ್ರವಾಸಿಗರು ಬಂದಾಗ ಅವರಿಗೆ ಹಾರ ಹಾಕಿ ಸ್ವಾಗತ ಕೋರಲಾಗುತ್ತದೆ. ಆರತಿ ಮಾಡಿ ತಿಲಕ ಇಡಲಾಗುತ್ತದೆ. </p>.<p>ನಂತರ ರಾತ್ರಿ ಕ್ಯಾಂಡಲ್ ಲೈಟ್ ಡಿನ್ನರ್, ಕ್ಯಾಂಪ್ ಫೈರ್, ಟ್ರಕ್ಕಿಂಗ್, ಬಾಳೆ ಎಲೆ ಊಟ, ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು, ಯೋಗಾಭ್ಯಾಸ ಮಾಡಿಸುವುದು ಸಪ್ತಾಹದ ಭಾಗವಾಗಿವೆ. ಈ ಎಲ್ಲವೂ ಸಪ್ತಾಹದ ದಿನಗಳಲ್ಲಿ ನಡೆಯುತ್ತಿವೆ. </p>.<p>ಯಾವ ಅವಧಿಯಲ್ಲಿ ಯಾವ ಕಾರ್ಯಕ್ರಮ ನಡೆಯುತ್ತದೆ ಎನ್ನುವ ಮಾಹಿತಿಯನ್ನು ನಿಗಮದ ಸಿಬ್ಬಂದಿ ಅತಿಥಿಗಳಿಗೆ ಆರಂಭದಲ್ಲಿಯೇ ನೀಡುತ್ತಾರೆ.</p>.<p>ಸಾಂಪ್ರದಾಯಿಕ ಸ್ವಾಗತ, ದೇಸಿ ಆಟಗಳ ಪರಿಚಯ, ಐಶಾರಾಮಿ ಹೋಟೆಲ್ಗಳಲ್ಲಿ ದೊರೆಯುವ ಸೌಲಭ್ಯಗಳು ಸಹ ಸಪ್ತಾಹದಲ್ಲಿ ದೊರೆಯುತ್ತಿವೆ. ಅತಿಥಿಗಳು ಈ ಸಪ್ತಾಹದ ಚಟುವಟಿಕೆಗಳನ್ನು ಮನಸಾರೆ ಮೆಚ್ಚುತ್ತಿದ್ದಾರೆ. ಸಪ್ತಾಹಕ್ಕೆ ಸಂಬಂಧಿಸಿದ ಪ್ರತಿಕ್ರಿಯೆ ಪುಸ್ತಕದಲ್ಲಿ ಮನಸಾರೆ ಹೊಗಳಿಕೆಯ ಬರಹಗಳಿವೆ. </p>.<p>‘ರಾಜ್ಯದಾದ್ಯಂತ ಮಯೂರ ಹೋಟೆಲ್ ಘಟಕಗಳ ಸಪ್ತಾಹ ಆಚರಿಸಲು ನಿರ್ಧರಿಸಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರ ಮುತುವರ್ಜಿಯಿಂದ ನಂದಿಗಿರಿಧಾಮಕ್ಕೆ ಮೊದಲ ಅವಕಾಶ ದೊರೆತಿದೆ’ ಎಂದು ಗಿರಿಧಾಮದ ನಿಗಮದ ಸಿಬ್ಬಂದಿ ತಿಳಿಸುವರು.</p>.<p>‘ಭಿನ್ನ, ವಿಭಿನ್ನವಾಗಿ ಸಪ್ತಾಹ ಆಚರಿಸುತ್ತಿದ್ದೇವೆ. ಅತಿಥಿಗಳಿಂದ ಉತ್ತಮ ಪ್ರತಿಕ್ರಿಯೆ ಸಹ ದೊರೆಯುತ್ತಿದೆ. ವಾರಾಂತ್ಯದಲ್ಲಿ 62ರಿಂದ 70 ಅತಿಥಿಗಳು ವಾಸ್ತವ್ಯ ಹೂಡಿದ್ದಾರೆ. ಈ ಒಂದು ವಾರದಲ್ಲಿ 200ಕ್ಕಿಂತ ಹೆಚ್ಚು ಅತಿಥಿಗಳು ನಮ್ಮ ಆತಿಥ್ಯ ಸ್ವೀಕರಿಸಿದ್ದಾರೆ ಎಂದರು.</p>.