<p><strong>ಜೋಗಿಮಕ್ಕಿ(ಎನ್.ಆರ್.ಪುರ): </strong>ಮನುಷ್ಯ ಹುಟ್ಟಿನಿಂದ ಮರಣದವರೆಗೆ 16 ಸಂಸ್ಕಾರಗಳನ್ನು ಮಾಡಬೇಕಿದ್ದು ಬ್ರಾಹ್ಮಣರು ಎಲ್ಲಾ ಸಂಸ್ಕಾರವನ್ನು ಮುಂದುವರಿಸಿಕೊಂಡು ಹೋಗಿ ಮುಂದಿನ ಯುವ ಜನಾಂಗಕ್ಕೆ ಹಸ್ತಾಂತರಿಸ ಬೇಕಾಗಿದೆ ಎಂದು ನಿವೃತ್ತ ಶಿಕ್ಷಕ ಮಹದೇವಯ್ಯ ತಿಳಿಸಿದರು.</p>.<p>ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಗಿಮಕ್ಕಿಯ ಜಗದೀಶ್ ಮನೆ ಆವರಣದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಯುವ ಬಳಗದ ಆಶ್ರಯದಲ್ಲಿ ಜೋಗಿಮಕ್ಕಿ ಚಂದ್ರಶೇಖರಯ್ಯ ಸಂಸ್ಮರಣೆ ಅಂಗವಾಗಿ ಆಯೋಜಿಸಿದ್ದ ನಾವು ಮತ್ತು ಸಂಸ್ಕಾರ ಎಂಬ ವಿಷಯದ ಬಗ್ಗೆ ಮಾತನಾಡಿದರು.</p>.<p>ಶಾರದ ಪೀಠದ ಜಗದ್ಗುರುಗಳ ಸಲಹೆಯಂತೆ ಗಾಯತ್ರಿ ಜಪ ಮತ್ತು ಲಲಿತಾ ಸಹಸ್ರನಾಮ ಮಾಡುತ್ತಿರುವುದು ಸಮುದಾಯದವರಿಗೆ ಧಾರ್ಮಿಕ ಪ್ರಜ್ಞೆ ಹೆಚ್ಚಿಸುವಲ್ಲಿ ನೆರವಾಗಿದೆ ಎಂದರು.</p>.<p>ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಕೇಂದ್ರ ಸಮಿತಿ ಅಧ್ಯಕ್ಷ ವಿಜಯರಂಗಕೋಟೆತೋಟ ಮಾತನಾಡಿ,ಪ್ರತಿ ದಿನವೂ ಸಂಧ್ಯಾವಂದನೆ, ದೇವರ ಪೂಜೆಯನ್ನು ಶ್ರದ್ಧೆಯಿಂದ ಮಾಡುವುದು ಕರ್ತವ್ಯವಾಗಿದೆ ಎಂದರು.</p>.<p>ಅಧ್ಯಕ್ಷತೆಯನ್ನು ನರಸಿಂಹರಾಜಪುರ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಸೇತುವೆಮನೆ ಸುಬ್ರಹ್ಮಣ್ಯ ವಹಿಸಿದ್ದರು.</p>.<p>ಮುಖಂಡರಾದ ಜೋಗಿಮಕ್ಕೆ ಜಗದೀಶ್,ಕೆರೆಮನೆ ಗೋಪಾಲಕೃಷ್ಣ,ಚೈತ್ರಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೋಗಿಮಕ್ಕಿ(ಎನ್.ಆರ್.ಪುರ): </strong>ಮನುಷ್ಯ ಹುಟ್ಟಿನಿಂದ ಮರಣದವರೆಗೆ 16 ಸಂಸ್ಕಾರಗಳನ್ನು ಮಾಡಬೇಕಿದ್ದು ಬ್ರಾಹ್ಮಣರು ಎಲ್ಲಾ ಸಂಸ್ಕಾರವನ್ನು ಮುಂದುವರಿಸಿಕೊಂಡು ಹೋಗಿ ಮುಂದಿನ ಯುವ ಜನಾಂಗಕ್ಕೆ ಹಸ್ತಾಂತರಿಸ ಬೇಕಾಗಿದೆ ಎಂದು ನಿವೃತ್ತ ಶಿಕ್ಷಕ ಮಹದೇವಯ್ಯ ತಿಳಿಸಿದರು.</p>.<p>ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಗಿಮಕ್ಕಿಯ ಜಗದೀಶ್ ಮನೆ ಆವರಣದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಯುವ ಬಳಗದ ಆಶ್ರಯದಲ್ಲಿ ಜೋಗಿಮಕ್ಕಿ ಚಂದ್ರಶೇಖರಯ್ಯ ಸಂಸ್ಮರಣೆ ಅಂಗವಾಗಿ ಆಯೋಜಿಸಿದ್ದ ನಾವು ಮತ್ತು ಸಂಸ್ಕಾರ ಎಂಬ ವಿಷಯದ ಬಗ್ಗೆ ಮಾತನಾಡಿದರು.</p>.<p>ಶಾರದ ಪೀಠದ ಜಗದ್ಗುರುಗಳ ಸಲಹೆಯಂತೆ ಗಾಯತ್ರಿ ಜಪ ಮತ್ತು ಲಲಿತಾ ಸಹಸ್ರನಾಮ ಮಾಡುತ್ತಿರುವುದು ಸಮುದಾಯದವರಿಗೆ ಧಾರ್ಮಿಕ ಪ್ರಜ್ಞೆ ಹೆಚ್ಚಿಸುವಲ್ಲಿ ನೆರವಾಗಿದೆ ಎಂದರು.</p>.<p>ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಕೇಂದ್ರ ಸಮಿತಿ ಅಧ್ಯಕ್ಷ ವಿಜಯರಂಗಕೋಟೆತೋಟ ಮಾತನಾಡಿ,ಪ್ರತಿ ದಿನವೂ ಸಂಧ್ಯಾವಂದನೆ, ದೇವರ ಪೂಜೆಯನ್ನು ಶ್ರದ್ಧೆಯಿಂದ ಮಾಡುವುದು ಕರ್ತವ್ಯವಾಗಿದೆ ಎಂದರು.</p>.<p>ಅಧ್ಯಕ್ಷತೆಯನ್ನು ನರಸಿಂಹರಾಜಪುರ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಸೇತುವೆಮನೆ ಸುಬ್ರಹ್ಮಣ್ಯ ವಹಿಸಿದ್ದರು.</p>.<p>ಮುಖಂಡರಾದ ಜೋಗಿಮಕ್ಕೆ ಜಗದೀಶ್,ಕೆರೆಮನೆ ಗೋಪಾಲಕೃಷ್ಣ,ಚೈತ್ರಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>