<p>ಸಪ್ತಾಹ ಪೂರ್ಣವಾದ ತರುವಾಯ ಕ್ಯಾಂಡಲ್ ಲೈಟ್ ಡಿನ್ನರ್, ಕ್ಯಾಂಪ್ ಪೈರ್ ಮುಂದುವರಿಸುತ್ತೇವೆ. ಯೋಗ ಕಾರ್ಯಕ್ರಮದಲ್ಲಿ ಹೆಚ್ಚು ಮಂದಿ ಭಾಗಿಯಾಗಿದ್ದರು. ಮಂಗಳವಾರ ಬೆಳಿಗ್ಗೆ ಅತಿಥಿಗಳನ್ನು ಬೋಗ ನಂದೀಶ್ವರ ದೇಗುಲಕ್ಕೆ ಕರೆದುಕೊಂಡು ಹೋಗುತ್ತೇವೆ. ನಂತರ ಸುಲ್ತಾನಪೇಟೆಯ ಮೆಟ್ಟಿಲುಗಳ ಮಾರ್ಗದಲ್ಲಿ ಗಿರಿಧಾಮಕ್ಕೆ ಟ್ರಕ್ಕಿಂಗ್ ಮಾಡಿಸಲಾಗುವುದು ಎಂದರು.</p>.<p>ಈಗಾಗಲೇ ಪ್ರವಾಸಿಗರು ಗಿರಿಧಾಮದಲ್ಲಿ ಹೆಚ್ಚು ಸಮಯ ಕಳೆಯುವಂತೆ ಮಾಡುವ ಮತ್ತು ದೇಸಿ ಆಟಗಳನ್ನು ಪರಿಚಯಿಸುವ ಕೆಎಸ್ಟಿಡಿಸಿ ದೇಸಿ ಆಟಗಳನ್ನು ಗಿರಿಧಾಮದಲ್ಲಿ ಆಡಿಸುತ್ತಿದೆ. </p>.<p>ಈ ಆಟಗಳೂ ಅಷ್ಟೇ ಪ್ರವಾಸಿಗರನ್ನು ಹೆಚ್ಚು ಸೆಳೆಯುತ್ತಿದೆ. ಚಿಕ್ಕಮಕ್ಕಳು, ಪ್ರೌಢರು, ವೃದ್ಧರು ಹೀಗೆ ಎಲ್ಲರೂ ದೇಸಿ ಆಟಗಳಿಗೆ ಮನಸೋತು, ಗಿರಿಧಾಮದ ಪ್ರಕೃತಿ ಆಹ್ಲಾದಿಸುವ ಜೊತೆಗೆ ಆಟಗಳಲ್ಲಿಯೂ ತೊಡಗುತ್ತಿದ್ದಾರೆ.</p>.<p>ಹೀಗೆ ಗಿರಿಧಾಮಕ್ಕೆ ಬರುವ ಪ್ರವಾಸಿಗರನ್ನು ಹೆಚ್ಚು ಸೆಳೆಯಲು ಮತ್ತು ಅವರು ಗಿರಿಧಾಮದಲ್ಲಿ ಹೆಚ್ಚು ಕಾಲ ಕಳೆಯುವಂತೆ ಮಾಡಲು ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.</p>.<p><strong>ಕ್ಯಾಂಡಲ್ ಲೈಟ್ ಡಿನ್ನರ್ಗೆ ಬೇಡಿಕೆ</strong> </p><p>ನಂದಿಬೆಟ್ಟದಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ ಮಾಡಬೇಕು ಎನ್ನುವುದು ಬಹಳಷ್ಟು ಮಂದಿಯ ಆಸೆ ಆಗಿರುತ್ತದೆ. ಅತಿಥಿಗಳು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ವಾರ ನಮ್ಮ ಸ್ನೇಹಿತರ ವಿವಾಹವಿದೆ. ಅವರಿಗೂ ಕ್ಯಾಂಡಲ್ ಲೈಟ್ ಡಿನ್ನರ್ ವ್ಯವಸ್ಥೆ ಮಾಡಿಕೊಡುವಿರಾ ಎಂದು ಕೇಳಿದ್ದಾರೆ. ಒಪ್ಪಿಗೆ ನೀಡಿದ್ದೇವೆ ಎಂದು ನಿಗಮದ ಸಿಬ್ಬಂದಿ ತಿಳಿಸುವರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ಐತಿಹಾಸಿಕ ಮತ್ತು ರಾಜ್ಯದಲ್ಲಿಯೇ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ತಾಲ್ಲೂಕಿನ ನಂದಿಗಿರಿಧಾಮಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಗಿರಿಧಾಮದಲ್ಲಿ ವಾಸ್ತವ್ಯ ಹೂಡುವವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿ ಇದೆ. </p>.<p>ಗಿರಿಧಾಮದಲ್ಲಿ ವಾಸ್ತವ್ಯ ಹೂಡುವ ಅತಿಥಿಗಳ ಆತಿಥ್ಯವನ್ನು ಭಿನ್ನವಾಗಿಸುವ ಉದ್ದೇಶವನ್ನು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಕೆಎಸ್ಟಿಡಿಸಿ) ಹೊಂದಿದೆ. </p>.<p>ಈ ಹಿನ್ನೆಲೆಯಲ್ಲಿ ಗಿರಿಧಾಮದಲ್ಲಿ ಹಮ್ಮಿಕೊಂಡಿರುವ ಮಯೂರ ಹೋಟೆಲ್ ಘಟಕಗಳ ಸಪ್ತಾಹಕ್ಕೆ ಬುಧವಾರ (ಮೇ 7) ತೆರೆ ಬೀಳಲಿದೆ. ಈ ಸಪ್ತಾಹವು ಭಿನ್ನವಾಗಿ ನಡೆದಿದ್ದು ಪ್ರವಾಸಿಗರ ಮನದಲ್ಲಿ ಅಚ್ಚೊತ್ತಿದೆ. </p>.<p>ರಾಜ್ಯ, ದೇಶದ ನಾನಾ ಭಾಗಗಳ ಜನರಷ್ಟೇ ಅಲ್ಲ ವಿದೇಶಿ ಪ್ರವಾಸಿಗರನ್ನೂ ನಂದಿಗಿರಿಧಾಮ ಸೆಳೆಯುತ್ತಿದೆ. </p>.<p><strong>ಸಪ್ತಾಹದ ವಿಶೇಷ:</strong> ಸಾಮಾನ್ಯವಾಗಿ ಖಾಸಗಿ ಐಶಾರಾಮಿ ಹೋಟೆಲ್ಗಳಲ್ಲಿ ವಾಸ್ತವ್ಯಕ್ಕೆ ಬರುವ ಅತಿಥಿಗಳನ್ನು ಅಲ್ಲಿನ ಸಿಬ್ಬಂದಿ ಸ್ವಾಗತಿಸುವರು. ಕೆಲವು ಹೋಟೆಲ್ಗಳಲ್ಲಿ ವಾಸ್ತವ್ಯಕ್ಕೆ ಬರುವವರಿಗೆ ಹಾರ ಹಾಕಿ ಬರಮಾಡಿಕೊಳ್ಳುವರು. ತಿಲಕವಿಟ್ಟು ಆರತಿ ಬೆಳಗುವರು. </p>.<p>ಇದೇ ಹಾದಿಯಲ್ಲಿಯೇ ನಂದಿ ಗಿರಿಧಾಮದಲ್ಲಿ ಮಯೂರ ಹೋಟೆಲ್ ಘಟಕಗಳ ಸಪ್ತಾಹ ನಡೆಯುತ್ತಿದೆ. ಗಿರಿಧಾಮದಲ್ಲಿ ಒಟ್ಟು 34 ಕೊಠಡಿಗಳು ಇವೆ. ಇಲ್ಲಿ ವಾಸ್ತವ್ಯಕ್ಕೆ ಪ್ರವಾಸಿಗರು ಬಂದಾಗ ಅವರಿಗೆ ಹಾರ ಹಾಕಿ ಸ್ವಾಗತ ಕೋರಲಾಗುತ್ತದೆ. ಆರತಿ ಮಾಡಿ ತಿಲಕ ಇಡಲಾಗುತ್ತದೆ. </p>.<p>ನಂತರ ರಾತ್ರಿ ಕ್ಯಾಂಡಲ್ ಲೈಟ್ ಡಿನ್ನರ್, ಕ್ಯಾಂಪ್ ಫೈರ್, ಟ್ರಕ್ಕಿಂಗ್, ಬಾಳೆ ಎಲೆ ಊಟ, ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು, ಯೋಗಾಭ್ಯಾಸ ಮಾಡಿಸುವುದು ಸಪ್ತಾಹದ ಭಾಗವಾಗಿವೆ. ಈ ಎಲ್ಲವೂ ಸಪ್ತಾಹದ ದಿನಗಳಲ್ಲಿ ನಡೆಯುತ್ತಿವೆ. </p>.<p>ಯಾವ ಅವಧಿಯಲ್ಲಿ ಯಾವ ಕಾರ್ಯಕ್ರಮ ನಡೆಯುತ್ತದೆ ಎನ್ನುವ ಮಾಹಿತಿಯನ್ನು ನಿಗಮದ ಸಿಬ್ಬಂದಿ ಅತಿಥಿಗಳಿಗೆ ಆರಂಭದಲ್ಲಿಯೇ ನೀಡುತ್ತಾರೆ.</p>.<p>ಸಾಂಪ್ರದಾಯಿಕ ಸ್ವಾಗತ, ದೇಸಿ ಆಟಗಳ ಪರಿಚಯ, ಐಶಾರಾಮಿ ಹೋಟೆಲ್ಗಳಲ್ಲಿ ದೊರೆಯುವ ಸೌಲಭ್ಯಗಳು ಸಹ ಸಪ್ತಾಹದಲ್ಲಿ ದೊರೆಯುತ್ತಿವೆ. ಅತಿಥಿಗಳು ಈ ಸಪ್ತಾಹದ ಚಟುವಟಿಕೆಗಳನ್ನು ಮನಸಾರೆ ಮೆಚ್ಚುತ್ತಿದ್ದಾರೆ. ಸಪ್ತಾಹಕ್ಕೆ ಸಂಬಂಧಿಸಿದ ಪ್ರತಿಕ್ರಿಯೆ ಪುಸ್ತಕದಲ್ಲಿ ಮನಸಾರೆ ಹೊಗಳಿಕೆಯ ಬರಹಗಳಿವೆ. </p>.<p>‘ರಾಜ್ಯದಾದ್ಯಂತ ಮಯೂರ ಹೋಟೆಲ್ ಘಟಕಗಳ ಸಪ್ತಾಹ ಆಚರಿಸಲು ನಿರ್ಧರಿಸಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರ ಮುತುವರ್ಜಿಯಿಂದ ನಂದಿಗಿರಿಧಾಮಕ್ಕೆ ಮೊದಲ ಅವಕಾಶ ದೊರೆತಿದೆ’ ಎಂದು ಗಿರಿಧಾಮದ ನಿಗಮದ ಸಿಬ್ಬಂದಿ ತಿಳಿಸುವರು.</p>.<p>‘ಭಿನ್ನ, ವಿಭಿನ್ನವಾಗಿ ಸಪ್ತಾಹ ಆಚರಿಸುತ್ತಿದ್ದೇವೆ. ಅತಿಥಿಗಳಿಂದ ಉತ್ತಮ ಪ್ರತಿಕ್ರಿಯೆ ಸಹ ದೊರೆಯುತ್ತಿದೆ. ವಾರಾಂತ್ಯದಲ್ಲಿ 62ರಿಂದ 70 ಅತಿಥಿಗಳು ವಾಸ್ತವ್ಯ ಹೂಡಿದ್ದಾರೆ. ಈ ಒಂದು ವಾರದಲ್ಲಿ 200ಕ್ಕಿಂತ ಹೆಚ್ಚು ಅತಿಥಿಗಳು ನಮ್ಮ ಆತಿಥ್ಯ ಸ್ವೀಕರಿಸಿದ್ದಾರೆ ಎಂದರು.</p>.<p>ಸಪ್ತಾಹ ಪೂರ್ಣವಾದ ತರುವಾಯ ಕ್ಯಾಂಡಲ್ ಲೈಟ್ ಡಿನ್ನರ್, ಕ್ಯಾಂಪ್ ಪೈರ್ ಮುಂದುವರಿಸುತ್ತೇವೆ. ಯೋಗ ಕಾರ್ಯಕ್ರಮದಲ್ಲಿ ಹೆಚ್ಚು ಮಂದಿ ಭಾಗಿಯಾಗಿದ್ದರು. ಮಂಗಳವಾರ ಬೆಳಿಗ್ಗೆ ಅತಿಥಿಗಳನ್ನು ಬೋಗ ನಂದೀಶ್ವರ ದೇಗುಲಕ್ಕೆ ಕರೆದುಕೊಂಡು ಹೋಗುತ್ತೇವೆ. ನಂತರ ಸುಲ್ತಾನಪೇಟೆಯ ಮೆಟ್ಟಿಲುಗಳ ಮಾರ್ಗದಲ್ಲಿ ಗಿರಿಧಾಮಕ್ಕೆ ಟ್ರಕ್ಕಿಂಗ್ ಮಾಡಿಸಲಾಗುವುದು ಎಂದರು.</p>.<p>ಈಗಾಗಲೇ ಪ್ರವಾಸಿಗರು ಗಿರಿಧಾಮದಲ್ಲಿ ಹೆಚ್ಚು ಸಮಯ ಕಳೆಯುವಂತೆ ಮಾಡುವ ಮತ್ತು ದೇಸಿ ಆಟಗಳನ್ನು ಪರಿಚಯಿಸುವ ಕೆಎಸ್ಟಿಡಿಸಿ ದೇಸಿ ಆಟಗಳನ್ನು ಗಿರಿಧಾಮದಲ್ಲಿ ಆಡಿಸುತ್ತಿದೆ. </p>.<p>ಈ ಆಟಗಳೂ ಅಷ್ಟೇ ಪ್ರವಾಸಿಗರನ್ನು ಹೆಚ್ಚು ಸೆಳೆಯುತ್ತಿದೆ. ಚಿಕ್ಕಮಕ್ಕಳು, ಪ್ರೌಢರು, ವೃದ್ಧರು ಹೀಗೆ ಎಲ್ಲರೂ ದೇಸಿ ಆಟಗಳಿಗೆ ಮನಸೋತು, ಗಿರಿಧಾಮದ ಪ್ರಕೃತಿ ಆಹ್ಲಾದಿಸುವ ಜೊತೆಗೆ ಆಟಗಳಲ್ಲಿಯೂ ತೊಡಗುತ್ತಿದ್ದಾರೆ.</p>.<p>ಹೀಗೆ ಗಿರಿಧಾಮಕ್ಕೆ ಬರುವ ಪ್ರವಾಸಿಗರನ್ನು ಹೆಚ್ಚು ಸೆಳೆಯಲು ಮತ್ತು ಅವರು ಗಿರಿಧಾಮದಲ್ಲಿ ಹೆಚ್ಚು ಕಾಲ ಕಳೆಯುವಂತೆ ಮಾಡಲು ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.</p>.<p><strong>ಕ್ಯಾಂಡಲ್ ಲೈಟ್ ಡಿನ್ನರ್ಗೆ ಬೇಡಿಕೆ</strong> </p><p>ನಂದಿಬೆಟ್ಟದಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ ಮಾಡಬೇಕು ಎನ್ನುವುದು ಬಹಳಷ್ಟು ಮಂದಿಯ ಆಸೆ ಆಗಿರುತ್ತದೆ. ಅತಿಥಿಗಳು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ವಾರ ನಮ್ಮ ಸ್ನೇಹಿತರ ವಿವಾಹವಿದೆ. ಅವರಿಗೂ ಕ್ಯಾಂಡಲ್ ಲೈಟ್ ಡಿನ್ನರ್ ವ್ಯವಸ್ಥೆ ಮಾಡಿಕೊಡುವಿರಾ ಎಂದು ಕೇಳಿದ್ದಾರೆ. ಒಪ್ಪಿಗೆ ನೀಡಿದ್ದೇವೆ ಎಂದು ನಿಗಮದ ಸಿಬ್ಬಂದಿ ತಿಳಿಸುವರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>